Search This Blog

Thursday, December 26, 2019

     ಎಲ್ಲಾ ಪಾಠ, ಪದ್ಯ ಮತ್ತು ಪೂರಕ ಪಾಠದ ಒಂದು ವಾಕ್ಯ, ೩-೪ ವಾಕ್ಯ, ಕವಿಪರಿಚಯ ಮತ್ತು ಪದ್ಯಕಂಠ ಪಾಠ. ( ೩೭ ಅಂಕದ ಪ್ರಶ್ನೆಗಳು )
  ಒಂದು ವಾಕ್ಯದಲ್ಲಿ ಉತ್ತರಿಸಿ 
.  ರಾಹಿಲನು ಯಾರು?
          : ರಾಹಿಲನು ಒಬ್ಬ ಸೇನಾ ವೈದ್ಯ ( ಡಾಕ್ಟರ್)
.  ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು?
          : ಔಷಧ ಮತ್ತು ಶಸ್ತ್ರ ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು       .
.  ಗಡಿ ಪ್ರದೇಶದಲ್ಲಿ ’ಬ್ಲಾಕ್ ಔಟ್’ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ?
          :   ಬ್ಲಾಕ್ ಔಟ್
.  ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭಿರವಾದ ಮಾತು ಯಾವುದು?
          :   -" ನಾನು ಯುದ್ಧ  ಮಾಡುವ ಮೂರ್ಖರ ಕಡೆಯವನಲ್ಲ,  ಸಂಕಷ್ಟಕ್ಕೀಡಾದ
         ಮನುಷ್ಯರ   ಕಡೆಯವನು."
.  ಯುದ್ಧದ ಬಗೆಗೆ ಮುದುಕಿಯ ಅಭಿಪ್ರಾಯವೇನು?
          :  -" ಯುದ್ಧವು ಎಲ್ಲರ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು."
.  ಶ್ರೀರಾಮನ ತಂದೆಯ ಹೆಸರೇನು?
          :   ದಶರಥ ರಾಜ.
.  ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು?
          :   " ಹೂವು, ಮಧುಪರ್ಕ ಮತ್ತು ರುಚಿಕರ  ಹಣ್ಣು ಹಣ್ಣು  ಹಂಪಲುಗಳನ್ನು" 
                                                                                                                                                                .  ೮. ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
                :   ಶಬರಿ.
.  ರಾಮ-ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
         :  ದನು ( ಕಬಂಧ)
೧೦. ಶಬರಿ ಗೀತನಾಟಕದ ಕರ್ತೃ ಯಾರು?
          :  ಪು. ತಿ. ನರಸಿಂಹಾಚಾರ್
೧೨. ಲಂಡನ್ನಿನ ರಸ್ತೆಗಳ ನಡುನಡುವೆ ಟ್ರಾಮ ಬಸ್ಸುಗಳು ಬಹಳ ಹೊತ್ತ
        ನಿಲ್ಲುವುದನ್ನುತಪ್ಪಿಸಲು ಮಾಡಿರುವ ವ್ಯವಸ್ಥೆಯೇನು?
          :  ಭೂಗರ್ಭದಲ್ಲಿ ಗಾಡಿಯನ್ನು ಒಯ್ಯುವ
೧೩.  ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರೇನು?
          :   ವೂಲವರ್ಥ
೧೪.  ನೆಲ್ಸನ್ ರವರ ಮೂರ್ತಿಯಿರುವ ಸ್ಥಳದ ಹೆಸರೇನು?
          :  ಟ್ರಾಫಲ್ಗಾರ್ ಸ್ಕ್ವೇರ್
೧೫.  ವೆಸ್ಟ್ ಮಿನಿಸ್ಟರ್ ಅಬೆ ಯಾರ ಸ್ಮಾರಕವಾಗಿದೆ?
          :  ಸಂತರ, ಸಾರ್ವಭೌಮರ, ಕವಿಪುಂಗವರ ಸ್ಮಾರಕ
೧೬.  ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಯಾವುದು?
          :  ಚೇರಿಂಗ ಕ್ರಾಸ್
೧೭.  " ವೆಸ್ಟ್ ಮಿನುಸ್ಟರ್ ಅಬೆ" ಸಂದರ್ಶನ ಎಂಬ ವಿಷಯದ ಮೇಲೆ
       ನಿಂಬಂಧಗಳನ್ನು ಬರೆದವರು ಯಾರು?
          :  ಗೋಲ್ಡಸ್ಮಿತ್ ಹಾಗೂ ಎಡಿಸನ್
೧೮.  ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?
          :  ಕ್ರಿ.. ೧೮೯೫
೧೯.  ನಾಲ್ವಡಿ ಕೃಷ್ಣರಾಜ ಪಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು?
          :  ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ.
೨೦. ಏಷ್ಯಾಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ
      ಯಾವುದು?
          :  ಶಿವನ ಸಮುದ್ರ
೨೧.  ಬ್ರೀಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು
       ನೀಡಿ ಗೌರವಿಸಿತು?
          :  ’ ಸರ್ ಪದವಿ
೨೨.  ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು?
          :  ನಾಲ್ವಡಿ ಕೃಷ್ಣರಾಜ ಒಡೆಯರು
೨೩. ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು
       ಮಾಡಲಾಗುತ್ತದೆ?
          :   ಎಂಜಿನಿಯರ್ಸ್ ದಿನಾಚರಣೆ
೨೪.  ಇಂದಲ್ಲ-ನಾಳೆ ಫಲ ಕೊಡುವ ಅಂಶಗಳಾವುವು?
          :  ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ
೨೫.  ಮನೆಮಂಚಮ್ಮ ಯಾರು?
          :  ಗ್ರಾಮದೇವತೆ
೨೬.  ಶಿವಾನುಭವ ಶಬ್ಧಕೋಶ ಪುಸ್ತಕ ಬರೆದವರು ಯಾರು?
          : . ಗು. ಹಳಕಟ್ಟಿ
೨೭.  ವಚನಕಾರರಿಗೆ ಯಾವುದು ದೇವರಾಗಿತ್ತು?
          :  ಅವರವರ ಪ್ರಜ್ಞೆಯೇ ದೇವರು
೨೮.  ಅಶೋಕ ಪೈ ಅವರ ವೃತ್ತಿ ಯಾವುದು? 
          :  ಮನೋವೈದ್ಯರು
೨೯.  ದೇವನೂರರ ನನ್ನ ದೇವರು ಯಾರೆಂಬುದನ್ನು ಸ್ಪಷ್ಟೀಕರಿಸಿ.
          :  ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು
                      ಇಟ್ಟರೆ ಅದೆ ನನ್ನದೇವರು.
೩೦.  ಭಗವದ್ಗೀತೆಯನ್ನು ರಚಿಸಿದವರು ಯಾರು?
          :  ವೇದವ್ಯಾಸರು
೩೧. ಹುಲಿಗೆ ಪರಮಾನಂದವಾಗಲು ಕಾರಣವೇನು?
          : ಶಾನುಭೋಗರ ದುಂಡುದುಂಡಾದ ಶರೀರವನ್ನು ನೋಡಿ
೩೨.  ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?
          :  ಹುಲಿಗೆ ತಮ್ಮ ಮುಖದರ್ಶನವಾಗದಂತೆ ತಪ್ಪಿಸಿಕೊಳ್ಳವ
                      ದೊಂಬರಾಟದಲ್ಲಿ ಶಾನುಭೋಗರಿಗೆ ತಲೆ ಸುತ್ತಲಾರಂಭಿಸಿತು.
೩೩.  ಶಾನುಭೋಗರ ಬ್ರಹ್ಮಾಸ್ತ್ರ ಯಾವುದು?
          :  ಖಿರ್ದಿ ಪುಸ್ತಕ
೩೪.  ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು?
          :  ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸಿತು.
೩೫. ವೃಕ್ಷಸಾಕ್ಷಿ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ?
          :   ಕರ್ಣಾಟಕ ಪಂಚತಂತ್ರಂ
೩೬.  ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು?
          : ಹೊನ್ನಿನ ಕಳ್ಳತನ
೩೭.  ದರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು?
          :  " ಆಲದ ಮರವೇ ಸಾಕ್ಷಿ" ಎಂದು ಹೇಳಿದ್ದನ್ನು ಕೇಳಿ
೩೮.  ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು?
          :  ದೇವರು, ಗುರುಗಳು, ವೇದಾಧ್ಯಯನ ನಿರತರನ್ನು ಪೂಜೆ ಮಾಡುತ್ತ ಕಳೆದನು.
೩೯.  ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು?
          :  ವೃಕ್ಷಸಾಕ್ಷಿಯನ್ನು ಕೇಳಲು
೪೦.  ಸುಕುಮಾರಸ್ವಾಮಿಯ ತಂದೆತಾಯಿಗಳ ಹೆಸರೇನು?
          :  ಸೂರದತ್ತ-ಯಶೋಭದ್ರೆ
೪೧.  ಸುಕುಮಾರಸ್ವಾಮಿಗೆ ಯಾವ ಪಟ್ಟವನ್ನು ಕಟ್ಟಲಾಯಿತು?
          : ಸೆಟ್ಟಿಯ ಪಟ್ಟ
೪೨.  ನೈಮಿತ್ತಿಕನು  ಸುಕುಮಾರಸ್ವಾಮಿಯ ಬಗ್ಗೆ ಏನು ಹೇಳಿದನು?
          :  ಋಷಿಗಳನ್ನು ಕಂಡಾಗ ತಪಸ್ಸಿಗೆ ಹೊರಡುತ್ತಾನೆ.
೪೩.  ಯಶೋಭದ್ರೆಯು ತನ್ನ ರತ್ನಗಂಬಳಿಗಳನ್ನು ಯಾರಿಗೆ ಕೊಟ್ಟಳು?
          : ತನ್ನ ಸೊಸೆಯರಿಗೆ
೪೪.  ಅರಸ ವೃಷಭಾಂಕನ ಉಂಗುರವು ಯಾವಾಗ ಕೆಳಕ್ಕೆ ಬಿದ್ದಿತು?
          :  ಸ್ನಾನ ಮಾಡುವಾಗ
       
ಪದ್ಯಭಾಗ
೪೫.  ಯಾವುದನ್ನು ಎಚ್ಚರದಲಿ ಮುನ್ನಡೆಸಬೇಕು?
          :  ಬಿರುಗಾಳಿಗೆ ಹೊಯ್ದಾಡುವ ಹಡಗನ್ನು
೪೬.  ನದೀಜಲಗಳು ಏನಾಗಿದವೆ?
          :  ಕಲುಷಿತವಾಗಿವೆ
೪೭. ಕಾಡುಮೇಡುಗಳ ಸ್ಥತಿ ಹೇಗಿದೆ?
          :  ಬರಡಾಗಿವೆ
೪೮.  ಯಾವ ಎಚ್ಚರದೊಳು ಬದುಕಬೇಕಿದೆ?
          :  ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದೊಳು
೪೯.  ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ?
          : ಎವೆ ತೆರೆದಿಕ್ಕುವ ಹೊತ್ತಿನೊಳಗೆ ಗಾವುದ
                      ಗಾವುದ ಗಾವುದ ಮುಂದೆ ಹಾರುತ್ತಿದೆ.
೫೦. ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ?
          : ಬಿಳಿಹೊಳೆ ಬಣ್ಣಗಳಿವೆ.
೫೧. ಹಕ್ಕಿಯ ಕಣ್ಣುಗಳು ಯಾವುವು?
          :  ಸೂರ್ಯ-ಚಂದ್ರರು
೫೨.  ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?
          :  ಸಾರ್ವಭೌಮರ ನೆತ್ತಿ
೫೩.  ಹಕ್ಕಿ ಯಾರನ್ನು ಹರಸಿದೆ?
          :  ಹೊಸಗಾಲದ ಹಸುಮಕ್ಕಳನ್ನು
೫೩.  ಹಕ್ಕಿಯು ಯಾವುದರ ಸಂಕೇತವಾಗಿದೆ?
          :  ಕಾಲಪಕ್ಷಿಯ
೫೪.  ಹಕ್ಕಿಯ ಚುಂಚುಗಳು ಎಲ್ಲಿಯವರೆಗೆ ಚಾಚಿವೆ?
          :  ದಿಗ್ಮಂಡಲ ಅಂಚಿನ ಆಚೆಯವರೆಗೂ
೫೫.  ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ಏನು?
          :  ಭಾರತಿಯರು ಶಸ್ತ್ರಾಸ್ತ್ರಗಳನ್ನು ಹೊಂದುವ0ತಿಲ್ಲ. ತಮ್ಮಲ್ಲಿರುವ ಆಯುಧವನ್ನು
                       ಸರ್ಕಾರಕ್ಕೆ ಒಪ್ಪಿಸಬೇಕು
೫೬.  ಹಲಗಲಿಯ ನಾಲ್ವರು ಪ್ರಮುಖರು ಯಾರು?
          :  ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ
೫೭.  ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ?
          :  ಹಲಗಲಿಯ ಬೇಡರ ಹತಾರ ಕದನ
೫೮.  ಹಲಗಲಿಯ ಗುರುತು ಉಳಿಯದಂತಾದುದು ಏಕೆ?
          :  ಹಲಗಲಿಯ ಮೇಲೆ ಬ್ರಿಟಿಷ್ ಸರ್ಕಾರದ ದಂಡು ದಾಳಿ ಮಾಡಿ,
                        ಬೆಂಕಿ ಹಚ್ಚಿದ್ದರಿಂದ
೫೯.  ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ?
          :  ಹಲಗಲಿಯ ಬೇಡರ ಹತಾರ ಕದನ
೬೦.  ಹಲಗಲಿ ಗ್ರಾಮ ಎಲ್ಲಿದೆ?
          :  ಹಲಗಲಿ ಮುಧೋಳ ಸಂಸ್ಥಾನದಲ್ಲಿ
೬೧. ಶ್ರೀಕೃಷ್ಣ ಕರ್ಣನನ್ನು ರಥದಲ್ಲಿ ಹೇಗೆ ಕೂರಿಸಿಕೊಂಡನು?
          :  ಮೈದುನತನದ ಸರಸವನ್ನು ಮಾಡಿ, ಕೈಹಿಡಿದು ಎಳೆದು
೬೨.  ಕುಮಾರ ವ್ಯಾಸನ ಆರಾಧ್ಯ ದೈವ ಯಾರು?
          :  ಗದುಗಿನ ವೀರನಾರಾಯಣ
೬೩.  ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು ಯಾರು?
          :  ನಕುಲ ಮತ್ತು ಸಹದೇವ
೬೪.  ನಕುಲ ಸಹದೇವರ ತಾಯಿಯ ಹೆಸರೇನು?
          :  ಮಾದ್ರಿ
೬೫.  ಕುಮಾರವ್ಯಾಸನಿಗೆ ಇರುವ ಬಿರುದು ಯಾವುವು?
          :  ರೂಪಕ ಸಾಮ್ರಾಜ್ಯ ಚಕ್ರವರ್ತಿ
೬೬. ನಾರಣಪ್ಪನಿಗೆ ಕುಮಾರವ್ಯಾಸ ಎಂಬ ಹೆಸರು ಏಕೆ ಬಂತು?
          :  ವ್ಯಾಸರ ಸಂಸ್ಕೃತ ಮಹಾಭಾರತವನ್ನು ಕನ್ನಡದಲ್ಲಿ ರಚಿಸಿದನು.
೬೭.  ಅಶ್ವಯುಜದ ಬತ್ತದ ಗದ್ದೆಯ ಬಣ್ಣ ಯಾವ ಹಸುರಿನಂತೆದೆ?
          :  ಗಿಳಿ ಹಸುರು
೬೮.  ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ?
          :  ಬನದ ಅಂಚಿನಲ್ಲಿದೆ.
೬೯.  ಹಸುರು ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ?
          :  ಅಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ
                          ಹೆಪ್ಪುಗಟ್ಟಿದ ಹಚ್ಚಹಸುರನ್ನು ಕಂಡು
೭೦.  ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೆ ಎಂದು ದುರ್ಯೋಧನ
       ಯಾರಿಗೆ ಹೇಳುವನು?
          : ಭೀಷ್ಮರಿಗೆ
೭೧.  ದಿನಪಸುತ ಎಂದರೆ ಯಾರು?
          :  ಕರ್ಣ
೭೨.  ಅಂತಕಾತ್ಮಜ ಎಂದರೆ ಯಾರು?
          :  ಧರ್ಮರಾಯ
೭೩.  ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ
       ದುರ್ಯೋಧನ ಹೇಳುತ್ತನೆ?
          :  ಅರ್ಜುನ - ಭೀಮ
೭೪.  ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವನು ಯಾರು?
          :  ದುರ್ಯೋಧನ
೭೫.  ಜೈಮಿನಿ ಭಾರತ ಕಾವ್ಯವನ್ನು ಬರೆದ ಕವಿ ಯಾರು?
          :  ಲಕ್ಷ್ಮೀಶ
೭೬.  ಯಜ್ಞಾಶ್ವವನ್ನು ಕಟ್ಟಿದವರು ಯಾರು?
          :  ಲವ
೭೭.  ಕುದುರಯನ್ನು ಲವನು ಯಾವುದರಿಂದ ಕಟ್ಟಿದನು?
          :  ಉತ್ತರೀಯದಿಂದ
೭೮.  ಮುನಿಸುತರು ಹೆದರಲು ಕಾರಣವೇನು?
          :  ಲವನು ಯಜ್ಞಾಶ್ವವನ್ನು ಕಟ್ಟಿ ಹಾಕಿದ್ದರಿಂದ
೭೯.  ದ್ರೋಣನು ಪರಶುರಾಮನಲ್ಲಿಗೆ ಏಕೆ ಬಂದನು?
          :  ದ್ರವ್ಯಾರ್ಥಿಯಾಗಿ
೮೦.  ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು?
          :  ಅಶ್ವತ್ಥಾಮ
೮೧.  ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುವು?
          :  ವಾರುಣ, ವಾಯುವ್ಯ, ಆಗ್ನೇಯ, ಪೌರಂದರಾದಿ
೮೨.  ದ್ರುಪದನು ಪಡಿಯರನಿಗೆ ಏನೆಂದು ಹೇಳಿ ಕಳುಹಿಸಿದನು?
          :  ದ್ರೋಣನು ಯಾರೆಂದು ನಾನು ತಿಳಿಯೆನು ಅವನನ್ನು ಹೊರಕ್ಕೆ ತಳ್ಳು

ಪೂರಕ ಪಾಠ
೮೩.  ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ?
          :  ಮುಸುರೆ ತಿಕ್ಕುತ್ತಿದ್ದಾಳೆ.
೮೪.  ಅಮ್ಮ ಎಲ್ಲಿ ಮಲಗಿದ್ದಾಳೆ?
          :  ಗುಡಿಸಲಿನಲ್ಲಿ ಮಲಗಿದ್ಧಾಳೆ.
೮೫.  ಯಾರಿಗೆ ವಸಂತಮುಖ ತೋರಲಿಲ್ಲ?
          : ಕಮ್ಮಾರನಿಗೆ, ಕುಂಬಾರನಿಗೆ, ನೇಕಾರನಿಗೆ, ಕೇರಿಯಮಾರನಿಗೆ
೮೬.  ಪುಟ್ಟಿಯ ಪ್ರಶ್ನೆಗಳೆನು?
          :  ಗುಡಿಸಲೊಳಗೆ ಬರಲು ವಸಂತ ಹೆದರಿದನೆ?
                      ಹರಿದ ಚಿಂದಿ ಬಟ್ಟೆಗಳ ಕಂಡು ಅವನು ಮರುಗಿದನೆ?
೮೭. ಸರ್ವಧರ್ಮ ಸಮ್ಮೇಳನ ಎಲ್ಲಿ ನಡೆಯಿತು?
          : ಚಿಕಾಗೋದಲ್ಲಿ  ೧೧-೦೯-೧೮೯೩
೮೮. ವಿವೇಕಾನಂದರನ್ನು ಮಾನವತಾಮಿತ್ರ ರೆಂದು ಕರೆದವರಾರು?
          :  ಕುವೆಂಪು
೮೯.  ವಿವೇಕಾನಂದರು ಯಾವ ವ್ಯವಸ್ಥೆಯನ್ನು ವಿರೋಧಿಸುತ್ತಾರೆ?
          :  ಜಾತಿ ಮತ್ತು ವರ್ಗ ವ್ಯವಸ್ಥೆ
೯೦.  ಯಾರು ಶಾಪಗೊಂಡು ಮೃಗವಾಗಿದ್ದರು?
          :  ಓರ್ವ ಸುಂದರ ರಾಜಕುಮಾರ
೯೧. ಬಡತನ ಸುಂದರಿ ಹಾಗೂ ಅವಳ ತಂದೆಗೆ ಕಷ್ಟವಾಗಲ್ಲಿಲ್ಲ ಏಕೆ?
          :  ಅವರ ಜೀವನ ಸರಳವಾಗಿತ್ತು.
೯೨. ಜಲಿಯನ್ ವಾಲಾಭಾಗ್ ಹತ್ಯಾಕಾಂಡ ಎಂದು ನಡೆಯಿತು?
          :  ಏಪ್ರಿಲ್ ೧೩ ೧೯೧೯
೯೩.  ಭಗತ್ ಸಿಂಗ್ ತನ್ನ ಸಹೋದರಿಗೆ ಮಣ್ಣು ಯಾವುದರ ಪ್ರತೀಕ
       ಎಂದು ತೋರಿಸುತ್ತಾನೆ?
          :  ತ್ಯಾಗದ ಪ್ರತೀಕ
೯೪.  ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿರುವವರು ಯಾರು?
          :  ಶೂದ್ರರು ಹಾಗೂ ಅಸ್ಪೃಶ್ಯರು
೯೫.  ವಿವೇಕಾನಂದರು ಮೊದಲನೆ ಆದ್ಯತೆ ಯಾವುದಕ್ಕೆ ನೀಡಬೇಕೆಂದಿದ್ಧಾರೆ?
          :  ದೈಹಿಕ ಹಸಿವನ್ನು ಇಂಗಿಸುವುದಕ್ಕೆ
೯೪.  ಇಳೆಗೆ ಯಾವ ಸಂಭ್ರಮವೆಂದು ಕವಿ ಹೇಳಿದ್ದಾರೆ?
:   ಇಳೆಗೆ ಕಡಲುಕ್ಕಿ ಹರಿಯುವ ಸಂಭ್ರಮ ಎಂದು ಕವಿ ಹೇಳಿದ್ದಾರೆ.

೯೫.  ಮಾವಿನ ಮರಗಳು ಎಲ್ಲಿ ಮೈ ತುಂಬಿ ನಿಂತಿವೆ?
ಉ:   ಮಾವಿನ ಮರಗಳು ಒಡೆಯನ ಅಂಗಳದಲ್ಲಿ ಮೈ ತುಂಬಿ ನಿಂತಿವೆ.

೯೬.   ಕೋಗಿಲೆ ಹೇಗೆ ಹಾಡುತ್ತದೆ ಎಂದು ಕವಿ ಹೇಳಿದ್ದಾರೆ?
ಉ:   ಕೋಗಿಲೆ ಮನತುಂಬಿ ಹಾಡುತ್ತದೆ ಎಂದು ಕವಿ ಹೇಳಿದ್ದಾರೆ.

೯೭.   ಪುಟ್ಟಿ ಏನನ್ನು ಕಂಡು ಮೂಕವಿಸ್ಮಿತಳಾದಳು?
ಉ:    ಪುಟ್ಟಿ ಥಳ ಥಳ ಹೊಳೆಯುವ ಸೂರ್ಯನನ್ನು ಕಂಡು ಮೂಕವಿಸ್ಮಿತಳಾದಳು.

೯೮.   ಯಾರ ಒಲೆ ಉರಿಯಲ್ಲಿಲ್ಲ?
ಉ:    ಕೇರಿಯ ಮಾರನ ಒಲೆ ಉರಿಯಲ್ಲಿಲ್ಲ.

೯೯.   ಬಾಲರವಿ ಹೇಗೆ ಸೊರಗಿದ್ಧಾನೆ?
ಉ:    ತೂತು ಬಿದ್ದ ಸೀರೆಯಲ್ಲಿ ಬಾಲ ರವಿ ಸೊರಗಿದ್ದಾನೆ.

                                                      ಕವಿ ಪರಿಚಯ
೧.  ಸಾರಾ ಅಬೂಬಕ್ಕರ ಅವರು ಜೂನ್ ೩೦ ೧೯೩೬ರಂದು ಕಾಸರಗೋಡಿನಲ್ಲಿ ಜನಿಸಿದರು. ಇವರು ಚಂದ್ರಗಿರಿಯ ತೀರದಲ್ಲಿ, ಸಹನಾ, ಕದನ ವಿರಾಮ, ವಜ್ರಗಳು, ಸುಳಿಯಲ್ಲಿ ಸಿಕ್ಕವರು, ತಳ ಒಡೆದ ದೋಣಿಯಲಿ,ಮೊದಲಾದ ಕಾದಂಬರಿಗಳನ್ನು ಚಪ್ಪಲಿಗಳು , ಖೆಡ್ಡಾ, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು, ಪಯಣ  ಮುಂತಾದ ಕಥಾಸಂಕಲನಗಳನ್ನು ರಚಿಸಿದ್ದಾರೆ. ಇವರಿಗೆ ಸಾಹಿತ್ಯ ಕೃಷಿಗಾಗಿ ಅನೇಕ ಪ್ರಶಸ್ತಿಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನೃಪತುಂಗ ಪ್ರಶಸ್ತಿ ಲಬಿಸಿದೆ.

೨.  ಪು. ತಿ. ನ.  : ಪು.ತಿ.ನ. ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಪುರೋಹಿತ ತಿರುನಾರಾಯಣಯ್ಯಂಗಾರ್ಯ ನರಸಿಂಹಾಚಾರ್ ಅವರು ಕ್ರಿ.ಶ. ೧೯೦೫ ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ ಜನಿಸಿದರು. ಇವರು ಸಣ್ಣ ಕಥೆ , ಗೀತನಾಟಕ , ಕವಿತೆ , ಪ್ರಬಂಧ , ವಿಚಾರಸಾಹಿತ್ಯ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿದ್ದಾರೆ. ಅಹಲ್ಯೆ ,ಗೋಕುಲ ನಿರ್ಗಮನ, ಶಬರಿ, ವಿಕಟಕವಿವಿಜಯ , ಹಂಸದಮಯಂತಿ ಮತ್ತು ಇತರ ರೂಪಕಗಳು, ಹಣತೆ, ರಸಸರಸ್ವತಿ, ಗಣೇಶದರ್ಶನ, ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ ಇದು ಇವರ ಪ್ರಮುಖ ಕೃತಿಗಳು, ಇವರಿಗೆ ಹಂಸದಮಯಂತಿ ಮತ್ತುನ್ ಇತರ ರೂಪಕಗಳು ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶ್ರೀಹರಿಚರಿತೆ ಕಾವ್ಯಕ್ಕೆ ಪಂಪ ಪ್ರಶಸ್ತಿ ಲಬಿಸಿದೆ. ಮೈಸೂರು ವಿಶ್ವವಿದ್ಯಾನಿಲಯವು ಗೌರವ ಡಿ.ಲಿಟ್ ಪದವಿ ನೀಡಿ ಗೌರವಿಸಿದೆ.

೩.  ವಿ.ಕೃ. ಗೋಕಾಕ್ : ವಿನಾಯಕ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ. ವಿನಾಯಕ್ ಕೃಷ್ಣ ಗೋಕಾಕ ರವರು ಕ್ರಿ.ಶ. ೧೯೦೯ ರಲ್ಲಿ ಹಾವೇರಿ ಜಿಲ್ಲೆಯ ಸವಣುರಿನಲ್ಲಿ ಜನಿಸಿದರು. ಇವರು ಸಮುದ್ರಗೀತೆಗಳು, ಪಯಣ, ಉಗಮ, ಇಜ್ಜೋಡು, ಸಮರಸವೇ ಜೀವನ, ಭಾರತ ಸಿಂಧುರಶ್ಮಿ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ದ್ಯಾವಾ ಪ್ರಥಿವೀ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕನಾರ್ಟಕ ವಿಶ್ವವಿದ್ಯಾಲಯದ ಗೌರವ  ಡಾಕ್ಟರೇಟ್, ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್ ಪದವಿ, ಸಮಗ್ರ ಸಾಹಿತ್ಯಕ್ಕಾಗಿ ಜ್ಞಾನಪೀಠ ಪ್ರಶಸ್ತಿ ಮತ್ತು ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರ ಲಬಿಸಿದೆ.

೪.  ಡಿ.ಎಸ್. ಜಯಪ್ಪಗೌಡ :  ಇವರು ೧೦೪೭ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿ ಜನಿಸಿದರು. ಇವರು ಕರ್ನಾಟಕ ಗಾಮೀಣ ಸಂಸ್ಥೆಗಳು, ಕರ್ನಾಟಕದ ಕಡಲಾಚೆಯ ಸಂಪರ್ಕಗಳು, ಮೈಸೂರು ಒಡೆಯರು, ಜನಪದ ಆಟಗಳು, ದಿವಾನ್ ಸರ್. ಎಂ. ವಿಶ್ವೇಶ್ವರಯ್ಯನವರ ಕಾರ್ಯಸಾಧನೆಗಳು ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಕರ್ನಾಟಕದ ಕಡಲಾಚೆಯ ಸಂಪರ್ಕಗಳು ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಧಾರವಾಡ ಕರ್ನಾಟಕ ಸಂಘದ ಸಂಶೋಧನಾ ಬಹುಮಾನಕ್ಕೆ ಭಾಜನರಾಗಿದ್ದಾರೆ.

೫.  ದೇವನೂರು ಮಹಾದೇವ : ಇವರು ೧೯೪೮ ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನಲ್ಲಿ ಜನಿಸಿದರು. ಇವರು ದ್ಯಾವನೂರು, ಒಡಲಾಳ, ಗಾಂಧಿ ಮತ್ತು ಮಾವೊ, ನಂಬಿಕೆಯ ನೆಂಟ, ನೋಡು  ಮತ್ತು ಕೂಡು, ಎದೆಗೆ ಬಿದ್ದ ಅಕ್ಷರ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರ ಕುಸುಮಬಾಲೆ ಕಾಂದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಒಡಲಾಳ ಕೃತಿಗೆ ಭಾರತೀಯ ಭಾಷಾ ಪರಿಷತ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳು ಲಬಿಸಿವೆ.

೬.  ಎ. ಎನ್. ಮೂರ್ತಿರಾವ್ :  ಇವರು ಕ್ರಿ.ಶ. ೧೯೦೦ ರಲ್ಲಿ ಮಂಡ್ಯಜಿಲ್ಲೆಯ ಅಕ್ಕಿಹೆಬ್ಬಾಳಿನಲ್ಲಿ ಜನಿಸಿದರು. ಇವರು ಹಗಲುಗನಸುಗಳು, ಅಲೆಯುವ ಮನ, ಅಪರವಯಸ್ಕನ ಅಮೇರಿಕಾ ಯಾತ್ರೆ, ಮಿನುಗು -ಮಿಂಚು, ಪೂರ್ವಸೂರಿಗಳೊಡನೆ ಚಂಡಮಾರುತ ಮೊದಲಾದ ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ. ಚಿತ್ರಗಳು-ಪತ್ರಗಳು ಎಂಬ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇವರು ಎಂಬ ಕೃತಿಗೆ ಪಂಪ ಪ್ರಶಸ್ತಿ , ಮೈಸೂರು ವಿಶ್ವವಿದ್ಯಾನಿಲಯದ ಗೌರವ ಡಿ.ಲಿಟ್. ಪದವಿ ನೀಡಿದೆ.

೭.  ದುರ್ಗಸಿಂಹ : ಇವರು ಕ್ರಿ.ಶ. ೧೦೩೧ ರಲ್ಲಿ ಕಿಸುಕಾಡು ನಾಡಿನ ಸಯ್ಯಡಿಯಲ್ಲಿ ಜನಿಸಿದನು. ( ಈಗಿನ ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ) ಒಂದನೆಯ ಜಗದೇಕಮಲ್ಲನ ಆಸ್ಥಾನದಲ್ಲಿ ದಂಡನಾಯಕನೂ , ಸಂಧಿವಿಗ್ರಹಿಯೂಆಗಿದ್ದನು. ಮತಧರ್ಮ ಸಮನ್ವಯಕಾರನಾದ ಈತ ಸಯ್ಯಡಿಯಲ್ಲಿ ಹಲವಾರು ಹರಿಹರಭವನಗಳನ್ನು ನಿರ್ಮಿಸಿದ್ಧಾನೆ. ಇವನು ಕರ್ನಾಟಕ ಪಂಚತಂತ್ರ ಎಂಬ ಚಂಪೂಕಾವ್ಯದ ಕರ್ತೃ. ಪಂಚತಂತ್ರದಲ್ಲಿ ಭೇದ, ಪರೀಕ್ಷಾ, ವಿಶ್ವಾಸ, ವಂಚನಾ ಮತ್ತು ಮಿತ್ರಕಾರ್ಯ ಎಂಬ ಐದು ತಂತ್ರಗಳನ್ನಾಧರಿಸಿದ ೪೮ ಉಪಕತೆಗಳಿವೆ. ಕಾವ್ಯವು ೪೫೭ ಪದ್ಯಗಳಿಂದಲೂ ೨೩೦ ಶ್ಲೋಕಗಳಿಂದಲೂ ಕೂಡಿದೆ.

೮.  ಶಿವಕೋಟ್ಯಾಚಾರ್ಯ:  ಕನ್ನಡದ ಪ್ರಥಮ ಗದ್ಯಕೃತಿ ’ ವಡ್ಡಾರಾಧನೆಯ ’ ಕರ್ತೃ. ಇವನ ಕಾಲ ಕ್ರಿ.ಶ. ಸುಮಾರು ೧೦ನೆಯ ಶತಮಾನ. ಇವನು ಬಳ್ಳಾರಿ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲೂಕಿನ ಕೋಗಳಿ ನಾಡಿನವನು. ಜೈನ ಧಾರ್ಮಿಕ ಕಥೆಗಳ ಸಂಗ್ರಹವಾದ ವಡ್ಡಾರಾಧನೆಯಲ್ಲಿ ೧೯ ಕಥೆಗಳಿವೆ. ಈ ಕಥೆಯ ನಾಯಕರೆಲ್ಲ ಧರ್ಮವೀರರು. ಕೆಲವರು ಮೋಕ್ಷವನ್ನುಸಂಪಾದಿಸಿಕೊಳ್ಳುತ್ತಾರೆ. ಕೆಲವರು ಮೋಕ್ಷಕ್ಕೆ ನೆರೆಮನೆಯಾದ ಸರ್ವಾರ್ಥಸಿದ್ಧಿಯೆಂಬ ಸ್ವರ್ಗಕ್ಕೆ ಹೋಗುತ್ತಾರೆ. ಪುಣ್ಯ ಪಾಪರೂಪವಾದ ಕರ್ಮಕ್ಷಯದಿಂದ ಸಿದ್ಧಿಗಳು ಉಂಟಾಗುತ್ತದೆ. ಕರ್ಮಕ್ಷಯವು ತಪಸ್ಸಿನಿಂದ ಮಾತ್ರ ಸಾಧ್ಯ ಎಂಬ ಸಂದೇಶವನ್ನು ಈ ಕಥೆಗಳು ಸಾರುತ್ತವೆ.

.  ಜಿ.ಎಸ್.ಶಿವರುದ್ರಪ್ಪ : ಜಿ.ಎಸ್.ಶಿವರುದ್ರಪ್ಪ ಎಂದೇ ಪ್ರಸಿದ್ಧರಾಗಿರುವ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ಅವರು ಕ್ರಿ.ಶ. ೧೯೨೬ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಜನಿಸಿದರು. ಇವರು ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದ ಹೆಜ್ಜೆ, ಅನಾವರಣ, ವಿಮರ್ಶೆಯ ಪೂರ್ವಪಶ್ಚಿಮ. ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು, ಸೌಂದರ್ಯ ಸಮೀಕ್ಷೆ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಕಾವ್ಯಾರ್ಥಚಿಂತನ ಕೃತಿಹೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ನಾಡೋಜ ಪುರಸ್ಕಾರ, ಬೆಂಗಳೂರು ಮತ್ತು ಕುವೆಂಪು ವಿಶ್ವವಿದ್ಯಾನಿಲಯಗಳ ಗೌರವ ಡಿ.ಲಿಟ್. ಪದವಿ, ರಾಷ್ಟ್ರಕವಿ ಅಭಿಧಾನ, ಪಂಪ ಪ್ರಶಸ್ತಿ ಪಡೆದಿದ್ಧಾರೆ.

೨.  ದ. ರಾ.ಬೇಂದ್ರೆ : ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರು ಕ್ರಿ.ಶ. ೧೮೯೬ ರಲ್ಲಿ ಧಾರವಾಡದಲ್ಲಿ ಜನಿಸಿದರು. ಅವರು ಗರಿ, ಕೃಷ್ಣಕುಮಾರಿ, ಉಯ್ಯಾಲೆ, ಸಖೀಗೀತ, ನಾದಲೀಲೆ, ಮೇಘದೂತ, ಗಂಗಾವತರಣ,ಸೂರ್ಯಪಾನ, ನಗೆಯ ಹೊಗೆ, ಸಾಹಿತ್ಯದ ವಿರಾಟ್ ಸ್ವರೂಪ ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಮರಾಠಿ, ಇಂಗ್ಲೀಷ ಭಾಷೆಯೂ ಸೇರಿದಂತೆ ಸಾಹಿತ್ಯದ ವಿವಿಧ ಪ್ರಕಾರದ ಕೃತಿಗಳನ್ನು ರಚಿಸಿದ್ದಾರೆ. ಅರಳು-ಮರಳು ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಾಕುತಂತಿ ಕವನ ಸಂಕಲನಕ್ಕೆ ಜ್ಞಾನಪೀಠ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಶ್ರೀ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

೩.  ಕುಮಾರವ್ಯಾಸ:  ಕುಮಾರವ್ಯಾಸ ಎಂದೇ ಪ್ರಸಿದ್ಧರಾಗಿರುವ ಗದುಗಿನ ನಾರಣಪ್ಪ ಅವರು   ಗದಗ ಪ್ರಾಂತದ ಕೋಳಿವಾಡದಲ್ಲಿ ಕ್ರಿ.ಶ. ೧೪೩೦ರಲ್ಲಿ ಜನಿಸಿದರು. ಇವರು ಕನ್ನಡ ಭಾರತ, ಗದುಗಿನ ಭಾರತ, ಕುಮಾರವ್ಯಾಸ ಭಾರತ ಎಂಬ ಹೆಸರನ್ನು ಹೊಂದಿರುವ ಕರ್ಣಾಟ ಭಾರತ ಕಥಾಮಂಜರಿ ಎಂಬ ಕಾವ್ಯವನ್ನು ಮತ್ತು ಐರಾವತ ಎಂಬ ಕೃತಿಯನ್ನು ರಚಿಸಿದ್ದಾರೆ. ರೂಪಕಾಲಂಕಾರವನ್ನು ನಿರರ್ಗಳವಾಗೊ ಪ್ರಯೋಗಿಸಿ ’ರೂಪಕಸಾಮ್ರಾಜ್ಯ ಚಕ್ರವರ್ತಿ ’ ಎಂಬ ಬಿರುದನ್ನು ಪಡೆದಿದ್ದಾನೆ.

೪.  ಕುವೆಂಪು:   ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಮಲೆನಾಡಿನ ಮಡಿಲಾದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಕುಪ್ಪಳ್ಳಿಯಲ್ಲಿ ೧೯೦೪ರ ಡಿಸೆಂಬರ್ ೨೯ ರಂದು ಜನಿಸಿದರು. ಕೊಳಲು, ಪಾಂಚಜನ್ಯ, ಪ್ರೇಮಕಾಶ್ಮೀರ, ಪಕ್ಷಿಕಾಶಿ- ಕವನ ಸಂಕಲನಗಳನ್ನು, ನನ್ನ ದೇವರು ಮಾತ್ತು ಇತರ ಕಥೆಗಳು, ಸಂನ್ಯಾಸಿ ಮತ್ತು ಇತರ ಕಥೆಗಳು - ಕಥಾಸಂಕಲನ, ಕಾನೂರು ಹೆಗ್ಗಡತಿ, ಮಲೆಗಳಲ್ಲಿ ಮದುಮಗಳು - ಕಾದಂಬರಿ, ತಪೋನಂದನ, ರಸೋವೈಸ್- ವಿಮರ್ಶಾ ಸಂಕಲನ, ಅಮಲನ ಕಥೆ, ಮೋಡಣ್ಣನ ತಮ್ಮ, ಬೊಮ್ಮನಹಳ್ಳಿಯ ಕಿಂದರಜೋಗಿ,- ಮಕ್ಕಳ ಪುಸ್ತಕಗಳು, ಜಲಗಾರ , ಯಮನ ಸೋಲು, ಬೆರಳ್ಗೆ ಕೊರಳ್- ನಾಟಕಗಳು, ನೆನಪಿನ ದೋಣಿಯಲ್ಲಿ ಆತ್ಮಕಥನ ಮುಂತಾದ ಸುಮಾರು ಎಪ್ಪತ್ತು ಕೃತಿಗಳನ್ನು ರಚಿಸಿದ್ದಾರೆ. ಶ್ರೀರಾಮಯಣ ದರ್ಶನಂ ಮಹಾಕಾವ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಭಾರತೀಯ ಜ್ಞಾನಪೀಠ ಪ್ರಶಸ್ತಿ, ರಾಷ್ಟ್ರಕವಿ, ಪಂಪ ಪ್ರಶಸ್ತಿ, ಪದ್ಮವಿಭೂಷಣ ಪ್ರಶಸ್ತಿ, ಮೈಸೂರು, ಕರ್ನಾಟಕ, ಬೆಂಗಳೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್ ಸಂದಿದೆ ಮತ್ತು ಕರ್ನಾಟಕ ರತ್ನ ಪ್ರಶಸ್ತಿ ಲಬಿಸಿದೆ.

೫.  ರನ್ನ : ಕ್ರಿ.ಶ. ಸುಮಾರು ೯೪೯ ರಲ್ಲಿ ( ಹತ್ತನೆಯ ಶತಮಾನ)  ಬಾಗಲಕೋಟೆ ಜಿಲ್ಲೆಯ ಮುದುವೋಳಲು ( ಈಗಿನ ಮುಧೋಳ ) ಎಂಬ ಗ್ರಾಮದಲ್ಲಿ ರನ್ನನು ಜನಿಸಿದನು, ಇವನು ’ ಸಾಹಸ ಭೀಮ ವಿಜಯಂ ( ಗದಾಯುದ್ದ ) ’ , ಅಜಿತತೀರ್ಥಂಕರ ಪುರಾಣತಿಲಕಂ, ಪರಶುರಾಮಚರಿತಂ, ಚಕ್ರೇಶ್ವರಚರಿತಂ ಎಂಬ ಕಾವ್ಯವನ್ನು ಬರದಿದ್ಧಾನೆ. ರನ್ನಕಂದ ಎಂಬ ನಿಘಂಟನ್ನು ಬರೆದಿದ್ದಾನೆ. ಇವನಿಗೆ ತೈಲಪನು ’ ಕವಿಚಕ್ರವರ್ತಿ ’ ಎಂಬ ಬಿರುದನ್ನು ಕೊಟ್ಟನು. ಈತನು ರತ್ನತ್ರಯರಲ್ಲಿ ಒಬ್ಬನು.

೬.  ಲಕ್ಷ್ಮೀಶ : ಈತನು ಕ್ರಿ.ಶ. ೧೫೫೦ ರಲ್ಲಿ ಚಿಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ದೇವನೂರಿನಲ್ಲಿ ಜನಿಸಿದನು. ಈತನಿಗೆ ಲಕ್ಷ್ಮೀಪತಿ, ಲಕ್ಷ್ಮೀರಮಣ ಎಂಬ ಹೆಸರುಗಳಿವೆ. ಜೈಮಿನಿ ಭಾರತವೆಂಬ ಪ್ರಸಿದ್ಧ ಕಾವ್ಯದ ಕರ್ತೃ. ಲಕ್ಷ್ಮೀಶ ಕವಿಗೆ ಉಪಮಾಲೋಲ , ಕರ್ಣಾಟಕವಿಚೂತವನ ಚೈತ್ರ ಎಂಬ ಬಿರುದುಗಳಿವೆ.

೭.  ಪಂಪ : ಪಂಪ ಮಹಾಕವಿ ಕ್ರಿ.ಶ. ೯೦೨ ರಲ್ಲಿ ವೆಂಗಿ ಮಂಡಲದ ವೆಂಗಿಪಳುವಿನಲ್ಲಿ ಜನಿಸಿದನು. ಇವನು ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯಂ ಎಂಬ ಮಹಾಕಾವ್ಯವನ್ನು ಬರೆದಿದ್ದಾನೆ, ವಿಕ್ರಮಾರ್ಜುನ ವಿಜಯ ಕಾವ್ಯಕ್ಕೆ ಪಂಪಭಾರತ ಎಂಬ ಮತ್ತೊಂದು ಹೆಸರಿದೆ. ಕಲಿಯೂ ಕವಿಯೂ ಆಗಿದ್ದ ಪಂಪ ರತ್ನತ್ರಯರಲ್ಲಿಒಬ್ಬ, ಸರಸ್ವತೀ ಮಣಿಹಾರ , ಸಂಸಾರ ಸಾರೋದಯ, ಕವಿತಾಗುಣಾರ್ಣವ ಎಂಬ ಬಿರುದುಗಳನ್ನು ಪಡೆದಿದ್ದ ಕವಿ.



ಪದ್ಯವನ್ನು ಕಂಠಪಾಠ ಮಾಡಿ.( ೪ ಅಂಕದ ಪ್ರಶ್ನೆಗಳು )

                                      ೧. ಸಂಕಲ್ಪಗೀತೆ. ಕವಿ -ಜಿ.ಎಸ್.ಶಿವರುದ್ರಪ್ಪ
ಕಲುಷಿತವಾದೀ ನದೀಜಲಗಳಿಗೆ         
                        ಮುಂಗಾರಿನ ಮಳೆಯಾಗೋಣ.                               
ಬರಡಾಗಿರುವೀ ಕಾಡುಮೇಡುಗಳ     
                  ವಂಸತವಾಗುತ ಮುಟ್ಟೋಣ.                           

ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ-ಸಂಶಯದಳು ಕಂದಿದ ಕಣ್ಣೊಳು
ನಾಳಿನ ಕನಸನು ಬಿತ್ತೋಣ.

೨. ಹಕ್ಕಿ ಹಾರುತಿದೆ ನೋಡಿದಿರಾ. ಕವಿ- ದ.ರಾ.ಬೇಂದ್ರೆ
ನೀಲಮೇಘಮಂಡಲ-ಸಮ ಬಣ್ಣ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
             ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು             
          ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ           
                 ಹಕ್ಕಿ ಹಾರುತಿದೆ ನೋಡಿದಿರಾ?                    


ಯುಗ-ಯುಗಗಳ ಹಣೆ ಬರೆಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?



೩. ಹಲಗಲಿ ಬೇಡರು. - ಜನಪದ
         
ಕೊಡಲಿ ಕೋರೆ ಕುಡ ಕಬ್ಬಿಣ ಮೊಸರು ಬೆಣ್ಣೆ ಹಾಲಾ             
ಉಪ್ಪು ಎಣ್ಣೆ ಅರಿಸಿಣ ಜೀರಗಿ ಅಕ್ಕಿ ಸಕ್ಕಾರಿ ಬೆಲ್ಲಾ
ಗಂಗಳ ಚೆರಗಿ ಮಂಗಳ ಸೂತ್ರ ಹೋದವು ಬೀಸುಕಲ್ಲಾ      
ಹಾಳಾಗಿ ಹೋಯಿತು ಅತ್ತು ವರ್ಣಿಸಿ ಹೇಳಲಿ ನಾನೆಷ್ಟಾ

ಸಿಕ್ಕದ್ದು ತಗೊಂಡು ಸರದ ನಿಂತರೊ ಊರಿಗೆ ಕೊಳ್ಳಿ ಕೊಟ್ಟಾ
 ಬೂದಿ ಮಾಡ್ಯಾರೊ ಹಲಗಲಿ ಸುಟ್ಟು ಗುರ್ತುಳಿಯಲಿಲ್ಲೆಳ್ಳಷ್ಟು
  ಕಾಣದೆ ಹೋಯಿತೊ ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು
  ಕುರ್ತುಕೋಟಿ ಕಲ್ಮೇಶನ ದಯದಿಂದ ಹಾಡಿದೆನಣ್ಣಾ ಜನಕಾ

೪. ಕೌರವೇಂದ್ರನ ಕೊಂದೆ ನೀನು ಕವಿ- ಕುವಾರವ್ಯಾಸ
                   ಕೊರಳ ಸೆರೆ ಹಿಗ್ಗಿದವು ದೃಗುಜಲ                                                          
    ಉರವಣಿಸಿ ಕಡು ನೊಂದನಕಟಾ                                             
              ಕುರುಪತಿಗೆ ಕೇಡಾದುದೆಂದನು ತನ್ನ ಮನದೊಳಗೆ                                 
    ಹರಿಯ ಹಗೆ ಹೊಗೆದೋರದುರುಹದೆ                                     
                          ಬರಿದೆ ಹೋಹುದೆ ತನ್ನ ವಂಶವ                                      
                          ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ        

                           ಮಾರಿಗೌತಣವಾಯ್ತು ನಾಳಿನ                                         
                          ಭಾರತವು ಚದುರಂಗ ಬಲದಲಿ                                       
 ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು               
                       ತೀರಿಸಿಯೆ ಪತಿಯವಸರಕ್ಕೆ ಶ                                        
       ರೀರವನು ನೂಕುವೆನು ನಿನ್ನಯ                                      
       ವೀರರೈವರ ನೋಯಿಸೆನು ರಾಜೀವಸಖನಾಣೆ                

೫. ಹಸುರು ಕವಿ- ಕುವೆಂಪು

ಹಸುರಾಗಸ: ಹಸುರು ಮುಗಿಲು:       
       ಹಸುರು ಗದ್ದೆಯಾ ಬಯಲು             
ಹಸುರಿನ ಮಲೆ: ಹಸುರು ಕಣಿವೆ:        
      ಹಸುರು ಸಂಜೆಯೀ ಬಿಸಿಲೂ!            

ಹೊಸ ಹೂವಿನ ಕಂಪು ಹಸುರು,       
        ಎಲರಿನ ತಂಪೂ ಹಸುರು!    
ಹಕ್ಕಿಯ ಕೊರಲಿಂಪು ಹಸುರು!   
         ಹಸುರು ಹಸುರಿಳೆಯುಸಿರೂ!   
೬ ಛಲಮನೆ ಮೆ¾Éವೆಂ ಕವಿ - ರನ್ನ
 ನೆಲಕಿ¾Âವೆನೆಂದು ಬಗೆದಿರೆ |                                  
ಚಲಕಿ¾Âವೆಂ ಪಾಂಡುಸುತರೊಳೀನೆಲನಿದು ಪಾ||             
¼Éßಲನೆನಗೆ ದಿನಪಸುತನಂ |                                 
ಕೊಲಿಸಿದ ನೆಲನೊಡನೆ ಮತ್ತೆ ಪುದುವಾ¿Ýಪೆನೇ ||           
         
         ಪುಟ್ಟಿದ ನೂರ್ವರುಮೆನ್ನೊಡ |                                
ವುಟ್ಟಿದ ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ ||            
          ಪುಟ್ಟಿ ಪೊದ¿ÝÄದು ಸತ್ತರ್                                   
ಪುಟ್ಟರೆ ಪಾಂಡವರೊಳಿ¾Âದು ಛಲಮನೆ ಮೆ¾Éವೆಂ ||         

೭. ವೀರಲವ  ಕವಿ- ಲಕ್ಷ್ಮೀಶ
                          ಉರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ |                                         
                          ನೊರ್ವನೇ ವೀರನಾತನ ಯಜ್ಞತುರಗಮಿದು |                                             
                         ನಿರ್ವಹಿಸಲಾರ್ಪರಾರಾದೊಡಂ ತಡೆಯಲೆಂದಿರ್ದ ಲೇಖನವನೋದಿ |           
                          ಗರ್ವಮಂ ಬಿಡಿಸದಿರ್ದೊಡೆ ತನ್ನ ಮಾತೆಯಂ |                                   
                          ಸರ್ವಜನಮುಂ ಬಂಜೆಯೆನ್ನದಿರ್ದಪುದೆ ತನ |                                             
                          ಗುರ್ವತೋಳ್ಗಳೀವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು ||       

                          ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ |
                          ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್ |
                          ನಗಡುತನದಿಂದ ಬಿಲ್ದಿರುವನೇರಿಸಿ ತೀಡಿ ಜೇಗೈದು ನಿಂತಿರ್ದನು ||
                          ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ |
                          ಮಗನಿದಕೆ ಬೆದರುವೆನೆ ಪೋಗಿ ನೀವೆಂದು ಲವ |
                         ಮಿಗೆ ನಡುಗಿ ಬೇಡಬೇಡರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು |


೮. ಕೆಮ್ಮನೆ ಮೀಸೆವೊತ್ತೆನೇ   ಕವಿ - ಪಂಪ
                                     ಅಂತೆಂಬನಾರ್ಗೆ ಪಿರಿದುಂ                                                     
                                     ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ            
                                    ¿Éõ ತೆನಗೆ ಕೆಳೆಯನೇ ನೂಂ                                                              
                                     ಕಂತಪ್ಪನನ¾Éಯೆನೆಂದು ಸಭೆಯೊಳ್ ನುಡಿದಂ ||                               

                                 ಒಡವೆಯನರ್ಥಿಗೆತ್ತೆನವನೀತಳಮಂ ಗುರುಗಿತ್ತೆನೀಗಳೊಂ
                                 ದಡಕೆಯುಮಿಲ್ಲ ಕೈಯೊಳೆರೆದಂ ಶ್ರುತಪಾರಗನೆಂತು ಸಂತಸಂ
                                 ಬಡಿಸುವೆನಿನ್ನಿದೊಂದು ಧನುವಿರ್ದುದು ದಿವ್ಯಶರಾಳಿಯಿರ್ದುದಿ
                                 ಲ್ಲೊಡಮೆ ಸಮಂತು ಪೇ¿ವರೊಳಾವುದನೀವುದೊ ಕುಂಭಸಂಭವ || 





ಮೂರು ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.

೧.  ಡಾಕ್ಟರ್ ಗೆ ವಿಮಾನದ ಪೈಲಟ್ ಏನು ಹೇಳಿದನು/
ಉ:  "ಡಾಕ್ಟರ್ !  ರೇಡಿಯೋ ಸಮನಾಗಿ ಕಾರ್ಯ ನಿರ್ವಹಿಸುತ್ತಲ್ಲ. ಗ್ರೌಂಡಿನೊಡನೆ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತಿಲ್ಲ. ಎಲ್ಲಾದರೂ ಹೇಗಾದರೂ ಇಳಿಯೋಣವೆಂದರೆ ಈ ಕತ್ತಲೆಯಲ್ಲಿ ಏನೂ ಕಾಣಿಸ್ತಾ ಇಲ್ಲವಲ್ಲ?"
ಎಂದು ವಿಮಾನದ ಪೈಲಟ್ ನುಡಿದನು.

೨.  ಮಹಿಳೆಯ ಆರ್ತನಾದ ಕೇಳಿ ರಾಹಿಲನ ಮನದಲ್ಲಿ ಮೂಡಿದ ಪ್ರಶ್ನೆಗಳಾವುವು?
ಉ:  ಮಹಿಳೆಯ ಆರ್ಥನಾದ ಕೇಳಿ ರಾಹಿಲನ ಮನದಲ್ಲಿ, ಆ ಮಹಿಳೆ ಯಾವ ರೀತಿಯ ಅಪಾಯದಲ್ಲಿ ಸಿಲುಕಿದ್ದಾಳೆ.
ಆ ಮನೆಯೊಳಗೆ ಏನು ಸಂಭವಿಸುತ್ತಿದೆ? ತಾನೀಗ ಈ ಕದವನ್ನು ತಟ್ಟಿದರೆ ಪರಿಣಾಮವೇನಾಗಬಹುದು? ಆ ಮನೆಯಿದ ಒಂದೇ ಒಂದು ಬೆಳಕಿನ ಕಿರಣವೂ ಹೊರ ಗಡೆಗೆ ಹಾಯುತ್ತಿರಲಿಲ್ಲ. ಗಡಿ ಪ್ರದೇಶದಲ್ಲಿ ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು ’ ಬ್ಲಾಕ್ ಔಟ್ ’ ನಿಯಮ ಪಾಲಿಸಲಾಗುತ್ತಿದೆ. ಇಂತಹ ಈ ಸಮಯದಲ್ಲಿ ಆ ಮನೆಯೊಳಗೆ ಯಾವ ರೀತಿಯ ಕ್ರೌರ್ಯ ನಡೆಯುತ್ತಿದೆ ಎಂಬ ಪ್ರಶ್ನೆ ಮೂಡಿದವು.

೩.  ಮುದುಕಿಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದ ಮಾತುಗಳೇನು?
ಉ:  "ನೋಡಪ್ಪಾ, ನಾನು ಈ ಊರಿಗೆ ಬಂದು ಐವತ್ತು ವರ್ಷಗಳಾದರೂ ಆಗಿರಬಹುದು. ಮದುವೆಯಾಗಿ ನವ ವಧುವಾಗಿ ಈ ಊರನ್ನು ಪ್ರವೇಶಿಸಿದೆ ಕೆಲವು ಕಾಲ ನೆಮ್ಮದಿಯಿಂದಲೇ ಇದ್ದೆವು. ಜಮೀನು, ಆಸ್ತಿ ನಮಗೆ ಸಾಕಾಗುವಷ್ಟಿತ್ತು. ಈಗಲೂ ಇದೆಯೆನ್ನು ಆದರೆ ನೆಮ್ಮದಿಯಿಂದ ಬದುಕಲು ಈ ಜನ ಬೇಡಬೇಕಲ್ಲ? ಯುದ್ಧವಂತೆ, ಯುದ್ಧ!" ಎಂದು ಮುದುಕಿಯು ರಾಹಿಲನ ಬಳಿ ಯುದ್ಧದ ಬಗ್ಗೆ ತಿರಸ್ಕಾರದಿಂದ ನುಡಿದಳು.

೪.  ನಿರ್ಜಿವವಾಗಿರುವ ಮಗುವನ್ನು ನೋಡಿ ಮುದುಕಿ ನಿರಾಶೆಯಿಂದ ಹೇಳಿದ್ದೇನು?
ಉ:  ನಿರ್ಜೀವವಾಗಿರುವ ಮಗುವನ್ನು ನೋಡಿ ಮುದುಕಿಯು, " ಇಷ್ಟು ವರ್ಷಗಳಿಂದಲೂ ಹಂಬಲಿಸಿ ಹುಟ್ಟಿದ ಮಗು ಕೊನೆಗು ದಕ್ಕಲಿಲ್ಲವಲ್ಲ? ಈ ಯುದ್ಧವಲ್ಲದೆ ಹೋಗಿದ್ದರೆ ನನ್ನ ಮಗುವನ್ನು ಹೇಗಾದರೂ ಬದುಕಿಸಿ ಕೊಳ್ಳುತ್ತಿದ್ದೆವಲ್ಲ ದೇವರೇ? ಈ ಮನುಷ್ಯರಿಗೆ ಎಂತಹ ಬುದ್ಧಿ ಕೊಡುತ್ತೀಯಾ ? " ಮುದುಕಿ ನೆರಾಸೆಯಿಂದ ನುಡಿದಳು.

೫.  ರಾಮನು ಗಿರಿವನವನ್ನು ಏನೆಂದು ಪ್ರಾರ್ಥಿಸಿದನು?
ಉ:  ರಾಮನು ಗಿರಿವನವನ್ನು ಕುರಿತು, " ಗಿರಿವನಗಳೇ ನಾನು ನಿಮ್ಮನ್ನು ಬೆಡಿಕೊಳ್ಳುವೆನು, ಪ್ರೀತಿಯ ರಾಣಿ ಸೀತೆಯು ನನಗೆ ದೊರೆಯುವಳೇ? ಭೂಮಿಜಾತೆ ಆತ್ಮಕಾಮಕಲ್ಪಲತೆ ದೊರೆಯುವಳೇ ಚೆಲುವೆ? ಅವಳು ಇರುವ ಸ್ಥಳವನ್ನು ನೀವು ತಿಳಿದಿರುವಿರೇ?  ನನ್ನ ಹೃದಯದ ಈ ದು:ಖವು ನಾಶವಾಗುತ್ತಿಲ್ಲವಲ್ಲ" ಎಂದು ಪ್ರಾರ್ಥಿಸಿದನು.
 
೬.  ಲಕ್ಷ್ಮಣನು ಅಣ್ಣನನ್ನು ಹೇಗೆ ಸಂತೈಸಿದನು?
ಉ:  ಲಕ್ಷ್ಮಣನು ಸೀತೆಗಾಗಿ ಪರಿತಪಿಸುತ್ತಿದ್ದ ಅಣ್ಣನಾದ ರಾಮನನ್ನು ಕುರಿತು , " ತಾಳಿಕೋ ಅಣ್ಣ, ತಾಳಿಕೋ ಸೂರ್ಯನೇ ತೇಜಸ್ಸನ್ನು ಕಳೆದುಕೊಂಡರೆ ಕಾಂತಿಯನ್ನು ನೀಡುವವರು ಯಾರು? ಹಾಗೆ ರಾಮನೇ ಧೈರ್ಯ ಕಳೆದುಕೊಂಡರೆ ಲೋಕಕ್ಕೆ ಸ್ಥೈರ್ಯ ನೀಡುವವರು ಯಾರು? " ಎಂದು ಹೇಳಿ ಸಂತೈಸಿದನು.

೭.  ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು?
ಉ:  ಶಬರಿ ಪ್ರತಿದಿನವು ರಾಮ ಬರುವನೆಂದು ರಾಮನ ಸ್ವಾಗತಕ್ಕಾಗಿ ಶಬರಿಯು ಸವಿಯಾದ ಬಗೆಬಗೆಯ ಸಿಹಿಯಾದ ಹಣ್ಣುಗಳನ್ನು ಆಯ್ದು ತರುವಳು. ಜೇನುತುಪ್ಪ ಅಧಿಕವಾಗಿರುವ ಮಧುಪರ್ಕವೆಂಬ ಪಾನೀಯವನ್ನು ರಾಮನಿಗೆ ಅಣಿಗೊಳಿಸುವಳು. ರಾಮನಿಗೆ ಸಮರ್ಪಿಸಲು ಹೊಸದಾದ ಹೂವುಗಳನ್ನು ಸಂಗ್ರಹಿಸಿ ಸಿದ್ಧಮಾಡಿಕೊಂಡಿದ್ದಳು.

೮.  ಶಬರಿಯು ರಾಮ ಲಕ್ಷ್ಮಣರನ್ನು ಉಪಚರಿಸಿದ ರೀತಿಯನ್ನು ವಿವರಿಸಿ.
ಉ:  ಶಬರಿಯು ರಾಮ ಲಕ್ಷ್ಮಣರನ್ನು ಕಂಡು ಬೆರಗಾದಳು.ಹತ್ತಿರಕ್ಕೆ ಬಂದು ಮೈಯನ್ನು ಮುಟ್ಟಿ, ಕಾಲಿಗೆ ಬಿದ್ದು ನಮಸ್ಕರಿಸಿ, ಕೈ ಕಣ್ಣಿಗೊತ್ತಿಕೊಂಡಳು. ಬಗೆಬಗೆಯ ಸುವಾಸನೆಯುಳ್ಲ ಹೂ ಮಾಲೆಯನ್ನು ಕೊರಳಿಗೆ ಹಾಕಿ ಸಂತಸಪಟ್ಟು ಜಗದಲ್ಲಿ ಇದರಷ್ಟು ರುಚಿಯಾದ ಹಣ್ಣೇ ಇಲ್ಲ ನಿಮಗೆಂದು ತಂದೆನು ಎಂದು ಹೇಳುತ್ತಾ ಸವಿಯಾದ ಹಣ್ಣುಗಳನ್ನು ನೀಡಿ ಉಪಚರಿಸಿದಳು.

೯.  ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ ಏನು ಹೇಳಿದರು?
ಉ:  ಆತಿಥ್ಯ ಸ್ವೀಕರಿಸಿದ ರಾಮಲಕ್ಷ್ಮಣರು ಶಬರಿಗೆ, " ನಾವು ನಿನ್ನ ಪ್ರೀತಿಯ ಸ್ವಾಗತದಿಂದ ಸಂತಸಗೊಂಡೆವು. ನಿನ್ನ ಸುಖದಲ್ಲಿ ನಮ್ಮ ಸುಖ ಕಂಡೆವು. ಕಣ್ಣಿಗೆ ಕಾಣದ ಆನಂದವನ್ನು ಅನುಭವಿಸುವ ಪುಣ್ಯ ನಮ್ಮದಾಯಿತು. ನಾವು ನಿನಗೆ ಎಂದೆಂದಿಗೂ ಋಣಿಗಳು. ನಿನ್ನ ಸೇವೆಯಲ್ಲಿ ಸ್ವಲ್ಪವು ಕೊರತೆಯಿಲ್ಲ. ಅಯೋಧ್ಯೆಯ ಅರಮನೆಯಲ್ಲಿ ಪಡೆಯುವುದಕ್ಕಿಂತ ಹೆಚ್ಚಿನ ಸತ್ಕಾರ ನಿನ್ನಿಂದ ದೊರಕಿತು. ಈ ಕಾಡನ್ನು ಮನೆ ಎಂದು ಕೊಂಡೆವು. ನಿನ್ನಲ್ಲೇ ಮಾತೃ ಸ್ವರೂಪವನ್ನು ನೋಡಿದೆವು" ಎಂದು ಹೇಳಿದರು.

೧೦. ವೂಲವರ್ಥ ಅಂಗಡಿಯಲ್ಲಿ ಸಿಗುವ ವಸ್ತುಗಳಾವುವು?
ಉ:  ವೂಲವರ್ಥ ಅಂಗಡಿಯಲ್ಲಿ ಬೂಟು, ಕಾಲುಚೀಲ, ಚಣ್ಣ, ಸಾಬೂನು, ಔಷಧ, ಪುಸ್ತಕ, ಅಡುಗೆಯ ಪಾತ್ರೆ, ಇಲೆಕ್ಟ್ರೀಕ್ ದೀಪದ ಸಾಮಾನು, ಫೋಟೋ, ಅಡವಿಯ ಹೂವು, ಯುದ್ಧ ಸಾಮಗ್ರಿ ಎಲ್ಲವೂ ದೊರೆಯುತ್ತದೆ.

೧೧. ಲಂಡನ್ನಿನ ಹೆಣ್ಣು ಮಕ್ಕಳು ಯಾವ ಯಾವ ಕೆಲಸದಲ್ಲಿ ನಿಯುಕ್ತರಾಗಿರುತ್ತಾರೆ?
ಉ:  ಲಂಡನ್ನಿನ ಎಲ್ಲ ಅಂಗಡಿಗಳಲ್ಲಿ ಸಾಮಾನ್ಯವಾಗಿ ಸ್ತ್ರೀಯರೇ ಕೆಲಸ ಮಾಡುತ್ತಾರೆ. ಯಾವುದಾದರೊಂದು ದೊಡ್ಡ ಅಂಗಡಿಗೆ ಹೋದರೆ ಅಲ್ಲಿಯ ಟೈಪಿಸ್ಟ್ ಕಾರಕೂನ ಒಬ್ಬ ಹೆಣ್ಣು ಮಗಳು. ಸಿನಿಮಾ ಗೃಹದಲ್ಲಿ ನಿಮ್ಮ ಜಾಗವನ್ನು ಹುಡುಕಿಕೊಡುವವರು ಹೆಣ್ಣು ಮಗಳು. ಅಲ್ಲಿ ಕಾಲೇಜಿನಲ್ಲಿ ಸಹ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ಸಿಪಾಯಿಣಿಯರನ್ನುಇಟ್ಟಿದ್ದಾರೆ.

೧೨.ಟೊಪ್ಪಿಗೆಯ ವಿಶೇಷತೆಯನ್ನು ಲೇಖಕರು ಹೇಗೆ ದಾಖಲಿಸಿದ್ದಾರೆ?
ಉ:  ಲಂಡನ್ನಿನಲ್ಲಿ ಹೆಣ್ಣು ಮಕ್ಕಳು ಧರಿಸುವ ಟೊಪ್ಪಿಗೆಯ ವಿಶೇಷತೆಯನ್ನು ತಿಳಿಸುತ್ತಾ ಲೇಖಕರು ಒಂದು ಟೊಪ್ಪಿಗೆಯಂತೆ ಇನ್ನೊಂದಿರುವುದಿಲ್ಲ ಸಿಕ್ಕಿಸಿದ ಪುಚ್ಚವಾದರು ಕನಿಷ್ಠ ಪಕ್ಷಕ್ಕೆ ಬೇರೆಯಾಗಿರುತ್ತದೆ. ಕೋಟ್ಯವಧಿ ಟೊಪ್ಪಿಗೆಯನ್ನು ಬೇಕಾದರೆ ಪರೀಕ್ಷಿಸಿ ಮನಗಾಣಬಹುದು. ಮನುಷ್ಯನಂತೆ ಟೊಪ್ಪಿಗೆಯಲ್ಲವೇ, ಒಬ್ಬ ಮನುಷ್ಯಳಂತೆ ಇನ್ನೊಬ್ಬಳಿಲ್ಲ ಎಂದು ದಾಖಲಿಸಿದ್ದಾರೆ.

೧೩. ಪೊಯೆಟ್ ಕಾರ್ನರ್ ನಲ್ಲಿ ಯಾವ ಯಾವ ಕವಿಗಳ ಸಮಾಧಿಗಳಿವೆ?
ಉ:  ಪೊಯೆಟ್ಸ್ ಕಾರ್ನರ್ ನಲ್ಲಿ ಕಿಪ್ಲಿಂಗ್, ಹಾರ್ಡಿಯು, ಮ್ಯಾಕಾಲೆ, ಜಾನ್ಸನ್, ಗೋಲ್ಡ್ ಸ್ಮಿತ್, ಡ್ರಾಯ್ ಡನ್, ಬೆನ್ ಜಾನ್ಸನ್ ಮತ್ತು ವರ್ಡ್ಸ್ ವರ್ತ್ ಕವಿಗಳ ಸಮಾಧಿಗಳಿವೆ.

೧೪. ಸಾಮ್ರಾಟರ ರಾಜ್ಯಾಭಿಷೇಕವಾಗುವ ಸಿಂಹಾಸನದ ಮೇಲಿರುವ ಕಲ್ಲಿಪಾಟಿಯ ವಿಶೇಷತೆಯೇನು?
ಉ:  ಸಾಮ್ರಾಟರ ರಾಜ್ಯಾಭಿಷೇಕವಾಗುವಾಗ ಅವರ ಸಿಂಹಾಸನದ ಮೇಲೆ ಒಂದು ಕಲ್ಲು ಪಾಟಿಯನ್ನು ಹಾಕುತ್ತಾರೆ. ಪಟ್ಟಾಭಿಷೇಕವಾಗುವಾಗ ಮಾತ್ರ ಸಾಮ್ರಾಟರು ಇದರ ಮೇಲೆ ಕೂಡಬೇಕು. ಈ ಶಿಲೆಯನ್ನು ಒಳಗೊಂಡ ಸಿಂಹಸನವು ವೆಸ್ಟ್ ಮಿನಿಸ್ಟರ್ ಮಂದಿರದಲ್ಲಿಯ ಒಂದು ಭಾಗದಲ್ಲಿದೆ. ’ ಸ್ಟೋನ್ ಆಫ್ ಸ್ಕೋನ್ ’ ಎಂದು ಇದರ ಹೆಸರು. ೩ನೇ ಎಡ್ವರ್ಡನು ಸ್ಕಾಟ್ ಲೆಂಡಿನಾರಸರಿಂದ ಇದನ್ನು ಕಿತ್ತುಕೊಂಡು ಬಂದಂತೆ ಕಾಣುತ್ತದೆ. ಅಂದಿನಿಂದ ಎಲ್ಲ ಸಾಮ್ರಾಟರ ಅಭಿಷೇಕವು ಈ ಕಲ್ಲಿನ ಮೇಲೆಯೇ ಆಗಿದೆ. ಅದರಲ್ಲಿ ಯಾವ ಸಿದ್ಧಿಯಿದೆಯೋ, ಯಾವ ಮಂತ್ರವಿದೆಯೋ , ಇಂಗ್ಲೆಂಡಿನ ಅತುಲ ವೈಭವವನ್ನು ನೋಡಿದರೆ ಇಂಥದೊಂದು ವಿಶೇಷವೇನಾದರೂ ಅದರಲ್ಲಿ ಇರಬಹುದು ಎನಿಸುತ್ತದೆ.



೧೫. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು?
ಉ:  ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ, ೧. ಗ್ರಾಮ ನಿರ್ಮಲೀಕರಣ ೨. ವೈದ್ಯ ಸಹಾಯ ೩. ವಿದ್ಯಾ ಪ್ರಚಾರ ೪. ನೀರಿನ ಸೌಕರ್ಯ  ೫. ಪ್ರಯಾಣ ಸೌಸಭ್ಯ ಮುಂತಾದ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು.

೧೬. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ನೀರಾವರಿ ಯೋಜನೆಗಳು ಕಾರ್ಯರೂಪಕ್ಕೆ ಬಂದವು?
ಉ:  ೧೯೦೦ ರಲ್ಲಿಯೇ ಶಿವನ ಸಮುಗ್ರದ ಬಳಿ ಕಾವೇರಿ ನದಿಯಿಂದ ಜಲವಿದ್ಯುತ್ ಉತ್ಪಾದನಾಕೇಂದ್ರ ಪ್ರಾರಂಭಬಾಯಿತು. ಇದು ಭಾರತ ಮಾತ್ರವಲ್ಲ ಏಷ್ಯಾ ಖಂಡದಲ್ಲೇ ಮೊದಲ್ ಜಲವಿದ್ಯುತ್ ಯೋಜನೆ. ೧೯೦೭ರಲ್ಲಿ ವಾಣಿ ವಿಲಾಸ ಸಾಗರ ( ಮಾರಿ ಕಣಿವೆ) ಕಟ್ಟಲ್ಪಟ್ಟಿತು. ೧೯೧೧ರಲ್ಲಿ ಕೃಷ್ಣರಾಜ ಸಾಗರ ಇವರ ಬೃಹತ್ ಕೊಡುಗೆ.

೧೭. ಶಿಕ್ಷಣದ ಬಗ್ಗೆ ವಿಶ್ವೇಶ್ವರಯ್ಯ ಅವರು ಏನೆಂದು ಹೇಳಿದ್ದಾರೆ?
ಉ:  ವಿಶ್ವೇಶ್ವರಯ್ಯ ಅವರು ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರವೆಂದು ನಂಬಿ ಶಿಕ್ಷಣವು  ಸಂಜೀವಿನಿ ಎಂದು ಅರಿತು ಶಿಕ್ಷಣದಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿದರು. ಮತ್ತು " ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸ್ವತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು." ಎಂದು ವಿಶ್ವೇಶ್ವರಯ್ಯನವರು ಶಿಕ್ಷಣದ ಬಗ್ಗೆ ಹೇಳಿದ್ದಾರೆ.

೧೮. ನೆಹರೂ ಅವರು ಸರ್. ಎಂ. ವಿಶ್ವೇಶ್ವರಯ್ಯ ಅವರ ಬಗ್ಗೆ ಏನೆಂದು ಹೇಳಿದ್ದಾರೆ?
ಉ:  " ದುರದೃಷ್ಟವಶಾತ್ ಭಾರತಿಯರಾದ ನಾವು ಹೆಚ್ಚು ಮಾತನಾಡುವವರು ಮತ್ತು ನುಡಿದಂತೆ ನಡೆಯಲಾರದವರೆಂಬ ದೂಷಣೆಗೆ ಒಳಗಾಗಿದ್ದೇವೆ. ತಾವು ಈ ಮಾತಿಗೆ ಬಹು ದೊಡ್ಡ ರೀತಿಯಲ್ಲಿ ಹೊರತಾಗಿದ್ದೀರಿ. ತಾವು ಕಡೆಮೆ ಮಾತನಾಡಿದ್ದೀರಿ: ಹೆಚ್ಚು ಕೆಲಸ ಮಾಡಿದ್ದೀರಿ. ಅದನ್ನು ನಾವು ತಮ್ಮಿಂದ ಕಲಿಯೋಣ." ಎಂದು ನೆಹರೂ ಅವರು ಬೆಂಗಳೂರಿನಲ್ಲಿ ನಡೆದ ವಿಶ್ವೇಶ್ವರಯ್ಯ ನವರ ಶತಮಾನೋತ್ಸವ ಸಮಾರಂಭದಲ್ಲಿ ಅವರ ಬಗ್ಗೆ ಈ ರೀತಿ ಹೇಳಿದರು.

೧೯. ಹಣಕಾಸು ನೀತಿಯಲ್ಲಿ ವಿಶ್ವೇಶ್ವರಯ್ಯ ಅವರು ಮಾಡಿದ ಮಾರ್ಪಾಡುಗಳಾವುವು?
ಉ:  ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕುವ ಉದ್ಧೇಶದಿಂದ ಹಣಕಾಸು ನೀತಿಯಲ್ಲಿ ಮಾರ್ಪಾಡು ಮಾಡಿದರು. ಇದಕ್ಕಾಗಿ ೧೯೧೩ರಲ್ಲಿ ಮೈಸೂರು ಬ್ಯಾಂಕನ್ನು ಸ್ಥಾಪಿಸಿದರು. ಅನಂತರ ಉಳಿತಾಯ ಬ್ಯಾಂಕ್ ಗಳು ಅಸ್ತಿತ್ವಕ್ಕೆ ಬಂದವು. ಕೈಗಾರಿಕೆಗಳ ಅಭಿವೃದ್ಧಿಗೆ ಫೀಡರ್ ಬ್ಯಾಂಕ್ ಹಾಗೂ ಕೈಗಾರಿಕಾ ಹೂಡಿಕೆ ಮತ್ತು ಅಭಿವೃದ್ಧಿ ನಿಧಿಗಳು ರಚಿತಗೊಂಡವು. ಸಾರ್ವಜನಿಕ ಜೀವವಿಮಾ ಯೋಜನೆ ಜಾರಿಗೆ ತಂದರು. ರೈತರಿಗೆ ಹಾಗೂ ಕರಕುಶಲ ಕೆಲಸಗಾರರಿಗೆ ಸಾಲದ ಸೌಲಭ್ಯ ನೀಡಲು ಸಹಕಾರಿ ಕ್ಷೇತ್ರವನ್ನು ಬಲವರ್ಧನೆಗೊಳಿಸಿದರು. ಪ್ರಾಂತೀಯ ಸಹಕಾರಿ ಬ್ಯಾಂಕ್ ಗಳನ್ನು ಸ್ಥಾಪಿಸಿದರು. ರಾಜ್ಯದ ಅಸ್ತಿಯನ್ನು ಹೆಚ್ಚಿಸಿ, ಆದಾಯ ತರುವುದರ ಮೂಲಕ್ ಅಭಿವೃದ್ದಿ ಕಾರ್ಯಗಳ ಪ್ರಭಾವವನ್ನು ಅಳೆಯಲು ಅನುಕೂಲವಾಗುವಂತೆ ಆಯವ್ಯಯದಲ್ಲಿ ಹೊಸ ದೃಷ್ಟಿಕೋನವನ್ನು ಕಂಡುಕೊಂಡರು.

೨೦. ಅಶೋಕ ಪೈ ಹೇಳಿದ ಸಂಶೋಧನಾ ಸತ್ಯವೇನು?
ಉ:  ಅಶೋಕ ಪೈಯವರು ಹೇಳಿದ ಸಂಶೋಧನಾ ಸತ್ಯವೆನೆಂದರೆ ಒಂದು ಕೊಠಡಿಯಲ್ಲಿ ಕುಳಿತು ಟೆಲಿವಿಷನ್ ನೋಡುತ್ತಿದ್ದವರ ಮನಸ್ಸಿನಲ್ಲಿ ಉಂಟಾದ  ಸಂತೋಷ ಅಥವಾ ದು:ಖದ ಸನ್ನಿವೇಶಗಳು ಪಕ್ಕದ ಕೊಠಡಿಯಲ್ಲಿ
ಸುಮ್ಮನೆ ಕುಳಿತವರ ಮನಸ್ಸಿನ ಮೇಲು  ಸ್ವಲ್ಪ ಮಟ್ಟಿಗಾದರು ಪರಿಣಾಮ ಉಂಟಾಗುತ್ತದೆ. ಈ ಉದಾಹರಣೆ ಹೇಳುವ ನಿಜವೆಂದರೆ ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ . ಯಾವುದೇ ಒಂದು ಜೀವಿಗೆ ಆಗುವ ದು:ಖ ದುಮ್ಮಾನ ಪರಿಸರದಲ್ಲಿ ಉಸಿರಾಡುತ್ತ ಎಲ್ಲಾ ಜೀವಿಗಳಲ್ಲೂ ಕಂಪನ ಉಂಟು ಮಾಡುತ್ತಿರುತ್ತದೇನೊ, ಈ ಅನುಕಂಪನ ಇಡೀ ಜೀವಸಂಕುಲವನ್ನೇ ಒಂದು ಎಂದು ಹೇಳುತ್ತದೆ.

೨೧.  ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೇನು? ವಿವರಿಸಿ.
ಉ:  ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ತನ್ನಷ್ಟಕ್ಕೆ ತಾನು ಇರುವ ಕೇವಲ ತಿಳುವಳಿಕೆ., ಜ್ಞಾನ ಮಾತ್ರ ಅಲ್ಲ, ಅದು ಕ್ರಿಯೆಯ ಅನುಭವದಿಂದ ಒಡ ಮೂಡುವುದು. ಅದು ಕೇಳಿ ತಿಳಿದಿದ್ದಲ್ಲ. ಕ್ರಿಯೆಯಲ್ಲಿ ಮೂಡಿದ ತಿಳಿವಳಿಕೆ ಅದು ತರ್ಕವಲ್ಲ ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು.

೨೨. ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು?
ಉ:  ರೈತರಿಂದ ಸಂಗ್ರಹಿಸಿದ್ದ ಕಂದಾಯದ ಮೊತ್ತವನ್ನು ಚಿಕ್ಕನಾಯಕನಹಳ್ಳಿಯಲ್ಲಿರುವ ಖಜಾನೆಗೆ ಕಟ್ಟಿ ಅಲ್ಲಿದ್ದ ಸ್ನೇಹಿತರನ್ನು ನೋಡಿಕೊಂಡು ಅಲ್ಲಿಂದ ವಾಪಸ್ಸು ಹೊರಡುವ ವೇಳೆಗೆ ಸಂಜೆ ಆರು ಘಂಟೆಯಾಗಿತ್ತು. ಅವರು ತಮ್ಮ ಹಳ್ಳಿಯನ್ನು ತಲುಪಬೇಕಾದರೆ ಮದಲಿಂಗನ ಕಣಿವೆಯನ್ನು ದಾಟಿ ಹೋಗಬೇಕು. ಕಾಡು ದಾರಿ, ಆದರೂ ಬೆಳುದಿಂಗಳ ದಿನ : ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು ಎಂದು ಶಾನುಭೋಗರು ಯೋಚಿಸಿದರು.

೨೩. ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳೇನು?
ಉ:  ಶಾನುಭೋಗರು ಹುಲಿಗೆ ಅಭಿಮುಖವಾಗಿ ಅದರ ಕಡೆಗೆ ಬೆನ್ನು ತಿರುಗಿಸಿ ನಡೆಯುತ್ತಿದ್ದುದರಿಂದ ಹುಲಿ ಹಿಂದಿನಿಂದ ಹಾರಿ ಕೊಲ್ಲಲಿಲ್ಲ ಏಕೆಂದರೆ ಯಾರನ್ನೇ ಆಗಲಿ ಭರತಖಂಡದ ಹುಲಿಗಳು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ, ಶತ್ರುವನ್ನಾದರು ಸರಿಯೆ ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ ಎಂದು ನಂಬಿದ್ದ ಹುಲಿಯು ಶಾನುಭೋಗರನ್ನು ಹಿಂದಿನಿಂದ ಹಾರಿ ಕೊಲ್ಲಲಿಲ್ಲ.


೨೪. ಶಾನುಭೋಗರು ಮೂರ್ಛೆಯಲ್ಲಿದ್ದಾಗ ನಡೆದ ಘಟನೆಗಳನ್ನು ವಿವರಿಸಿ.
ಉ:  ಚಿಕ್ಕನಾಯಕನ ಹಳ್ಳಿಗೆ ತೆಂಗಿನ ಕಾಯಿ ತುಂಬಿಕೊಂಡು ಹೋಗಿದ್ದ ರೈತರ ಗಾಡಿಯು ಎತ್ತುಗಳು ಮುಂದೆ ಹೋಗದೆ ನಿಂತವು ಹುಲಿಯ ಗರ್ಜನೆ ಕೇಳಿಸಿತು. ಎತ್ತುಗಳ ಗಂಟೆಯ ಸದ್ದನ್ನು ಕೇಳಿದ ಹುಲಿಯು ಅರೆ ನಿಮಿಷ ತಡೆದು ರೈತರ ಮಾತು ಕೇಳಿ ಬಂದ ಮೇಲೆ ನಿರಾಸೆಯಿಂದ ಪಲಾಯನ ಮಾಡಿತು. ಅನಂತರ ರೈತರು ತಮ್ಮಲ್ಲಿದ್ದ ಕೋವಿಯಿಂದ ಒಂದೆರಡು ತೋಟಾ ಹಾರಿಸಿ ಸಾಧ್ಯವಾದಷ್ಟು ಗಲಭೆ ಮಾಡುತ್ತ ತೆಂಗಿನ ಗರಿಯ ಪಂಜು ಹೊತ್ತಿಸಿಕೊಂಡು ಜಾಗರುಕತೆಯಿಂದ ಮುಂದೆ ಬಂದರು. ಮೂರ್ಛೆಯಲ್ಲಿ ಬಿದ್ದಿದ್ದ ಶಾನುಭೋಗರನ್ನು ಕಂಡು ಮುಖದ ಮೇಲೆ ನೀರನ್ನು ಹಾಕಿ ಅವರನ್ನು ಎಚ್ಚರಿಸಿದರು.ಇವೆಲ್ಲವೂ ಶಾನುಭೋಗರು ಮೂರ್ಛೆಯಲ್ಲಿದ್ದಾಗ ನಡೆದ ಘಟನೆಗಳು.


೨೫. ಧರ್ಮಬುದ್ಧಿಗೆ ದುಷ್ಟಬುದ್ಧಿಯು ಯಾವ ಸಲಹೆಯಿತ್ತನು?
ಉ:  ಧರ್ಮಬುದ್ಧಿ ಮತ್ತು ದುಷ್ಟಬುದ್ಧಿಗಳಿಬ್ಬರೂ ವ್ಯಾಪಾರಕ್ಕೆ ಹೋಗಿ ಸಾಕಷ್ಟು ಹಣ ಸಂಪತ್ತುಸಂಪಾದಿಸಿಕೊಂಡು ತಮ್ಮ ಜನ್ಮಭೂಮಿಗೆ ಮರಳಿಬರುವಾಗ ಹೊರ ಉದ್ಯಾನವನದಲ್ಲಿ ರಾತ್ರಿಯನ್ನು ಕಳೆಯಬೇಕಾಯಿತು. ಅರ್ಧರಾತ್ರಿಯಲ್ಲಿ ಧರ್ಮಬುದ್ಧಿಯು ದುರ್ಬುದ್ಧಿಯಾದ ದುಷ್ಟಬುದ್ಧಿಯನ್ನು ಕರೆದು ಚಿನ್ನವನ್ನು ಹಂಚಿಕೊಳ್ಳೋಣ ಎಂದಾಗ ದುಷ್ಟಬುದ್ಧಿಯು ಪಾಪಬುದ್ಧಿಯವನಾಗಿ " ನಾವು ಈ ಹೊನ್ನನ್ನು ಹಂಚಿಕೊಂಡು ಮನೆಯಲ್ಲಿ ಸ್ವೇಚ್ಛೆಯಿಂದ ಇರುವವರಲ್ಲ ಮತ್ತೆ ವ್ಯಾಪಾರಕ್ಕೆ ಹೋಗಬೇಕಾಗುತ್ತದೆ. ಆ ಕಾರಣದಿಂದ ನಿನಗೂ ನನಗೂ ಖರ್ಚಿಗೆ ತಕ್ಕಷ್ಟು ಹೊನ್ನನ್ನು ತೆಗೆದುಕೊಂಡು ಉಳಿದ ಹೊನ್ನೆಲ್ಲವನ್ನು ಇಲ್ಲಿಯೇ ಇಟ್ಟುಬಿಡೋಣ" ಎಂದು ಸಲಹೆಯಿತ್ತನು.

೨೬. ದುಷ್ಟಬುದ್ಧಿಯು ತನ್ನ ತಂದೆಗೆ ಏಕಾಂತದಲ್ಲಿ ಏನೆಂದು ಹೇಳಿದನು?
ಉ:  ದುಷ್ಟಬುದ್ಧಿಯು ತನ್ನ ತಂದೆಯ ಕೈ ಹಿಡಿದು ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿ, " ನಿನ್ನ ಒಂದು ಮಾತಿನಿಂದ ನಮ್ಮ ಕಷ್ಟಗಳೆಲ್ಲವೂ ಪರಿಹಾರವಾಗಿ ಹಲವು ಕಾಲ ಹಸಿಯದೇ ಊಟಮಾಡಿ ಬಾಳುವಂತಹ ಸಂಪತ್ತನ್ನು ಗಳಿಸುವ ಸಾಧನೆಯನ್ನು ಮಾಡಬಹುದು. ನೀನು ಆ ಮರದ ಪೊಟರೆಯಲ್ಲಿ ಅಡಗಿದ್ದು, ಧರ್ಮಬುದ್ಧಿಯೇ ಹೊನ್ನು ತೆಗೆದುಕೊಂಡು ಹೋದನೆಂದು ಹೇಳು " ಎಂದು ಹೇಳಿದನು.

೨೭. ಧರ್ಮಾಧಿಕರಣರು ವಟವೃಕ್ಷಕ್ಕೆ ಏನು ಹೇಳಿದರು?
ಉ:  ಧರ್ಮಾಧಿಕರಣರು ವಟವೃಕ್ಷಕ್ಕೆ " ನೀನಾದರೋ ಯಕ್ಷಾದಿ ದಿವ್ಯದೇವತೆಗಳು ವಾಸಮಾಡುವಂತಹ ಮತ್ತು ಅವರ ಸೇವೆಯನ್ನು ಮಾಡುವಂತವನು ಆಗಿದ್ದೀಯ .ಆ ಕಾರಣದಿಂದ ನಿನ್ನನ್ನು ಸಾಕ್ಷಿಮಾಡಿಕೊಂಡು ಕೇಳುತ್ತಿದ್ದೇನೆ. ನೀನು ತಪ್ಪದೆ ಸಾಕ್ಷಿಯನ್ನು ನುಡಿ " ಎಂದು ಹೇಳಿದರು. 



೨೮.  ಸುಕುಮಾರ ಸ್ವಾಮಿಯು ಹೇಗೆ ಸುಖಭೋಗಗಳನ್ನು ಅನುಭವಿಸುತ್ತಿದ್ದನು?
ಉ:  ಸುಕುಮಾರಸ್ವಾಮಿಯು ತಾರುಣ್ಯವನ್ನು ಪಡೆದು ಅತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿಯಿಂದ ಕೂಡಿದವನಾದನು. ಅವನಿಗೆ ಮೂವತ್ತೆರಡು ಲತಾಗೃಹಗಳು, ಅತ್ಯಂತ ರೂಪ ಲಾವಣ್ಯ ಸೌಭಾಗ್ಯ, ಕಾಂತಿ, ಹಾವಭಾವ, ವಿಲಾಸ, ವಿಭ್ರಮಗಳಿಂದ ಕೂಡಿದ ದೇವತಾಸ್ತ್ರೀಯರನ್ನು ಹೋಲುವ ಮೂವತ್ತೆರಡು ಮಂದಿ ದಿವ್ಯರಾದ ಸ್ತ್ರೀಯರು ಇದ್ದರು. ಮೂವತ್ತೆರಡು ಬಗೆಯ ನೃತ್ಯಗಾರ್ತಿಯರು, ಮೂವತ್ತೆರಡು ಕೋಟಿ ಹೊನ್ನು ೫ ಬಗೆಯ ರತ್ನಗಳು ಇವೆಲ್ಲವನ್ನು ಹೊಂದಿದ್ದ ಸುಕುಮಾರಸ್ವಾಮಿ ಎಲ್ಲಾ ರೀತಿಯ ಸುಖಗಳನ್ನು ಅನುಭವಿಸುತ್ತಿದ್ದನು.

೨೯. ಅರಸ ವೃಷಭಾಂಕನು ಆಶ್ಚರ್ಯಗೊಳ್ಳಲು ಕಾರಣವೇನು?
ಉ:  ಒಮ್ಮೆ ಒಬ್ಬ ವರ್ತಕನು ಲಕ್ಷ ದೀನಾರಗಳ ಬೆಲೆ ಬಾಳುವ ರತ್ನಗಂಬಳಿಯನ್ನು ಮಾರಲು ಉಜ್ಜಯಿನಿಗೆ ತೆಗೆದುಕೊಂಡು ಬಂದಿದ್ದಾಗ ಆ ಪಟ್ಟಣವನ್ನಾಳುವ ವೃಷಭಾಂಕನೆಂಬ ರಾಜ ಮತ್ತು ಮಹಾರಾಣಿ ಅವುಗಳ ಬೆಲೆ ಹೆಚ್ಚಾಯಿತೆಂದು ಕ್ರಯಕ್ಕೆ ಕೊಳ್ಳಲಿಲ್ಲ. ಆದರೆ ಸುಕುಮಾರಸ್ವಾಮಿಯ ತಾಯಿ ಅಷ್ಟು ಬೆಲೆಕೊಟ್ಟು ಖರೀದಿಸಿ ಅವುಗಳನ್ನು ಮೂವತ್ತೆರಡು ತುಂಡುಗಳನ್ನಾಗಿ ಮಾಡಿ ಸೊಸೆಯಂದಿರಿಗೆ ಪಾದುಕೆಗಳಿಗೆ ಸಿಕ್ಕಿಸಿಕೊಳ್ಳಲು ಕೊಟ್ಟಳು.
ಈ ಸಂಗತಿಯನ್ನು ತಿಳಿದು ರಾಜನು ಆಶ್ಚರ್ಯ ಪಟ್ಟನು


೩೦.  ವೃಷಭಾಂಕನು ಸುಕುಮಾರಸ್ವಾಮಿಗೆ ವ್ಯಾದಿಯಿದೆ ಎಂದುಕೊಳ್ಳಲು ಕಾರಣವೇನು?
ಉ:   ವೃಷಭಾಂಕನು ಸುಕುಮಾರಸ್ವಾಮಿಯ ಮನೆಗೆ ಆಗಮಿಸಿದಾಗ ಸ್ವಜನರು ಪುರಜನರು ಬಿಳಿ ಸಾಸಿವೆಗಳನ್ನು ಮಂಗಳಕರವೆಂದು ಇಬ್ಬರಿಗೂ ಮಂತ್ರಾಕ್ಷತೆಯನ್ನು ಹಾಕಿದರು. ಆ ಬಿಳಿ ಸಾಸಿವೆಗಳು ಸುಕುಮಾರಸ್ವಾಮಿ ಕುಳಿತ್ಇದ್ದ ಆಸನದಲ್ಲಿ ಒತ್ತುತ್ತಿದುದರಿಂದ ಸೊಂಟವನ್ನು ಅತ್ತಿತ್ತ ಹೊರಳಾಡಿಸುತ್ತಿದ್ದುದನ್ನು , ದೀಪ ನೋಡಿದಾಗ ಅವನಿಗೆ ಕಣ್ಣೀರು ಸುರಿಯುತ್ತಿದ್ದುದನ್ನು, ಅಲ್ಲದೆ ಊಟ ಮಾಡುವಾಗ ಸುಕುಮಾರಸ್ವಾಮಿ ಆಹಾರದ ಅರ್ಧಾಂಶವನ್ನು ನುಂಗುತ್ತ ಇನ್ನುಳಿದ ಅರ್ಧಾಂಶ ಆಹಾರವನ್ನು ಉಗುಳುತ್ತಿದ್ದನು. ಅದನ್ನು ಅರಸನು ನೋಡಿ ಸುಕುಮಾರಸ್ವಾಮಿಗೆ ವ್ಯಾದಿ ಇದೆ ಎಂದು ಭಾವಿಸಿದನು.

೩೧.  ಸುಕುಮಾರಸ್ವಾಮಿಯ ವ್ಯಾದಿಗೆ ಮದ್ದನ್ನು ಏಕೆ ಮಾಡಿಸಿಲ್ಲ ಎಂದು ಅರಸನು ಕೇಳಿದಾಗ ತಾಯಿ ಯಶೋಭದ್ರೆಯು ಏನೆಂದು ಹೇಳಿದಳು?
ಉ:   ಅರಸ ವೃಷಭಾಂಕನು ಯಶೋಭದ್ರೆಯನ್ನು ಕುರಿತು ಸುಕುಮಾರನಿಗೆ ಸೊಂಟದ ರೋಗಕ್ಕೂ , ಕಣ್ಣಿರು ಸುರಿಯುವುದಕ್ಕೂ , ಊಟ ಸೇರದಿರುವುದಕ್ಕೂ ಏಕೆ ಔಷಧ ಮಾಡಿಸಿಲ್ಲ ಎಂದು ಕೇಳಿದಾಗ ಅವಳು ಮಹಾರಾಜರೇ ಇವು ರೋಗಗಳಲ್ಲ. ಮಂತ್ರಾಕ್ಷತೆಯಾಗಿ ಹಾಕಿದ ಬಿಳಿಸಾಸಿವೆಗಳು ಒತ್ತಿದುದರಿಂದ ಸಹಿಸದಾದನು. ಅವನು ಯಾವಾಗಲೂ ಮಾಣಿಕ್ಯದ ರತ್ನದ ಬೆಳಕಿನಲ್ಲಿ ಇರುವುದರಿಂದ ದೀಪದ ಬೆಳಕನ್ನು ಸಹಿಸಲಾರದೆ ಅವನ ಕಣ್ಣಿನಲ್ಲಿ ನೀರು ಬರುತ್ತಿತ್ತು. ನೀವು ಬಂದ ಸಂದರ್ಭದಲ್ಲಿ ತಾವರೆ ನೈದಿಲೆಗಳ ಹೂವಿನ ವಾಸನೆಯಿಂದ ಕೂಡಿದ ಅಕ್ಕಿಯೊಂದಿಗೆ ಬೇರೆ ಅಕ್ಕಿಯನ್ನು ಮಿಶ್ರಣಮಾಡಿ ಬೇಯಿಸಿದ ಅನ್ನವನ್ನು ಬಡಿಸಿದ್ದರಿಂದ ಅವನು ಸುವಾಸನೆಯ ಅಕ್ಕಿಯ ಅನ್ನವನ್ನು ನುಂಗುತ್ತಿದ್ದನು ಉಳಿದ ಅನ್ನವನ್ನು ಉಗುಳುತ್ತಿದ್ದನು. ಆದುದರಿಂದಲೇ ಇವನಿಗೆ ಈ ಅವಸ್ಥೆಯಾಗಿದೆ ಎಂದು ಹೇಳಿದಳು.

ಪದ್ಯ ಭಾಗ
೩೨.  ಹಡಗನ್ನು ಯಾವುದರ ಬೆಳಕಿನಲ್ಲಿ ಮುನ್ನಡೆಸಬೇಕು?
ಉ:   ನಮ್ಮ ಬದುಕಿನ ಸುತ್ತಮುತ್ತಲು ಕವಿದಿರುವ ಕತ್ತಲೆಯನ್ನು ಕಳೆಯಲು ಪ್ರೀತಿಯೆಂಬ ಹಣತೆಯನ್ನು ಹಚ್ಚಬೇಕು. ಸಂಸಾರ ಸಾಗರದಲ್ಲಿ ಬಿರುಗಾಳಿಗೆ ಸಿಲುಕಿ ಹೌಯ್ದಾಡುತ್ತಿರುವ ಬದುಕೆಂಬ ಹಡಗನ್ನು ಜ್ಞಾನದೀವಿಗೆಯ ಮೂಲಕ ಎಚ್ಚರಿಕೆಯಿಂದ ಮುನ್ನಡೆಸಬೇಕಿದೆ.

೩೩. ಕಾಡುಗಳಿಗೆ ಹೇಗೆ ಮುಟ್ಟಬೇಕಿದೆ?
ಉ:   ಋತುಗಳ ರಾಜನಾದ ವಸಂತನು ಬರಡಾಗಿರುವ ಕಾಡುಗಳನ್ನು ಅಚ್ಚಹಸಿರಿನಿಂದ ಕಂಗೊಳಿಸುವಂತೆ ಮುಟ್ಟಬೇಕಿದೆ. ವಸಂತನ ಆಗಮನದಿಂದ ಬರಡಾಗಿರುವ ಕಾಡಿನಲ್ಲಿ ಮರಗಿಡಗಳು ಚಿಗುರಿ ಪ್ರಕೃತಿಗೆ ನವ ಚೈತನ್ಯ ಮೂಡಬೇಕಿದೆ ಎಂಬುದು ಕವಿಯ ಆಶಯವಾಗಿದೆ.

೩೪.  ಹೊಸ ಭರವಸೆಗಳನ್ನು ಮೂಡಿಸಿ ಯಾವುದರ ನಡುವೆ ಸೇತುವೆಯಾಗಬೇಕಿದೆ?
ಉ:   ಭಾಷೆ, ಜಾತಿ, ಮತ, ಧರ್ಮಗಳ ಭೇದಭಾವದಿಂದ ಮನುಜರ ನಡುವೆ ಅಡ್ಡಗೋಡೆಗಳು ನಿರ್ಮಾಣವಾಗಿವೆ. ಸ್ನೇಹ, ಪ್ರೀತಿ, ನಂಬಿಕೆಯ ಮೂಲಕ ಮನುಜರ ನಡುವಿನ ಈ ಅಡ್ಡ ಗೋಡೆಗಳನ್ನು ಕೆಡವಬೇಕು. ಬದುಕಿನಲ್ಲಿ ಹೊಸ ಭರವಸೆಗಳನ್ನು ಮೂಡಿಸಿ ಮನುಜ ಮನುಜರ ನಡುವೆ ಸೇತುವೆಯಾಗಬೇಕಿದೆ.

೩೫.  ನಾಳಿನ ಕನಸನ್ನು ಬಿತ್ತಬೇಕಾದರೆ ನಾವು ಹೇಗೆ ಬದುಕಬೇಕು?
ಉ:   ಎಲ್ಲಾ ಮತ, ಧರ್ಮಗಳು ದಾರಿ ತೋರಿಸುವ ದೀಪಗಳಾಗಿರುವುದರಿಂದ ಎಲ್ಲಾ ಮತಗಳನ್ನು ಪುರಸ್ಕರಿಸುವ ಎಚ್ಚರಿಕೆಯಲ್ಲಿ ನಾವು ಬದುಕಬೇಕು. ಭಯ ಮತ್ತು ಸಂಶಯಗಳಿಂದ ಮಸುಕಾಗಿರುವ ಮನದ ಕಣ್ಣಿನಲ್ಲಿ ಭವಿಷ್ಯದ ಕನಸನ್ನು ಬಿತ್ತುತ್ತಾ ಬದುಕು ನಡೆಸಬೇಕು.

೩೬.   ಹಕ್ಕಿಯ ಹಾರಾಟವನ್ನು ಆಕಾಶಕ್ಕೆ ಹೇಗೆ ಹೋಲಿಸಿದ್ದಾರೆ?
ಉ;   ಹಕ್ಕಿಯು ಆಕಾಶದಲ್ಲಿ ಹಾರುವಾಗ ನೀಲಿ ಆಕಾಶವೇ ಮೈಯಾಗಿಸಿಕೊಂಡು ( ನೀಲಮೇಘಮಂಡಲ ) ಮುಗಿಲುಗಳೇ ರೆಕ್ಕೆಯಾಗಿ ನಕ್ಷತ್ರಗಳೆಲ್ಲವನ್ನು ಮಾಲೆಯಾಗಿ ಸಿಕ್ಕಿಸಿಕೊಂಡು, ಸೂರ್ಯ ಚಂದ್ರರನ್ನು ಕಣ್ಣಾಗಿಸಿಕೊಂಡು ಆಕಾಶದಲ್ಲಿ ಹಕ್ಕಿಯು ಹಾರುತ್ತಿದೆ. ಕವಿಯ ಕಲ್ಪನೆಯು ಹಕ್ಕಿಯ ಹಾರಾಟವನ್ನು ಆಕಾಶ, ಮೋಡ ಮತ್ತು ನಕ್ಷತ್ರಗಳಿಗೆ ಹೋಲಿಕೆ ಮಾಡಿರುವುದಾಗಿದೆ.

೩೭.   ಹೊಸಗಾಲದ ಹಸುಮಕ್ಕಳನ್ನು ಹಕ್ಕಿ ಹೇಗೆ ಹರಸಿದೆ?
ಉ;    ಹಕ್ಕಿಯು ( ಕಾಲ ಪಕ್ಷಿಯು ) ಯುಗಯುಗಗಳ ಆಗುಹೋಗುಗಳನ್ನು ಹಿಂದಕ್ಕೆ ತಳುತ್ತಾ, ಹೊಸ ಮನ್ವಂತರದ ಪರಿವರ್ತನೆಗೆ ಕಾರಣವಾಗಿದೆ. ಹಕ್ಕಿಯು ತನ್ನ ರೆಕ್ಕೆಗಳನ್ನು ಬೀಸುವ ಮೂಲಕ ಭೂಮಂಡಲದ ಜೀವಿಗಳಿಗೆ ಚೈತನ್ಯ ನೀಡಿ ಹೊಸಗಾಲದ ಹಸುಮಕ್ಕಳನ್ನು ಹರಸಿ, ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತಿದೆ ಎಂದು ಕವಿ ವರ್ಣಿಸಿದ್ದಾರೆ.

೩೮.   ಹಕ್ಕಿಯು ಯಾವ ಮೇರೆ ಮೀರಿ, ನೀರನು ಹೀರಿದೆ?
ಉ:    ಹಕ್ಕಿಯು ಬೆಳ್ಳಿಯ ಹಳ್ಳಿಯ ಮೇರೆಯನ್ನು ಅಂದರೆ ನಕ್ಷತ್ರಗಳ ಗಡಿಯನ್ನು ಮೀರಿ ತಿಂಗಳಿನೂರಿನ ( ಚಂದ್ರಲೋಕದ ) ನೀರನ್ನು ಹೀರಿದೆ. ಕವಿ ಇಲ್ಲಿ ಕಾಲವು ಬಹುವೇಗವಾಗಿ ಮುಂದುವರಿಯುತ್ತಿದ್ದು, ವಿಜ್ಞಾನ ಬೆಳೆದು ಭೂಮಂಡಲದ ಆಚೆಗೆ ಚಂದ್ರಲೋಕಕ್ಕೂ  ಹೋಗಿರುವುದನ್ನು ಈ ರೀತಿಯಾಗಿ ಕಾಲ ಪಕ್ಷಿಯು ತಿಂಗಳಿನೂರಿನ ನೀರನ್ನು ಹೀರಿದೆ ಎಂದಿದ್ದಾರೆ.

೩೯.  ಹಲಗಲಿಯ ಬೇಡರು ದಂಗೆ ಏಳಲು ಕಾರಣವೇನು?
ಉ:   ಹಲಗಲಿಯ ವೀರರು ದಂಗೆ ಏಳಲು ಕಾರಣ ಬ್ರಿಟಿಷ್ ಸರ್ಕಾರದ ಅನುಮತಿ ಇಲ್ಲದೆ ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ ಮತ್ತು ತಮ್ಮಲ್ಲಿರುವ ಆಯುಧವನ್ನು ಸರ್ಕಾರಕ್ಕೆ ಒಪ್ಪಿಸಬೇಕು ಎಂಬ ಹುಕುಂ ಅನ್ನು ಜಾರಿಗೊಳಿಸಿದನ್ನು ವಿರೋಧಿಸಿ ದಂಗೆ ಎದ್ದರು.

೪೦.  ಹಲಗಲಿಗೆ ದಂಡು ಬರಲು ಕಾರಣವೇನು?
ಉ:   ಹಲಗಲಿಗೆ ದಂಡು ಬರಲು ಕಾರಣ , ಹಲಗಲಿಯ ಬೇಡರು ಬ್ರಿಟಿಷ್ ಸರ್ಕಾರ ಜಾರಿಗೆ ತಂದ ನಿಶ್ಯಸ್ತ್ರೀಕರಣ ಕಾಯ್ದೆಯನ್ನು ವಿರೋಧಿಸಿ ದಂಗೆ ಎದ್ದರು. ದಂಗೆಯನ್ನು ಹತ್ತಿಕ್ಕಲು ಬಂದು ಕಾರಕೂನನ ಕಪಾಳಕ್ಕೆ ಹೊಡೆದು ಕೊಂದು ಹಾಕಿದರು. ಇದರಿಂದ ಕೋಪಗೊಂಡ ಕಾರ ಸಾಹೇಬ ಹಲಗಲಿ ಜನರನ್ನು ಬಗ್ಗುಬಡಿಯಲು ದಂಡನ್ನು ಕಳುಹಿಸಿದರು.
೪೧.  ದಂಡು ಹಲಗಲಿಯ ಮೇಲೆ ಹೇಗೆ ದಾಳಿ ನಡೆಸಿತು?
ಉ:   ನಿಶ್ಯಸ್ತ್ರೀಕರಣ ಆದೇಶವನ್ನು ವಿರೋಧಿಸಿ ಬ್ರಿಟಿಷ್ ಕಾರಕೂನನ್ನನ್ನು ಕೊಂದ ಹಲಗಲಿ ಬೇಡರ ಮೇಲೆ ಕೋಪಗೊಂಡ ಕಾರಸಾಹೇಬನ ಆದೇಶದ ಮೇರೆಗೆ ಹಲಗಲಿಗೆ ದಂಡು ಬಂದಿತ್ತು. ಹೆಬಲಕನ ಸಾವಿನಿಂದ ಕೋಪಗೊಂಡು ಇಡೀ ಊರೇ ರಣರಂಗವಾಗಿತ್ತು. ರಕ್ತದ ಕೋಡಿ ಹರಿಯಿತು. ಹೆಣಗಳು ಉರುಳಿದವು ಊರೇ ಬೆಂಕಿಯಾಗಿ ಸುಟ್ಟು ಬೂದಿಯಾಗಿತ್ತು, ಈ ರೀತಿಯಾಗಿ ಹಲಗಲಿಯ ಮೇಲೆ ಬ್ರಿಟಿಷರ ದಂಡು ದಾಳಿ ನಡೆಸಿತು.

೪೨.  ಲಾವಣಿಗಳನ್ನು ಏಕೆ ವೀರಗೀತೆಗಳು ಎನ್ನಲಾಗಿದೆ?
ಉ:   ಲಾವಣಿಗಳಲ್ಲಿ ತ್ಯಾಗ, ಬಲಿದಾನ ವೀರಕಲಿಗಳು ಮೆರೆದ, ವೀರ ಸಾಹಸ ಮತ್ತು ಉಜ್ವಲ ಜೀವನವನ್ನು ವರ್ಣಿಸುವುದರಿಂದ ಕಥನಾತ್ಮಕ ಕಾವ್ಯಗಳಾಗಿ ಜನತೆಯನ್ನು ಹುರಿದುಂಬಿಸುವ ಗೀತೆಗಳಾಗಿರುವುದರಿಂದ ಲಾವಣಿಯನ್ನು ವೀರಗೀತೆಗಳು ಎಂದು ಕರೆಯಲಾಗುತ್ತದೆ.

೪೩.  ಕೃಷ್ಣನು ಕರ್ಣನ ಮನದಲ್ಲಿ ಯಾವ ರೀತಿಯಲ್ಲಿ ಭಯವನ್ನು ಬಿತ್ತಿದನು?
ಉ:   ಕರ್ಣನಿಗೂ ಪಾಂಡವರಿಗೂ, ಕೌರವರಿಗೂ, ಯಾದವರಿಗೂ ಯಾವುದೆ ಭೇದವಿಲ್ಲ. ನೀನು ನಿಜವಾಗಿ ಈ ಭೂಮಿಗೆ ಒಡೆಯ ನೀನೇ ರಾಜ, ನಿನಗೆ ಅದರ ಅರಿವಿಲ್ಲ ಎಂದು ಹೇಳುವ ಮೂಲಕ ಶ್ರೀಕೃಷ್ಣನು ರವಿಸುತನ ಕಿವಿಯಲ್ಲಿ ಭಯ ಬಿತ್ತಿದನು.

೪೪.  ಕುಂತಿ, ಮಾದ್ರಿಯರು ಯಾರ್ಯಾರ ಅನುಗ್ರಹದಿಂದ ಮಕ್ಕಳನ್ನು ಪಡೆದರು?
ಉ:   ಕುಂತಿ ತಾನು ಪಡೆದ ಮಂತ್ರೋಪದೇಶದಿಂದ ಮೊದಲು ಸೂರ್ಯನನ್ನು ಸ್ಮರಿಸಿ ಕರ್ಣನನ್ನು, ಯಮದೇವನ ಅನುಗ್ರಹದಿಂದ ಧರ್ಮರಾಯನ್ನನ್ನು, ವಾಯುದೇವನ ಅನುಗ್ರಹದಿಂದ ಕಲಿ ಭೀಮನನ್ನು ದೇವೇಂದ್ರನನ್ನು ಸ್ಮರಿಸಿ ಅವನ ಕೃಪೆಯಿಂದ ಅರ್ಜುನನ್ನನ್ನು ಪಡೆದಳು. ತಾನು ಪಡೆದ ಮಂತ್ರದಲ್ಲಿ ಒಂದನ್ನು ತನ್ನ ಸವತಿಯಾದ ಮಾದ್ರಿಗೆ ಕರುಣಿಸಿದಾಗ ಅವಳು ಅಶ್ವಿನಿ ದೇವತೆಗಳನ್ನು ಸ್ಮರಿಸಿ ಅವರ ಅನುಗ್ರಹದಿಂದ ನಕುಲ-ಸಹದೇವರನ್ನು ಮಕ್ಕಳಾಗಿ ಪಡೆದಳು.

೪೫.  ಕೃಷ್ಣನು ಆಮಿಷಗಳನ್ನು ಒಡ್ಡಿದಾಗ ಕರ್ಣನ ಮನದಲ್ಲಿ ಮೂಡಿದ ಭಾವನೇಗಳೇನು?
ಉ:   ಕೃಷ್ಣನು ಕರ್ಣನಿಗೆ ಆಮಿಷಗಳನ್ನುಒಡ್ಡಿದಾಗಕೊರಳ ಸೆರೆ ಹಿಗ್ಗಿದವು, ಕಂಬನಿಯು ರಭಸದಿಂದ ಮುಂದೆ ಬಂದು ಅಧಿಕವಾಗಿ ಕರ್ಣನು ದು:ಖಗೊಂಡು ಮನದೊಳಗೆ " ಅಯ್ಯೋ! ದುರ್ಯೋಧನನಿಗೆ ಕೇಡಾಯಿತು. " ಎಂದನು. ಹರಿಯ ಹಗೆತನವು ಹೊಗೆ ತೋರದೆ ಸುಟ್ಟು ಹಾಕುವುದಲ್ಲದೆ ಸುಮ್ಮನೆ ಹೋಗುವುದೆ. ಕೃಷ್ಣನು ನನ್ನ ವಂಶದ ರಹಸ್ಯವನ್ನು ತಿಳಿಸಿ ನನ್ನನ್ನು ಕೊಂದನು ಎಂಬ ಭಾವನೆ ಕರ್ಣನ ಮನದಲ್ಲಿ ಮೂಡಿತು.

೪೬.  ಕೃಷ್ಣನು ಕೌರವೇಂದ್ರನನ್ನು ಕೊಂದನು ಎಂದು ಕರ್ಣ ಹೇಳಲು ಕಾರಣವೇನು?
ಉ:   ಕರ್ನನು ಕೃಷ್ಣನಿಗೆ, " ನಾನು ರಾಜ್ಯದ ಸಿರಿ ಸಂಪತ್ತಿಗೆ  ಸೋಲುವವನಲ್ಲ, ಪಾಂಡವರು ಕೌರವರು ಸೇವೆಯನ್ನು ಮಾಡುವುದು ನನಗೆ ಇಷ್ಟವಿಲ್ಲ. ಆದರೆ ನನ್ನನ್ನು ಕಾಪಾಡಿದ ಒಡೆಯನಾದ ದುರ್ಯೋಧನನಿಗೆ ಶತ್ರುಗಳ ಶಿರವನ್ನು ಕಡಿದು ತಂದು ಒಪ್ಪಿಸುವ ಆವೇಷದಲ್ಲಿ ಇದ್ದೆನು ಆದರೆ ನೀನು ನನ್ನ ಜನ್ಮ ರಹಸ್ಯವನ್ನು ತಿಳಿಸಿ ದುರ್ಯೋಧನನ್ನು ಕೊಂದೆ " ಎಂದನು.

೪೭.ಯುದ್ಧದ ವಿಚಾರದಲ್ಲಿ ಕರ್ಣನ ತೀರ್ಮಾನವೇನು?
ಉ:   ಯುದ್ಧದ ವಿಚಾರದಲ್ಲಿ ಕರ್ಣನ ತೀರ್ಮಾನ " ನಾಳಿನ ಕೌರವರ ಮಾತ್ತು ಪಾಂಡವರ ಚದುರಂಗ ಬಲದ ನಡುವಿನ ಯುದ್ಧವು ಮೃತ್ಯುದೇವತೆಗೆ ಭೋಜನಕೂಟ ಆಗುವುದು. ನಾನು ಕೌರವನ ಉಪಕಾರದ ಋಣ ತೀರಿಸುವಂತೆ ಹೋರಾಡಿ ಯುದ್ಧರಂಗದಲ್ಲಿ ಲೆಕ್ಕವಿಲ್ಲದಷ್ಟು ವೀರ ಯೋಧರನ್ನು ಕೊಂದು ನನ್ನ ಒಡೆಯನಿಗಾಗಿ ಪ್ರಾಣವನ್ನು ಬಿಡುವೆನು. ಸೂರ್ಯನ ಮೇಲಾಣೆ ಪಾಂಡವರನ್ನು ನೋಯಿಸೆನು " ಎಂಬುದಾಗಿತ್ತು.



೪೮.  ಕವಿಗೆ ಯಾವ್ಯಾವುದರಲ್ಲಿ ಆಗಸದಿಂದ ಬಿಸಿಲವರೆಗೂ ಹಸರು ಕಾಣುತ್ತಿದೆ?
ಉ:   ಕವಿಗೆ ನವರಾತ್ರಿಯ ಸಮಯದಲ್ಲಿ ಭೂಮಿ ನವಧಾತ್ರಿ ಎನಿಸುತ್ತದೆ. ಹಸುರಿನ ಕಡಲಿನಲ್ಲಿ ಕವಿಯ ಆತ್ಮವು ಮಿಂದು ರಸಪಾನ ಸ್ನಾನದಿಂದ ಹಸುರಾಗುತ್ತದೆ. ಆಕಾಶ, ಗದ್ದೆ, ಬಯಲು, ಬೆಟ್ಟ, ಕಣಿವೆ ಸಂಜೆಯ ಬಿಸಿಲು ಕವಿಗೆ ಹಸುರಾಗಿ ಕಾಣುತ್ತದೆ.

೪೯.  ಹಸುರು ಸಕಲೇಂದ್ರಿಯಗಳನ್ನು ವ್ಯಾಪಿಸಿದೆ ಎಂಬುದನ್ನು ಕವಿಯು ಹೇಗೆ ವರ್ಣಿಸಿದ್ದಾರೆ?
ಉ:   ಹಸುರಾದ ಭೂಮಿ ಆಗಸ ಮುಗಿಲು ಗದ್ದೆಯ ಬಯಲು ಬೆಟ್ಟ ಕಣಿವೆ ಸಂಜೆಯ ಬಿಸಿಲು ಕಾಡಂಚಿನ ಅಡಕೆಯ ತೋಟ ಇವೆಲ್ಲಾ ಕಣ್ಣಿಗೆ ಗೋಚರವಾದರೆ, ಹೂವಿನ ಕಂಪಿನ ಹಸಿರು ಮೂಗಿಗೆ, ಎಲರಿನ ತಂಪಿನ ಸ್ಪರ್ಶ ಚರ್ಮಕ್ಕೆ, ಹಕ್ಕಿಯ ಕೊರಳಿನ ಚಿಲಿಪಿಲಿ ಗಾನ ಕಿವಿಗೆ, ಶ್ಯಾಮಲ ಸಮುದ್ರದ ಹಸುರು ಕವಿ ಆತ್ಮಕ್ಕೆ ರಸಪಾನ ಮಾಡಿದಂತಾದುದು ಹೀಗೆ ಪ್ರಕೃತಿಯು ಹಸುರನ್ನು ಸಕಲ ಇಂದ್ರಿಯಗಳಿಗೆ ವ್ಯಾಪಿಸಿದೆ ಎಂಬುದನ್ನುಕವಿ ಕುವೆಂಪು ಅವರು ಅಭೂತ ಪೂರ್ಣವಾಗಿ ವರ್ಣಿಸಿದ್ದಾರೆ.

೫೦.  ಕವಿಯಾತ್ಮವು ಹಸುರುಗಟ್ಟಲು ಕಾರಣವಾದ ಹಿನ್ನಲೆಯ ಅಂಶಗಳೇನು?
ಉ:  ಕವಿಯಾತ್ಮವು ಹಸುರುಗಟ್ಟಲು ಆಶ್ವಯುಜ ಮಾಸದ ನವರಾತ್ರಿಯಲ್ಲಿ ವಿಶಾಲವಾದ ಶ್ಯಾಮಲ ಕಡಲು ಹಸುರಾಗಸ, ಹಸುರುಮುಗಿಲು , ಹಸುರುಗದ್ದೆಯ ಬಯಲು , ಹಸುರಿನ ಮಲೆ , ಹಸುರು ಕಣಿವೆ, ಸಂಜೆಯ ಬಿಸಿಲು ಶಾಲಿಬನದ ಗಿಳಿಯ ಹಸುರು ಬಣ್ಣದ ನೋಟ , ಬನದಂಚಿನಲ್ಲಿ ಫಲಬರಿತ ಅಡಕೆಯ ತೋಟ ಹುಲ್ಲಿನ ಮಕಮಲ್ಲಿನ ಹೊಸ ಪಚ್ಚೆಯ ಜಮಖಾನೆ ಪಸರಿಸಿದಂತೆ ಭೂಮಿಯು ಹಸುಗಟ್ಟಿದ್ದು ಹೊಸ ಹೂವಿನ ಕಂಪು ತಂಗಾಳಿಯ ತಂಪು ಹಕ್ಕಿಯ ಇಂಪಾದ ಗಾನ ಎತ್ತೆತ್ತ ನೋಡಿದರೂ ಹಸುರು ... ಹಸುರು. ... ಹಸುರು ಇವೆಲ್ಲಾ ಕವಿಯಾತ್ಮವು ಹಸುರುಗಟ್ಟಲು ಕಾರಣವಾದ ಹಿನ್ನಲೆಯ ಅಂಶಗಳಾದವು.

೫೧. ತಾನು ಹೋರಾಡುತ್ತಿರುವುದು ನೆಲಕ್ಕಲ್ಲ ಛಲಕ್ಕೆ ಎಂಬುದನ್ನು ದುರ್ಯೋಧನ ಹೇಗೆ ವಿವರಿಸುತ್ತಾನೆ?
ಉ:  ಮಹಾಭಾರತದ ಕೊನೆಯಲ್ಲಿ ಏಕಾಂಗಿಯಾದ ದುರೋಧನನು ತಂದೆ ತಾಯಿಯರ ಸಲಹೆಯಂತೆ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರನ್ನುಸಂಧಿಸಿದಾಗ ಅವರು ದುರ್ಯೋಧನನು ಒಪ್ಪಿದರೆ ಸಂಧಿಮಾಡಿಕೊಳ್ಳುವಂತೆ  ಪಾಂಡವರನ್ನು ಒಪ್ಪಿಸುವುದಾಗಿ ನುಡಿಯುತ್ತಾರೆ.ದುರ್ಯೋಧನನು ಭೀಷ್ಮಾಚಾರ್ಯರಿಗೆ ನಾನು ನಿಮಗೆ ನಮಸ್ಕರಿಸಲೆಂದು ಬಂದೆನು ಸಂಧಿಗಾಗಿ ಅಲ್ಲ.  ನಾನು ಭೂಮಿಗಾಗಿ ಹೋರಾಡುತ್ತಿಲ್ಲ ಆದರೆ ನನ್ನ  ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು. ಈ ಭೂಮಿ ನನಗೆ ಪಾಳು ಭೂಮಿಗೆ ಸಮ ನನ್ನ ಒಡಹುಟ್ಟಿದವರು ನನ್ನಮಿತ್ರ ಕರ್ಣನನ್ನು ಕೊಲಿಸಿದ ಈ ನೆಲದಲ್ಲಿ ಬಾಳುವುದುಂಟೆ ಎಂದು ವಿವರಿಸುತ್ತನೆ. .

೫೨. ಈ ನೆಲದೊಡನೆ ತಾನು ಸಹಬಾಳ್ವೆ ಮಾಡುವುದಿಲ್ಲವೆಂದು ದುರ್ಯೋಧನ ಹೇಳುವುದೇಕೆ?
ಉ:  ಭಿಷ್ಮಾಚಾರ್ಯರು ಪಂಡವರೊಡನೆ ಸಂಧಿ ಮಾಡಿಕೊ ಎಂದು ಸಲಹೆ ಮಾಡಿದಾಗ ದುರ್ಯೋಧನನು ಅದಕ್ಕೆ
ಒಪ್ಪುವುದಿಲ್ಲ. ಅವನು ನಾನು ಭೂಮಿಗಾಗಿ ಹೋರಾಡುತ್ತಿಲ್ಲ ಛಲಕ್ಕಾಗಿ ಪಾಂಡವರೊಡನೆ ಹೋರಾಡುವೆನು. ಈ ಭೂಮಿ ನನಗೆ ಪಾಳು ಭೂಮಿಗೆ ಸಮ ನನ್ನ ಪ್ರಿಯ ಗೆಳೆಯನಾದ ಕರ್ಣನನ್ನು ಕೊಲ್ಲಿಸಿದ ಈ ಭೂಮಿಯೊಡನೆ ನಾನು ಮತ್ತೆ ಸಹಬಾಳ್ವೆ ಮಾಡುವುದಿಲ್ಲ ಎನ್ನುತ್ತಾನೆ.

೫೩. ಪಾರ್ಥ- ಭೀಮರ ಬಗೆಗೆ ದುರ್ಯೋಧನನ ಅಭಿಪ್ರಾಯವೇನು?
ಉ:  ನನ್ನ ಪ್ರೀತಿಯ ಸ್ನೇಹಿತನಾದ ಕರ್ಣನನ್ನು ನನ್ನ ಪ್ರೀತಿಯ ತಮ್ಮನಾದ ದುಶ್ಯಾಸನನ್ನನ್ನು ಕೊಂದ ಅರ್ಜುನ-ಭೀಮರು ಬದುಕಿರುವವರೆಗೂ ನನ್ನ ದೇಹದಲ್ಲಿ ಪ್ರಾಣ ಇರುವವರೆಗೂ ನಾನು ಸಂಧಿ ಮಡಿಕೊಳ್ಳಲು ಒಪ್ಪುವುದಿಲ್ಲ. ಮೊದಲು ಆ ಇಬ್ಬರನ್ನು ಕೊಲ್ಲುವೇನು ಕೊಂದ ಬಳಿಕ ಪ್ರಸಿದ್ಧನಾದ ಧರ್ಮರಾಜನೊಡನೆ ಸಂಧಿ ಮಾಡಿಕೊಳ್ಳುವೆನು ಎಂಬುದು ಪಾರ್ಥ-ಭೀಮರ ಬಗೆಗೆ ದುರ್ಯೋಧನನ ಅಭಿಪ್ರಾಯವಾಗಿದೆ.

೫೪.  ವಾಲ್ಮೀಕಿ ಆಶ್ರಮಕ್ಕೆ ಯಜ್ಞಾಶ್ವವು ಬಂದ ಬಗೆಯನ್ನು ವಿವರಿಸಿ.
ಉ:   ಶ್ರೀರಾಮನು ಮಹರ್ಷಿಗಳ ಆದೇಶದಂತೆ ಅಶ್ವಮೇಧ ಯಾಗವನ್ನು ಕೈಗೊಂಡು ಶತ್ರುಘ್ನನ ಬೆಂಗಾವಲಿನಲ್ಲಿ ಯಜ್ಞಾಶ್ವವನ್ನು ಕಳುಹಿಸಿದನು. ರಾಮನ ಆಜ್ಞೆಯಂತೆ ಹೊರಟ ಯಜ್ಞಾಶ್ವವನ್ನು ಭುಜಬಲ ಪರಾಕ್ರಮಿಗಳಾದ ರಾಜರು ತಡೆಯಲು ಹೆದರಿ ನಮಸ್ಕರಿಸಿ ಮುಂದೆ ಹೋಗಲು ಬಿಟ್ಟರು ಹೀಗೆ ಯಜ್ಞಾಶ್ವವು ಭೂಮಿಯಲ್ಲೆಲ್ಲಾ ಸಂಚರಿಸುತ್ತಾ ವಾಲ್ಮೀಕಿಯ ಆಶ್ರಮದ ತೋಟದ ಹಸುರಾದ ಹುಲ್ಲನ್ನು ಕಂಡು ತಿನ್ನಲು ಪ್ರವೇಶಿಸಿತು.

೫೫.  ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು?
ಉ:   ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ, " ಭೂಮಂಡದಲ್ಲಿ ಕೌಸಲ್ಯೆಯ ಮಗನಾದ ರಾಮನು ಒಬ್ಬನೇ ವೀರನು ಇದು ಅವನ ಯಜ್ಞನದ ಕುದುರೆ ಇದನ್ನು ತಡೆಯಲು ಸಾಮರ್ಥ್ಯ ಉಳ್ಳವರು ಯಾರೇ ಆದರೂ ತಡೆಯಲಿ " ಎಂದು ಬರೆಯಲಾಗಿತ್ತು.

೫೬.  ಕುದುರೆಯನ್ನು ಕಟ್ಟುವ ವಿಚಾರದಲ್ಲಿ ಮುನಿಸುತರಿಗೂ ಲವನಿಗೂ ನಡೆದ ಸಂವಾದವನ್ನು ಬರೆಯಿರಿ.
ಉ:   ಲವನು ಆಶ್ರಮವನ್ನು ಹೊಕ್ಕ ಯಜ್ಞಾಶ್ವವನ್ನು ತನ್ನ ಉತ್ತರಿಯಿಂದ ಬಾಳೆಯ ಗಿಡಕ್ಕೆ ಕಟ್ಟಿ ಹಾಕಿದ್ದನ್ನು ಕಂಡು ಹೆದರಿದ ಮುನಿಸುತರು, " ಬೇಡ ಬೇಡ ಅರಸರುಗಳ ಕುದುರೆಯನ್ನು ಬಿಡು ನಮ್ಮನ್ನು ಅವರು ನಮ್ಮನ್ನು ಹೊಡೆಯುವರು "   ಎಂದು ಹೇಳಿದರು. ಆಗ ಲವನು ನಗುತ್ತಾ " ಬ್ರಾಹ್ಮಣರ ಮಕ್ಕಳು ಹೆದರಿದರೆ ಜಾನಕಿಯ ಮಗನು ಇದಕ್ಕೆ ಹೆದರುವನೆ" ನೀವು ಹೋಗಿ ಎಂದು ಶೌರ್ಯದಿಂದ ಹೇಳಿದನು.

೫೭.ಪರಶುರಾಮನು ಮಣ್ಣಿನ ಪಾತ್ರೆಯಲ್ಲಿ ಅರ್ಘವನ್ನು ಕೊಡಲು ಕಾರಣವೇನು?
ಉ:  ಪರಶುರಾಮನು ತನ್ನ ಬಳಿ ಇರುವುದೆಲ್ಲವನ್ನು ಬೇಡಿದವರಿಗೆ ದಾನಮಾಡಿದ್ದರಿಂದ ಆತನ ಬಳಿ ಬಿಲ್ಲು ಬಾಣಗಳಲ್ಲದೆ ಬೇರೇನು ಇರಲಿಲ್ಲ. ಆ ಸಂದರ್ಭದಲ್ಲಿ ದ್ರೋಣನು ತನ್ನ ಮಗನಾದ ಅಶ್ವತ್ಥಾಮನ ಜೊತೆಯಲ್ಲಿ ಏನಾದರೂ ದ್ರವ್ಯ ಬೇಡಲೆಂದು ಪರಶುರಾಮನ ಬಳಿಗೆ ಬಂದನು ಆಗ ಪರಶುರಾಮನು ತನ್ನ ಬಳಿ ಚಿನ್ನದ ಪಾತ್ರೆಗಳು ಇಲ್ಲದುದರಿಂದ ದ್ರೋಣರಿಗೆ ಮಣ್ಣಿನ ಪಾತ್ರೆಯಲ್ಲಿಯೇ ಅರ್ಘ್ಯವನ್ನು ಕೊಟ್ಟು ಪೂಜಿಸಿದನು.

೫೮.  ದ್ರುಪದನು ದ್ರೋಣರಿಗೆ ಗರ್ವದಿಂದ ಹೇಳಿದ ಮಾತುಗಳು ಯಾವುವು?
ಉ:   ದ್ರುಪದನು ದ್ರೋಣರಿಗೆ " ನೀನು ಯಾರೆಂದು ನನಗೆ ತಿಳಿದಿಲ್ಲ ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೋ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ , ಮನುಷ್ಯರಾದವರು ಇಷ್ಟು ನಾಚಿಕೆ ಗೆಟ್ಟವರು ಆಗುತ್ತಾರೆಯೇ?" ಎಂಬ ಮಾತುಗಳನ್ನು ದ್ರುಪದನು ದ್ರೋಣರಿಗೆ ಹೇಳೀದನು.

೫೯.   ದ್ರೋಣನು ಶಪಥ ಮಾಡುವಾಗ ಹೇಳುವ ಮಾತುಗಳಾವುವು?
ಉ:    ದ್ರೋಣನು " ಎಲೋ ಖಳನೆ ನೋಣಕ್ಕೆ ಕಸವೇ ಶ್ರೇಷ್ಠವಾದುದು ಎನ್ನುವ ಗಾದೆಯಂತೆ ನಿನ್ನ ಯೋಗ್ಯತೆ ನನ್ನವರೆಗೂ ಉಂಟೆ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದವರೆಂಬ ಒಂದು ಕಾರಣದಿಂದ ನಿನ್ನನ್ನು ಕೊಲ್ಲದೆ ಬಿಡುತ್ತಿದ್ದೇನೆ ಈ ಸಭಾವಲಯದಲ್ಲಿ ನನ್ನನ್ನು ಹೀಯಾಳಿಸಿದ ನಿನ್ನನ್ನು ನನ್ನ ಶಿಷ್ಯರಿಂದ ನೀನು ಬೆಚ್ಚುವಂತೆ ಕಟ್ಟಿಸದೆ ಬಿಟ್ಟರೆ ನಾನು ಮೀಸೆಯನ್ನು ಹೊತ್ತಿರುವುದು ವ್ಯರ್ಥವಲ್ಲವೆ " ಎಂಬ ಶಪಥವನ್ನು ಮಾಡುವಾಗ ಹೇಳಿದ ಮಾತುಗಳು.
  ೬೦.  ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರ ಅಭಿಪ್ರಾಯವೇನು?
ಉ:   ಜಾತಿ ವ್ಯವಸ್ಥೆಯ ಬಗ್ಗೆ ವಿವೇಕಾನಂದರು- " ಜಾತಿ ಎಂಬುದು ಸಮಾಜದ ಒಂದು ಆಂತರಿಕ ಭಾಗವಾಗಿದೆ. ಹಿಂದೆ ಅದು ವಿಕಾಸವಾಗುತ್ತಿತ್ತು. ಈಗ ಅದು ಘನಿಭೂತವಾಗಿದೆ. ಅದರ ದುರ್ಗಂಧದಿಂದ ಭಾರತದ ವಾತಾವರಣವೆಲ್ಲ ತುಂಬಿದೆ " ಎಂದು ಅಭಿಪ್ರಾಯಪಟ್ಟಿದ್ದಾರೆ.

೬೧.  ವಿವೇಕಾನಂದರು ಕೋಮುವಾದದ ಕಟ್ಟಾ ವಿರೋಧಿಯಾಗಿದ್ದರು, ಏಕೆ?
ಉ:  ದೈಹಿಕ ಹಸಿವನ್ನು ಹಿಂಗಿಸುವುದು ವಿವೇಕಾನಂದರ ಮೊದಲ ಆದ್ಯತೆಯಾಗಿತ್ತು. ಅನಂತರ ಆತ್ಮದ ಅಸಿವು, ವೇದಾಂತದ ಹಸಿವು, ಸಾಂಸ್ಥಿಕವಾದ ಧಾರ್ಮಿಕ ಹಸಿವು. ಈ ಕಾರಣದಿಂದಲೇ ವಿವೇಕಾನಂದರು ಯಾವತ್ತೂ ಧಾರ್ಮಿಕ ಮೂಲಭೂತಸ್ವಾದಿಯಾಗಿರಲಿಲ್ಲ, ಬದಲಾಗಿ ಧಾರ್ಮಿಕ ಮೂಲಭೂತವಾದಕ್ಕೆ ಉಗ್ರ ವಿರೋಧಿಯಾಗಿದ್ದರು.

೬೨.   ವಿವೇಕಾನಂದರು ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಹೇಳಿದ್ದೇನು?
ಉ:  ಚಿಕಾಗೊದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡುತ್ತ ಅವರು, " ಸ್ವಮತಾಭಿಮಾನ, ಅನ್ಯ ಮತದ್ವೇಷ ಮತ್ತು ಇವುಗಳಿಂದ ಉತ್ಪನ್ನವಾದ, ಘೋರ ಧಾರ್ಮಿಕ ದುರಭಿಮಾನಗಳು ಈ ಸುಂದರ ಜಗತ್ತನ್ನು ಆವರಿಸಿಕೊಂಡಿದೆ. ಇಂತಹ ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೆ ಇದ್ದರೆ ಮಾನವ ಜನಾಂಗ ಇಂದಿಗಿಂತ ಬಹಳ ಮುಂದುವರೆಯುತ್ತಿತ್ತು" ಎಂದು ಹೇಳಿದರು.

೬೩.  ವಸಂತ ಮುಖ ತೋರಲಿಲ್ಲ ಕವನದಲ್ಲಿ ಪ್ರಕೃತಿಯ ಸಂಭ್ರಮ ಹೇಗೆ ವ್ಯಕ್ತವಾಗಿದೆ?
ಉ:   ಮಾವಿನ ಮರಗಳು ಮೈತುಂಬಿ ನಿಂತಿವೆ. ಹಕ್ಕಿಗಳು ರೆಕ್ಕೆ ಬಿಚ್ಚಿ ಹಾರಾಡುತ್ತಿವೆ. ಕೋಗಿಲೆಗಳು ಮನದುಂಬಿ ಇಂಪಾಗಿ  ಹಾಡುತ್ತಿದೆ. ಕಡಲು ಉಕ್ಕಿ ಹರಿಯುತ್ತದೆ. ಮಲ್ಲಿಗೆ ಹೂವು ಮುಗುಳು ನಗೆ ಬೀರಿದೆ. ಹೊಳೆಯುವ ರಂಗೋಲಿಯಲ್ಲಿ ಬಾಲ ರವಿ ಥಳಥಳಿಸುತ್ತಿದ್ದಾನೆ.  ಈ ರೀತಿ ವಸಂತ ಮುಖ ತೋರಲಿಲ್ಲ ಕವನದಲ್ಲಿ ಪ್ರಕೃತಿಯ ಸಂಭ್ರಮ ವ್ಯಕ್ತವಾಗಿದೆ.

೬೪.  ಜಲಿಯನ್ ವಾಲಾಭಾಗ್ ನಲ್ಲಿರುವ ಒಕ್ಕಣೆ ಏನು?
ಉ:  ಜಲಿಯನ್ ವಾಲಾಭಾಗ್ ನಲ್ಲಿರುವ ಒಕ್ಕಣೆ ,- " ಏಪ್ರಿಲ್ - ೧೩-೧೯೧೯ ರಂದು ಬ್ರಿಟಿಷರ ಗುಂಡುಗಳಿಗೆ ಆಹುತಿಯಾದ ಸುಮಾರು ೨೦೦೦ ಮುಗ್ಧ ಹಿಂದೂ, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ."

೬೫.  ಬಾಲಕ ಭಗತ್ ಸಿಂಗ್ ಊಟಮಾಡದೆ ಉಪವಾಸವಿದ್ದುದಕ್ಕೆ ಕಾರಣವೇನು?
ಉ:   ಜಲಿಯನ್ ವಾಲಾಭಾಗ್ ಹತ್ಯಾಕಾಂಡದಲ್ಲಿ ಪ್ರಾಣ ಕಳೆದುಕೊಂಡಿದ್ದವರಿಗೆ ನಮನ ಸಲ್ಲಿಸಲು ಭಗತ್ ಸಿಂಗ್ ಹೋಗಿದ್ದನು. ಅಲ್ಲಿದ್ದ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಹಣೆಗಿಟ್ಟುಕೊಂಡ. ಇನ್ನಷ್ಟನ್ನು ಡಬ್ಬಿಯಲ್ಲಿ ಶೇಖರಿಸಿಕೊಂಡು ಹಿಂತಿರುಗಿದ. ಜಲಿಯನ್ ವಾಲಾಭಾಗ್ ಘಟನೆ ಆತನ ಮನಸ್ಸಿನ ಮೇಲೆ ತೀವ್ರವಾದ ಪರಿಣಾಮ ಬೀರಿತ್ತು. ಆದ್ದರಿಂದ ಅವನ ಸಹೋದರಿ ರಾತ್ರಿ ಎಂದಿನಂತೆ ಊಟಕ್ಕೆಬ್ಬಿಸಿದಾಗ ಅವನು ಒಲ್ಲೆನೆಂದು ಮೂಖ ತಿರುಗಿಸಿದ.

೬೬.  ಭಗತ್ ಸಿಂಗ್ ಮತ್ತು ಆತನ ಸಹಚರರಿಗೆ ಗಲ್ಲುಶಿಕ್ಷೆಯಾಗಲು ಕಾರಣವೇನು?
ಉ:   ಜಲಿಯನ್ ವಾಲಾಬಾಗಿನ ರಕ್ತಸಿಕ್ತವಾಗಿದ್ದ ಮಣ್ಣನ್ನು ನಿಧಿಯಂತೆ ಕಾಪಾಡಿಕೊಂಡು ಬಂದಿದ್ದ ಬಾಲಕ ಭಗತ್ ಸಿಂಗ್ ಮುಂದೆ ತನ್ನ ಕ್ರಾಂತಿಕಾರಿ ಗುಂಪಿನ ಸಹಾಯದಿಂದ ಬ್ರಿಟಿಷ ಸರ್ಕಾರದ ವಿರುದ್ಧ ತನ್ನ ಸೇಡನ್ನು ತೀರಿಸಿಕೊಳ್ಳುತ್ತಾನೆ. ಇದರ ಫಲವಾಗಿ ಮರಣ ದಂಡನೆಗೆ ಈಡಾದನು.

೬೭. ಜನರಲ್ ಡಯರ್ ನ ಪೈಶಾಚಿಕ ಕೃತ್ಯವನ್ನು ಕುರಿತು ತಿಳಿಸಿ.
ಉ:   ಜನರಲ್ ಡಯರ್ ಕ್ರೂರ ಮಾರ್ಗದಿಂದ ಭಾರತಿಯರನ್ನು ಬಗ್ಗು  ಬಡಿಯಬಹುದೆಂದು ಭಾವಿಸಿದನು. ಒಟ್ಟು ೧೬೫೦ ಸುತ್ತುಗಳಷ್ಟು ಗುಂಡಿನ ಮಳೆ ಕರೆಯಿಸಿದ್ದ ಅವನು ಹೆಮ್ಮೆಯಿಂದ ಹೇಳಿಕೊಂಡದ್ದು  ಇದು . " ಒಂದೇ ಒಂದು ಗುಂಡು ಸಹ ದಂಡವಾಗಲಿಲ್ಲ " . ಅಂದು ಪ್ರಾಣ ಕಳೆದುಕೊಂಡವರ ಸಂಖ್ಯೆ ಇದನ್ನು ಖಚಿತಗೊಳಿಸಿತ್ತು.

೬೮. ತನ್ನ ಹಳ್ಳಿಯಿಂದ ರೈಲಿನಲ್ಲಿ ಅಮೃತಸರದಲ್ಲಿ ಬಂದಿಳಿದಿದ್ದ ಬಾಲಕ ಭಗತ್ ಸಿಂಗ್ ಅಲ್ಲಿ ಏನು ಮಾಡಿದನು ?
ಉ:   ಹುಡುಗ ಜಲಿಯನ್ ವಾಲಾಭಾಗ್ ನಲ್ಲಿ ಒಂದೆಡೆ ಅಂತರ್ಮುಖಿಯಾಗಿ ಬಹುಕಾಲ ನಿಂತ. ನಂತರ ಅಲ್ಲಿದ್ದ ಸ್ವಲ್ಪ ಮಣ್ಣನ್ನು ತೆಗೆದುಕೊಂಡು ಹಣೆಗಿಟ್ಟುಕೊಂಡ.  ಇನ್ನಷ್ಟನ್ನು ತನ್ನಲ್ಲಿದ್ದ ಡಬ್ಬಿಯಲ್ಲಿ ಶೇಖರಿಸಿಕೊಂಡು ಹಿಂತಿರುಗಿದ.

೬೯.   ಭಗತ್ ಸಿಂಗ್ ತನಗೆ ಪ್ರಿಯವಾದ ಮಾವಿನ ಹಣ್ಣೊಂದನ್ನು ನಿರಾಕರಿಸಿದ್ದಕ್ಕೆ ಕಾರಣ ಹೇಗೆ ತಿಳಿಯಿತು?
ಉ:   ಹನ್ನೆರಡು ವರ್ಷದ ಬಾಲಕ ಶಾಲೆಗೆ ಹೋಗದೆ ಅಮೃತಸರದ ಜಲಿಯನ್ ವಾಲಾಬಾಗ್ ನಲ್ಲಿ ಒಂದೆಡೆ ಅಂತರ್ಮುಖಿಯಾಗಿ ಬಹುಕಾಲ ನಿಂತ. ಅನಂತರ ಅಲ್ಲಿದ್ದ ಮಣ್ಣನ್ನು ಹಣೆಗಿಟ್ಟುಕೊಂಡು ಇನ್ನಷ್ಟನ್ನು ಡಬ್ಬಿಯಲ್ಲಿ ಶೇಖರಿಸಿಕೊಂಡು ರಾತ್ರಿ ಮನೆಗೆ ಬಂದಾಗ ಎಂದಿನಂತೆ ಸಹೋದರಿ ಊಟಕ್ಕೆ ಎಬ್ಬಿಸಿದಾಗ ಒಲ್ಲೆ ಎನ್ನುತ್ತಾನೆ. ಕಾರಣ ಕೇಳಿದಾಗ ಮನೆಯ ಹಿಂಭಾಗಕ್ಕೆ ಕರೆದೊಯ್ದು ರಕ್ತಸಿಕ್ತವಾದ ಮಣ್ಣನ್ನು ತೋರಿಸುತ್ತಾನೆ. ಅದು ಎಲ್ಲಿಯದೆಂದು ತಿಳಿದಾಗ ಭಗತ್ ಸಿಂಗ್ ನು ಮಾವಿನ ಹಣ್ಣೊಂದನ್ನು ನಿರಾಕರಿಸಿದ್ದಕ್ಕೆ ಕಾರಣ ತಿಳಿಯುತ್ತದೆ.

೭೦.   ಮೃಗದ ಬಾಹ್ಯ ಆಕಾರ ಹೇಗಿತ್ತು?
ಉ:   ಮೃಗದ ಬಾಹ್ಯ ಆಕಾರ ಭೀಕರವಾಗಿತ್ತು. ಕೋರೆ ಹಲ್ಲು , ಹಂದಿಯ ದೇಹ, ತೋಳದ  ಚಲನೆಯನ್ನು ಪಡೆದಿತ್ತು.

೭೧.  ದೇವತೆ ಕೊಟ್ಟ ಶಾಪವೇನು?
ಉ:   " ನಿನ್ನನ್ನು ಕನ್ಯೆಯೊಬ್ಬಳು ಮನಸಾರೆ ಒಪ್ಪಿ ಪ್ರೀತಿಸುವವರೆಗೆ ಮೃಗವಾಗಿಯೇ ಇರು " ಎಂದು ದೇವತೆ ಶಾಪ ಹಾಕಿದ್ದಳು.

೭೨.  ಶಾಪ ವಿಮೋಚನೆಯ ಫಲವೇನು?
ಉ:   ಶಾಪ ವಿಮೋಚನೆಯ ನಂತರ ಮೃಗದ ಆಕಾರವೇ ಬದಲಾಯಿತು. ಅದು ಸುಂದರ ರಾಜಕುಮಾರನಾಗಿ ಬದಲಾಯಿತು.

೭೩.   ಮೃಗದ ಬಗೆಗೆ ಸುಂದರಿಯ ಮನ ಕರಗುತ್ತಿತ್ತು ಏಕೆ?
ಉ:   ಮೃಗದ ಒರಟು ಮಾತು, ತಿಕ್ಕಲು ನಡವಳಿಕೆ ಮನಸ್ಸಿನಲ್ಲೇ ನಗು ತರುತ್ತಿದ್ದವು. ಹಾಗೂ ಆತನ ಕಾಳಜಿಯನ್ನು ನೆನೆದು ಮನ ಕರಗುತ್ತಿತ್ತು.

೭೪.   ವರ್ತಕನ ಮೂವರು ಹೆಣ್ಣು ಮಕ್ಕಳ ಸ್ವಭಾವ ಹೇಗಿತ್ತು?
ಉ:   ವರ್ತಕನ ಮೂವರು ಹೆಣ್ಣು ಮಕ್ಕಳಲ್ಲಿ ಹಿರಿಯರಾದ ಇಬ್ಬರು ಬಿಂಕ ಬಡಿವಾರದ ಹುಡುಗಿಯರು. ಫ್ಯಾಷನ್ ಪಾರ್ಟಿ, ಗೆಳೆಯರೆಂದರೆ ಪಂಚಪ್ರಾಣ, ಆದರೆ ಮೂರನೆಯ ಹುಡುಗಿ ತಂದೆಯಷ್ಟೇ ಮೃದುಸ್ವಭಾವದವಳಾಗಿದ್ದಳು. ಆಕೆಗೆ ತಂದೆಯ ನೆಮ್ಮದಿ ಮುಖ್ಯ ರೂಪವತಿಯಾಗಿದ್ದ ಆಕೆಯನ್ನು ಎಲ್ಲರೂ ಸುಂದರಿ ಎಂದೇ  ಕರೆಯುತ್ತಿದ್ದರು.


೭೫.  ವರ್ತಕನು ಬಡವನಾಗಲು ಕಾರಣವೇನು?     
       ಅಥವಾ
       ವರ್ತಕನಿಗೆ ಹಣಕಾಸಿನ ತೊಂದರೆ ಉಂಟಾಗಲು ಕಾರಣವೇನು?
       ಅಥವಾ
       ವರ್ತಕನು ಹಳ್ಳಿಗೆ ವಲಸೆ ಹೋಗಲು ಕಾರಣವೇನು?
ಉ:   ವರ್ತಕನ ವ್ಯಾಪಾರ ಕುಸಿದು ಬಿತ್ತು. ಬರಬೇಕಾಗಿದ್ದ ಹಣ ಬರಲಿಲ್ಲ. ಸರಕುಗಳನ್ನು ತರಲು ದೂರದ ದೇಶಕ್ಕೆ ಪ್ರಾಯಾಣಿಸಿದ್ದ ಹಡಗುಗಳು ಹಿಂತಿರುಗಲಿಲ್ಲ. ಅವನ ಸಾಲಗಳು ಅವನನ್ನು ಬಾಧಿಸತೊಡಗಿದವು. ಇದ್ದಬದ್ದ ಸ್ಥಿರಾಸ್ತಿ, ಚರಾಸ್ತಿಯನ್ನೆಲ್ಲ ಮಾರಿ ಸಾಲ ತೀರಿಸಿದನು. ಆದ್ದರಿಂದ ಬಡವನಾದ ಅವನು ತನ್ನ ಹೆಣ್ಣು ಮಕ್ಕಳನ್ನು ಕರೆದುಕೊಂಡು ಹೋಗಿ ಹಳ್ಳಿಯಲ್ಲಿ ನೆಲೆಸಿದನು.

೭೬.   ವರ್ತಕನು ಹಡಗನ್ನು ಸ್ವಾಗತಿಸಲು ನಗರಕ್ಕೆ ಹೊರಟಾಗ ಮೂವರು ಹೆಣ್ಣುಮಕ್ಕಳು ಏನೇನು ತರಲು ಹೇಳಿದರು?
ಉ:   ವರ್ತಕನೌ ಹಡಗನ್ನು ಸ್ವಾಗತಿಸಲು ನಗರಕ್ಕೆ ಹೊರಟಾಗ ಅವನ ಇಬ್ಬರು ಹಿರಿಯ ಹೆಣ್ಣು ಮಕ್ಕಳು ಬಟ್ಟೆ, ಒಡವೆ ಮತ್ತು ಅಲಂಕಾರದ ವಸ್ತುಗಳ ಪಟ್ಟಿ ನೀಡಿದರು. ಆದರೆ ಸುಂದರಿ ತನಗೊಂದು ಗುಲಾಬಿ ಹೂಗಳ ಗೊಂಚಲು ತರಬೇಕೆಂದು ಕೇಳಿಕೊಂಡಳು.

೭೭.   ವರ್ತಕನು ನಿರ್ಜನ ಪ್ರದೇಶದಲ್ಲಿ ನೋಡಿದ ಅರಮನೆಯಲ್ಲಿ ಏನು ಮಾಡಿದನು?
ಉ:   ವರ್ತಕನು ಅಂಜಿಕೆಯಿಂದ ಅರಮನೆ ಪ್ರವೇಶಿಸಿದನು. ಆ ಅರಮನೆಯ ಒಂದು ಕೋಣೆಯಲ್ಲಿ ಭಕ್ಷ್ಯ ಭೋಜ್ಯಗಳನ್ನು ಇಡಲಾಗಿತ್ತು. ಹಸಿವೆ ತಾಳಲಾರದೆ ಉಂಡ. ಭೋಜನ ಸವಿದು ಹೊರಬಂದ. ಪುಷ್ಪವನದ ಗುಲಾಬಿಯನ್ನು ನೋಡಿದ. ತನ್ನ ಮಗಳು ಸುಂದರಿಗಾಗಿ ಒಂದು ಗೊಂಚಲು ಕಿತ್ತುಕೊಂಡ.

೭೮.   ವರ್ತಕನು ಅರಮೆಯಲ್ಲಿ ಊಟಮಾಡಿ, ಹೂಗಳನ್ನು ಕಿತ್ತಿದ್ದರಿಂದ ಮೃಗ ಅವನಿಗೆ ಏನೆಂದು ಎಚ್ಚರಿಕೆ ನೀಡಿತು?
ಉ:   ವರ್ತಕನು ಅರಮನೆಯಲ್ಲಿ ಊಟಮಾಡಿ, ಹೂಗಳನ್ನು ಕಿತ್ತಿದ್ದರಿಂದ ಮೃಗ ಸಿಟ್ಟಿನಿಂದ ಅಬ್ಬರಿಸಿ, ಕೇಳು ನಿನ್ನ ಬದಲಾಗಿ ನಿನ್ನ ಮುದ್ದು ಮಗಳನ್ನು ತಂದು ಕೊಟ್ಟರೆ ನಿನ್ನನ್ನು ಕೊಲ್ಲುವುದಿಲ್ಲ. ನೀನು ತಪ್ಪಿಸಿಕೊಳ್ಳಲಾರೆ. ಈ ಬುಟ್ಟಿ ತೆಗೆದುಕೋ. ಇದರೊಂದಿಗೆ ಹೋಗು ನಾಳೆ ಸಂಜೆ  ಒಳಗೆ ನಿನ್ನ ಮಗಳನ್ನು ಕರೆತರದಿದ್ದರೆ, ನಿನ್ನನ್ನು ನಿನ್ನ ಮಗಳನ್ನು ಒಟ್ಟಿಗೇ ಮುಗಿಸುತ್ತೇನೆ ಎಂದಿತು.

೭೯.   ಮೃಗವು " ನನ್ನ ಹೃದಯ ಒಳ್ಳೆಯದಿರಬಹುದು, ಆದರೂ ನಾನು ಮೃಗ " ಎಂಬ ಮಾತಿಗೆ ಸುಂದರಿಯ ಪ್ರತಿಕ್ರಿಯೆ ಏನು?
ಉ:   ಮೃಗವು " ನ್ನನ್ ಹೃದಯ ಒಳ್ಳೆಯದಿರಬಹುದು ಆದರೂ ನಾನು ಮೃಗ " ಎಂದು ಹೇಳಿದ ಮಾತಿಗೆ ಸುಂದರಿ, "ಮೃಗ ಒಳ್ಳೆಯ ಹೃದಯ ಹೊಂದಿದ್ದರೂ ಮೃಗದ ಆಕಾರ ಹೊಂದಿರುವುದು ಸಹಜ. " ಆದರೆ ಜಗತ್ತಿನ ಅನೇಕ ಮನುಷ್ಯರು ಸುಂದರ ಆಕರ ಪಡೆದು, ಮೃಗದ ಹೃದಯ ಹೊಂದಿರುತ್ತಾರೆ. ಎಂದು ಪ್ರತಿಕ್ರಿಯಿಸಿದಳು.

೮೦.  ಒಗಟಿನ ಉತ್ತರ ’ ಅಂಗಿ ’ ಎಂಬುದನ್ನು ಸಮರ್ಥಿಸಿ
          ಅಥವಾ
         ಅಂಗಿ ಎಂಬ ಉತ್ತರ ಬರುವ ಬೆಡಗಿನ ಪ್ರಶ್ನೆಯನ್ನು ತಿಳಿಸಿ.
ಉ:   ಅಂಗಿಯ ಎರಡು ತೋಳುಗಳ ಭಾಗವೇ ಕೈ . ಅಂಗಿಗೆ ತಲೆಯಿಲ್ಲ ಅಂಗಿಯ ಬೇರೆ ಬೇರೆ ಭಾಗ ಸೇರಿಸಿ ಹೊಲಿಗೆ ಹಾಕಿರುವುದೇ ನವಗಾಯ. ಮೆಲ್ಲನೆ ಬಂದು ಶರೀರಕ್ಕೆ ತೋಡಿಸುವುದರಿಂದ  ಅದು ಅಂಗಿಯಾಗಿ ಎಲ್ಲರಿಗೂ ಪರಿಚಯವಾಗುತ್ತದೆ.

೮೧.  ಉಪ್ಪಿನ ವಿಶೇಷತೆ ಒಗಟಿನಲ್ಲಿ ಹೇಗೆ ವ್ಯಕ್ತವಾಗಿದೆ?
ಉ:  ಉಪ್ಪು ನೀರಿನಲ್ಲಿ ಇರುವ ಅಂಶವಾಗಿದೆ. ಅದನ್ನು ನೀರಿನಿಂದಲೇ ತಯಾರಿಸುತ್ತಾರೆ.ಆದರೆ ಅದಕ್ಕೆ ನೀರು ತಾಗಿದರೆ  ಕರಗಿ ಮಾಯವಾಗುತ್ತದೆ ಎಂಬ ಉಪ್ಪಿನ ವಿಶೇಷತೆ ಈ ಒಗಟಿನಲ್ಲಿ ವ್ಯಕ್ತವಾಗಿದೆ.

೮೨.  ಕೆಸರಿಗೂ ಕಮಲಕ್ಕೂ ಇರುವ ಸಂಬಂಧವನ್ನು ಒಗಟು ಹೇಗೆ ವಿವರಿಸುತ್ತದೆ?
ಉ:   ಕಮಲದ ಹೂವು ಬೆಳೆಯಲು ಕೆಸರು ಬೇಕು. ಆದ್ದರಿಂದ ಅದು ಕೆಸರಿನಲ್ಲೆ ಹುಟ್ಟಿ ಕೆಸರಿನಲ್ಲೆ ಬೆಳೆಯುವ ಒಂದು ವಿಧವಾದ ಗಿಡವಾಗಿದೆ ಎಂದು ವರ್ಣಿಸಿರುವುದು ಸೂಕ್ತವಾಗಿದೆ.

೮೩.   ಹೊಲದಲ್ಲಿ ಹುಟ್ಟಿದ ಉತ್ತರಾಣಿ ಹಾಗೂ ಗರಿಕೆ ಕೊಡುವ ತೊಂದರೆಯನ್ನು ಒಗಟು ಹೇಗೆ ವಿವರಿಸುತ್ತದೆ?
ಉ;  ಹೊಲದ ಬದುವಿನಲ್ಲಿ ಹುಟ್ಟುವ ಉತ್ತರಾಣಿ ಗಿಡದಲ್ಲಿ ಬೆಳೆಯುವ ಬೀಜಗಳು ಮುಳ್ಳಿನಂತಿರುತ್ತದೆ. ಆ ಗಿಡವಿರುವ ಬದುವಿನಲ್ಲಿ ನಡೆದುಕೊಂಡು  ಹೋಗುವವರ ಸೆರಗನ್ನು ಹಿಡುದುಕೊಳ್ಳುತ್ತದೆ. 
ರೈತನಿಗೆ ತೊಂದರೆ ಕೊಡುವ ಗರಿಕೆಯನ್ನು ಎಷ್ಟೇ ಉತ್ತರೂ  ಹೊಲದಲ್ಲಿ ನಾಶಪಡಿಸಲು ಸಾಧ್ಯವಿಲ್ಲ. ಅದು ಮತ್ತೆ ಚಿಗುರಿಕೊಳ್ಳುತ್ತದೆ, ರೈತನ ಪ್ರಯತ್ನ ಕಂಡು ನಿನ್ನದು ವ್ಯರ್ಥ ಪ್ರಯತ್ನ ನನ್ನನ್ನು ನಾಶ ಪಡಿಸಲು ನಿನ್ನಿಂದ ಸಾಧ್ಯವಿಲ್ಲ ವೆಂಬಂತೆ ನಗುತ್ತದೆ ಎಂದು ಒಗಟಿನಲ್ಲಿ ಸ್ವಾರಸ್ಯಕರವಾಗಿ ಹೇಳಲಾಗಿದೆ.

೮೪.  ಬೀಸುವ ಕಲ್ಲನ್ನು ಕುರಿತು ಒಗಟನ್ನು ವಿವರಿಸಿ.
ಉ:   ಬೀಸುವ ಕಲ್ಲಿನ ಮೇಲೆ ಮಧ್ಯಭಾಗಲ್ಲಿರುವ ಬಾಯಿಗೆ ಧಾನ್ಯವನ್ನು ಹಾಕಲಾಗುತ್ತದೆ. ಬೀಸುತ್ತಿದ್ದಂತೆ  ಅದು ಕಲ್ಲಿನ ಒಳಗೆ ಹೋಗುತ್ತದೆ. ಅದನ್ನೆ ಒಗಟಿನ ’ ಬಾಯಲ್ಲಿ ತಿಂಬೋದು ’  ಎನ್ನಲಾಗಿದೆ. ಹಾಗೆಯೇ ಅದರಲ್ಲಿ ಬೀಸುವಾಗ ಅದರ ಸುತ್ತ ಹಿಟ್ಟು ಚೆಲ್ಲುತ್ತದೆ, ಇದನ್ನೆ ಕುಕ್ಕುವುದು ( ಕಕ್ಕುವುದು ) ಎಂದು ಹೇಳಲಾಗಿದೆ.

೮೫.   ಒಗಟುಗಳಿಂದ ಶೈಕ್ಷಣಿಕವಾಗಿ ಏನು ಲಾಭ ?
ಉ:   ಒಗಟುಗಳಿಂದ ಚಿಂತನೆ ಮಾಡುವ ಮನೋಭಾವ ಹೆಚ್ಚುತ್ತದೆ. ಉತ್ತರ ಕಂಡುಕೊಳ್ಳಲು ಮನಸ್ಸು ಆಲೋಚಿಸುತ್ತದೆ. ಆಗ ಆಲೋಚನಾ ಶಕ್ತಿ ಹೆಚ್ಚಾಗುತ್ತದೆ. ಮುದುಡಿದ ಮನಸ್ಸು ಅರಳಿಸಲು, ಮನೋರಂಜನೆ ನೀಡಲು ಒಗಟುಗಳು ಸಹಾಯಕವಾಗುತ್ತದೆ. ಜನಪದರ ಬುದ್ಧಿವಂತಿಕೆಯನ್ನು ತಿಳಿಯುವುದರ ಜೊತೆಗೆ ಒಂದು ವಸ್ತುವನ್ನು ಹೇಗೆಲ್ಲ ಬಣ್ಣಿಸಬಹುದೆಂಬ ಚಿಂತನೆ ಮೂಡುತ್ತದೆ. ಇವೆಲ್ಲ ಕಾರಣದಿಂದ ಶೈಕ್ಷಣಿಕವಾಗಿ ಒಗಟುಗಳಿಂದ ಲಾಭವಾಗುತ್ತದೆ.






4 comments:

  1. ಈ ಮೇಲೆ ತಿಳಿಸಿರುವ ಪ್ರಶ್ನೋತ್ತರಗಳ ಜೊತೆ ಜೊತೆಗೆ ಸಂದರ್ಭ ಸ್ವಾರಸ್ಯಗಳು,೮/೧೦ ವಾಕ್ಯಗಳ ಪ್ರಶ್ನೋತ್ತರಗಳು,ಇತರೆ ಪ್ರಶ್ನೋತ್ತರಗಳು, ಭಾಷಾಭ್ಯಾ ಗಳು+ಭಾಷಾ ಚಟುವಟಿಕೆಗಳನ್ನು ತಿಳಿಸಲು ತಮ್ಮಲ್ಲಿ ಮನವಿ---ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ.

    ReplyDelete
  2. ಗರಿಕೆಯ ಹುಲ್ಲಿನ ಕುರಿತು ಬರೆಯಿರಿ

    ReplyDelete