Search This Blog

Sunday, January 27, 2019


ಅವ್ಯಯಗಳು

ನಾಮಪದ, ಕ್ರಿಯಾಪದಗಳಂತೆ ಲಿಂಗ ವಚನ, ವಿಭಕ್ತಿಗಳಿಂದ
ರೂಪಭೇದವನ್ನು ಹೊಂದದೆ ಏಕರೂಪವಾಗಿರುವ ಪದಗಳನ್ನು
’ಅವ್ಯಯ’ ಎನ್ನುವರು.


ಅವ್ಯಯದ ಪ್ರಕಾರಗಳು ( ಉದಾಹರಣೆ ಸಹಿತ)

೧. ಸಾಮಾನ್ಯಾರ್ಥಕಾವ್ಯಯ:  ಯಾವುದಾದರೊಂದು ಕ್ರಿಯೆ ನಡೆದ
ರೀತಿಯನ್ನು ಹೇಳುವಂತಹ ಅವ್ಯಯಗಳೇ ಸಾಮಾನ್ಯಾವ್ಯಗಳು.
ಇವು ಹೆಚ್ಚಾಗಿ ವಿಶೇಷಣಗಳಾಗಿರುತ್ತವೆ.

ಉದಾ: ಬೇಗನೇ ಮೆಲ್ಲಗೆ, ಸೊಗಸಾಗಿ, ಸುಮ್ಮನೆ, ತಟ್ಟನೆ, ತರುವಾಯ,
ಹಾಗೆ, ಅಂತು, ಬೇರೆ, ಬಳಿಕ. ಕೂಡಲೆ,ಚೆನ್ನಗಿ ಇತ್ಯಾದಿಗಳು


ಅನುಕರಣಾವ್ಯಯಗಳು: ನಿರ್ದಿಷ್ಟ ಅರ್ಥವಿಲ್ಲದೆ ಧ್ವನಿ ವಿಶೇಷಣಗಳನ್ನು
ತಾನು ಕಿವಿಯಿಂದ ಕೇಳಿದಂತೆ ಅನುಕರಣೆ ಮಾಡಿ ಹೇಳುವ
ಪದಗಳನ್ನು ’ಅನುಕರಣಾವ್ಯಯ’ಗಳೆಂದು ಕರೆಯುತ್ತಾರೆ.

ಉದಾ: ಚಟಚಟ, ಕರಕರ, ಚುರುಚುರು, ಧಗಧಗ, ರೊಯ್ಯನೆ,ಸುಯ್ಯನೆ,
ಘುಳುಘುಳು, ದಡದಡ ಇತ್ಯಾದಿ.

ಭಾವಸೂಚಕಾವ್ಯಯ:  ಮನಸ್ಸಿನಲ್ಲಿ ಉಂಟಾಗುವ ಕೋಪ, ಹರ್ಷ, ದು:ಖ,
ಮೆಚ್ಚುಗೆ, ಆಕ್ಷೇಪ, ತೀರಸ್ಕಾರ -ಇತ್ಯಾದಿ ಭಾವಗಳನ್ನು ವ್ಯಕ್ತಪಡಿಸಿದಾಗ
ಅರ್ಥವಿಲ್ಲದ ಕೆಲವು ಪದಗಳನ್ನು ಬಳಸುತ್ತೇವೆ. ಇಂತಹ ಪದಗಳೇ
ಭಾವಸೂಚಕಾವ್ಯಯ.
ಉದಾ:  ಆಹಾ! ಭಳಿರೆ! ಅಯ್ಯೋ! ಓಹೋ! ಹೋ!, ಅ:! ಆ:! ಓ!-
ಇತ್ಯಾದಿ ಪದಗಳು ಅಥವಾ ಪದ ರೂಪದ ಅಕ್ಷರಗಳು.

ಕ್ರಿಯಾರ್ಥಕಾವ್ಯಯ: ಕ್ರಿಯಾಪದದ ಸ್ಥಾನದಲ್ಲಿದ್ದು ವಾಕ್ಯದ ಅರ್ಥವನ್ನು
ಪೂರ್ಣಗೊಳಿಸುವ ಅವ್ಯಯಗಳೇ ಕ್ರಿಯಾರ್ಥಕಾವ್ಯಯಗಳು.

ಉದಾ: ಅಹುದು, ಸಾಕು, ಅಲ್ಲ, ಹೌದು, ಬೇಡ, ಉಂಟು ಇತ್ಯಾದಿ

ಸಂಬಂಧಾರ್ಥಕಾವ್ಯಯಗಳು: ಎರಡು ಪದಗಳನ್ನಾಗಲಿ ಹಲವು
ಪದ ಸಮುಚ್ಚಯಗಳನ್ನಾಗಲಿ, ವಾಕ್ಯಗಳನ್ನಾಗಲಿ, ಜೋಡಿದುವಂತಹ ಅಥವಾ
ಸಂಬಂಧಗೊಳಿಸುವಂತಹ ಪದಗಳೇ ಸಂಬಂಧಾರ್ಥಕ ಅವ್ಯಯಗಳು.

ಉದಾ: ಮತ್ತು, ಅಥವಾ, ಆದ್ದರಿಂದ, ,.ಉಂ ಅಲ್ಲದೆ ಇತ್ಯಾದಿ

ಪದಗಳ ಜೋಡಣೆ: ರಾಮನೂ ಲಕ್ಷ್ಮಣನೂ ಸೀತೆಯೂ ಕಾಡಿಗೆ
ಹೊರಟರು. ( ಊ)

ಪದಸಮುಚ್ಚಯ ಜೋಡಣೆ: ಅವನು ಬರುವುದು ಬೇಡ; ಆ ಕೆಲಸ ಆಗುವುದು ಬೇಡ.

ವಾಕ್ಯಗಳ ಜೋಡಣೆ:  ಅವನು ಬರಲಿಲ್ಲ ಆದ್ದರಿಂದ ನಾನು ಬರಲಿಲ್ಲ.

ಅವಧಾರಣಾರ್ಥಕಾವ್ಯಯ: ಒಂದು ನಿಶ್ಚಯಾರ್ಥದಲ್ಲಿರುವ ಅವ್ಯಯಗಳನ್ನು
ಅವಧಾರಣಾರ್ಥಕ ಅವ್ಯಯ ಎಂದು ಕರೆಯುತ್ತಾರೆ. ಹಲವು ವಸ್ತುಗಳಲ್ಲಿ
ಒಂದನ್ನು  ನಿಶ್ಚಯವಾಗಿ ಹೇಳುವ ಸಂದರ್ಭದಲ್ಲಿ ಇದನ್ನು ಬಳಸುವರು.

ಉದಾ: ಅವನೇ, ಅದುವೇ, ನೀನೇ, ಅವಳೇ, ಅವರೇ ಇತ್ಯಾದಿ ಪದಗಳ
ಕೊನೆಯಲ್ಲಿ ’ಏ’ ಎಂಬ ಅಕ್ಷರ ಬಳಸಲಾಗುತ್ತದೆ.













ಅನ್ಯದೇಶ್ಯ ಪದಗಳು

ಅನ್ಯದೇಶ್ಯ ಪದಗಳು















ಶಾಲೆಯೆಂಬ ಜ್ಞಾನ ದೇಗುಲದಲ್ಲಿ
ತೆರೆದ ಪುಟದಲ್ಲಿರುವ ಪುಸ್ತಕದ
ಅಕ್ಷರಗಳೆಂಬ ಸಮೂಹದಲ್ಲಿ
ಲೇಖನ ಚಿಹ್ನೆಗಳೆಂಬ ವ್ಯಾಕರಣವನ್ನು
ಸುಲಲಿತವಾಗಿ ಕಲಿಯೋಣ.  







Tuesday, January 22, 2019

( Continuation  of previous post...)

ಪದ್ಯ ಕಂಠಪಾಠ ( ೪ ಅಂಕ ಪಡೆಯಲು ಓದಬೇಕಾದ ಪದ್ಯ ಭಾಗ)

                ೧ ರಿಂದ ೮ ಪದ್ಯ -
   
೧.   ಕಲುಷಿತವಾದೀ --------  
          ---------------------
          ---------------------
         ---------------------                       
         ------------ಮುಟ್ಟೋಣ
    ೨.   ಮತಗಳೆಲ್ಲವೂ ----------
          ---------------------
          ---------------------
          --------------ಬಿತ್ತೋಣ

    ೩.   ನೀಲ ಮೇಘ ಮಂಡಲ --------
          ---------------------
          ---------------------
          ---------------------
          ಹಕ್ಕಿ ಹಾರುತಿದೆ ನೋಡಿದಿರಾ?
    ೪.   ಯುಗಯುಗಗಳ ---------- ---
          ---------------------
          ---------------------
          ---------------------
          ಹಕ್ಕಿ ಹಾರುತಿದೆ ನೋಡಿದಿರಾ?

    ೫.   ಕೊಡಲಿ -------------- 
          ---------------------
          --------------------
          ------------------ನಾನೆಷ್ಟಾ
    ೬.   ಸಿಕ್ಕದ್ದು --------------  
          ---------------------
          ---------------------
          -----------------ಜನಕಾ

    ೭.   ಕೊರಳಸೆರೆ ಹಿಗ್ಗಿದವು ದೃಗುಜಲ
          ---------- ------------
          -----------------------
          -----------------------
          -----------------------
          ನರುಹಿ ಕೊಂದನು ಹಲವು ಮಾತೇನೆಂದು ಚಿಂತಿಸಿದ
    ೮.   ಮಾರಿಗೌತಣವಾಯ್ತು ನಾಳಿನ
          ----------------------
          ----------------------
          ---------------------- 
          ----------------------
          ವೀರರೈವರ ನೋಯಿಸೆನು ರಾಜೀವಸಖನಾಣೆ

    ೯.   ಹಸುರಾಗಸ  -----------
          ---------------------
          ---------------------
          ----------------ಬಿಸಿಲು
    ೧೦. ಹೊಸ ಹೂವಿನ --------
          ---------------------
          ---------------------
          ---------------ಯುಸಿರೂ!

    ೧೧. ನೆಲಕಿರಿವೆನೆಂದು ಬಗೆದಿರೆ ----
          ---------------------
          ---------------------
          --------------------ಪುದುವಾಳ್ದಪೆನೇ
    ೧೨. ಪುಟ್ಟಿದ ನೂರ್ವರುಮೆನ್ನೊಡ ------
          ---------------------
          ---------------------
          -------ಛಲಮನೆ ಮೆರೆವೆಂ

    ೧೩. ಉರ್ವಿಯೊಳ್ ಕೌಸಲ್ಯೆ ಪಡೆದ ಕುವರಂ ರಾಮ
          ---------------------
          ---------------------
          ---------------------
          ---------------------
         ಗುರ್ವತೋಳ್ಗಳಿವೇತಕೆಂದು ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು
    ೧೪. ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ
          --------------------- 
           ---------------------
           ---------------------
           ---------------------  
           ನಗಡುತನದಿಂದೆ ಬಿಲ್ದಿರುವನೇರಿಸಿ ತೀಡಿ ಜೇಗೈದು ನಿಂತಿರ್ದನು

    ೧೫. ಅಂತೆಂಬನಾರ್ಗೆ ---------
          ---------------------
          ---------------------
          ---------------- ನುಡಿದಂ
    ೧೬. ಒಡವೆಯನರ್ಥಿಗಿತ್ತೆ -------
          ---------------------
          ---------------------
          ------------ಕುಂಭಸಂಭವ         

ಕವಿ ಪರಿಚಯ
ಸಾಹಿತಿ/ ಕವಿಗಳ ಕಾಲ, ಸ್ಥಳ ಕೃತಿ ಮತ್ತು ಪ್ರಶಸ್ತಿ/ಬಿರುದುಗಳನ್ನು
     ಕುರಿತು ವಾಕ್ಯರೂಪದಲ್ಲಿ ಬರೆಯಿರಿ.
  ( ೬ ಅಂಕಗಳನ್ನು ಪಡೆಯಲು ಓದಬೇಕಾದ ಪ್ರಶ್ನೆಗಳು)
  
 ಗದ್ಯಭಾಗ
.  ಸಾರಾ ಅಬೂಬಕ್ಕರ ಅವರು ೩೦ ಜೂನ್ ೧೯೩೬ ರಂದು ಕಾಸರಗೋಡಿನಲ್ಲಿ
     ಜನಿಸಿದರು. ಇವರು ಚಂದ್ರಗಿರಿಯ ತೀರದಲ್ಲಿ, ಸಹನಾ, ಕದನವಿರಾಮ,
        ವಜ್ರಗಳು, ಸುಳಿಯಲ್ಲಿ ಸಿಕ್ಕವರು, ತಳ ಒಡೆದ ದೋಣಿಯಲಿ ಮುಂತಾದ
     ಕೃತಿಗಳನ್ನು ಚಪ್ಪಲಿಗಳು,  ಖೆಡ್ಡಾ ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು,
     ಪಯಣ ಮುಂತಾದ ಕಥಾಸಂಕಲನಗಳನ್ನು ರಚಿಸಿದ್ದಾರೆ. ಇವರಿಗೆ
       ನೃಪತುಂಗ ಪ್ರಶಸ್ತಿ ಲಬಿಸಿದೆ.

೨. ಪು. ತಿ. ನ.
    ಪು. ತಿ. ನ. ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಪುರೋಹಿತ
      ತಿರುನಾರಾಯಣಯ್ಯಂಗಾರ್ಯ   ನರಸಿಂಹಾಚಾರ್ ಅವರು
    ಕ್ರಿ.ಶ. ೧೯೦೫ ರಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆಯಲ್ಲಿ  ಜನಿಸಿದರು.
   ಇವರು ಅಹಲ್ಯೆ, ಗೋಕುಲ ನಿರ್ಗಮನ, ಶಬರಿ, ವಿಕಟಕವಿ ವಿಜಯ,
     ಹಂಸದಮಯಂತಿ ಮತ್ತು ಇತರ ರೂಪಕಗಳು, ಹಣತೆ, ರಸಸರಸ್ವತಿ 
     ಗಣೇಶದರ್ಶನ,  ಶಾರದಯಾಮಿನಿ, ಶ್ರೀಹರಿಚರಿತೆ, ರಥಸಪ್ತಮಿ ಕೃತಿಗಳನ್ನು
   ರಚಿಸಿದ್ದಾರೆ. ಇವರಿಗೆ  ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ ಮತ್ತು
   ಗೌರವ ಡಿ. ಲಿಟ್ ಪದವಿ ಲಬಿಸಿದೆ.

೩.  ವಿ. ಕೃ. ಗೋಕಾಕ
     ವಿನಾಯಕ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಡಾ. ವಿನಾಯಕ ಕೃಷ್ನ ಗೋಕಾಕ
    ಅವರು ಕ್ರಿ. ಶ. ೧೯೦೯ ರಲ್ಲಿ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಜನಿಸಿದರು. ಇವರ
     ಕೃತಿಗಳು ಸಮುದ್ರಗೀತೆಗಳು, ಪಯಣ, ಉಗಮ, ಇಜ್ಜೋಡು, ಸಮರಸವೇ ಜೀವನ, ಭಾರತ
     ಸಿಂದು ರಶ್ಮಿ ಮೊದಲಾದವು. ಇವರಿಗೆ ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ, ಪದ್ಮಶ್ರೀ
      ಮತ್ತು ಗೌರವ ಡಿ. ಲಿಟ್ ಮತ್ತು ಡಾಕ್ಟರೇಟ್ ಪ್ರಶಸ್ತಿ ಲಬಿಸಿದೆ.

೪.  ಡಿ. ಎಸ್ ಜಯಪ್ಪಗೌಡ
    ಇವರು ೧೯೪೭ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿ
     ಜನಿಸಿದನು. ಇವರ ಕೃತಿಗಳು ಕರ್ನಾಟಕ ಗ್ರಾಮೀಣ ಸಂಸ್ಥೆಗಳು, ಕರ್ನಾಟಕದ ಕಡಲಾಚೆಯ
     ಸಂಪರ್ಕಗಳು, ಮೈಸೂರು ಒಡೆಯರು, ಜನಪದ ಆಟಗಳು, ದಿವಾನ್ ಸರ್ ಎಂ ವಿಶ್ವೇಶ್ವರಯ್ಯನವರ
    ಕಾರ್ಯಸಾಧನೆಗಳು  ಮೊದಲಾದವು. ಕರ್ನಾಟಕ ಸಾಹಿತ್ಯ ಅಕಾಡಮೆ ಪ್ರಶಸ್ತಿ ಲಬಿಸಿದೆ.

೫.  ದೇವನೂರು ಮಹದೇವ
     ಇವರು ೧೯೪೮ ರಲ್ಲಿ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನಲ್ಲಿ
     ಜನಿಸಿದರು.  ಇವರ ಕೃತಿಗಳು ದ್ಯಾವನೂರು, ಒಡಲಾಳ, ಗಾಂಧಿ ಮತ್ತು ಮಾವೊ
     ನಂಬಿಕೆಯ ನೆಂಟ, ನೋಡು ಮತ್ತು ಕೂಡು ಎದೆಗೆ ಬಿದ್ಧ ಅಕ್ಷರ. ಇವರಿಗೆ ಕೆಂದ್ರ ಸಾಹಿತ್ಯ
       ಅಕಾಡೆಮಿ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಭಾರತಿಯ ಭಾಷಾ ಪರಿಷತ್
     ಪ್ರಶಸ್ತಿ ಲಬಿಸಿದೆ.


೬.  ಎ. ಎನ್. ಮೂರ್ತಿರಾವ್
          ಇವರು ಕ್ರಿ.ಶ. ೧೯೦೦ ರಲ್ಲಿ ಮಂಡ್ಯಜಿಲ್ಲೆಯ ಅಕ್ಕಿಹೆಬ್ಬಾಳಿನಲ್ಲಿ
ಜನಿಸಿದರು. ಹಗಲುಗನಸುಗಳು, ಅಲೆಯುವ ಮನ, ಅಪರವಯಸ್ಕನ
ಅಮೇರಿಕಾಯಾತ್ರೆ, ಮಿನುಗು-ಮಿಂಚು, ಪೂರ್ವಸೂರಿಗಳೊಡನೆ ಚಂಡಮಾರುತ
ಮೊದಲಾದವುಗಳು ಇವರ ಕೃತಿಗಳು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
ಪಂಪ ಪ್ರಶಸ್ತಿ ಮತ್ತು ಗೌರವ ಡಿ. ಲಿಟ್ ಪದವಿ ಲಬಿಸಿದೆ.

೭.  ದುರ್ಗಸಿಂಹ
      ಕ್ರಿ. ಶ. ೧೦೩೧ ರಲ್ಲಿ ಕಿಸುಕಾಡು ನಾಡಿನ ಸೈಯಡಿಯಲ್ಲಿ ಜನಿಸಿದರು.
ಇವರು ಪಂಚತಂತ್ರ ಚಂಪೂಕಾವ್ಯದ ಕೃರ್ತ. ಪಂಚತಂತ್ರದಲ್ಲಿ ಭೇದ, ಪರೀಕ್ಷಾ,
ವಿಶ್ವಾಸ, ವಂಚನಾ ಮತ್ತು ಮಿತ್ರಕಾರ್ಯ ಎಂಬ ತಂತ್ರಗಳನ್ನಾದರಿಸಿದ
೪೮ ಉಪಕಥೆಗಳಿವೆ. ಕಾವ್ಯವೂ ೪೫೭ ಪದ್ಯಗಳಿಂದಲೂ ೨೩೦ ಶ್ಲೋಕಗಳಿಂದ
ಕೂಡಿದೆ. ಇವರು ಒಂದನೆಯ ಜಗದೇಕಮಲ್ಲನ್ ಆಸ್ಥಾನದಲ್ಲಿ ದಂಡನಾಯಕನು
ಮತ್ತು ಸಂಧಿವಿಗ್ರಹಿಯು ಆಗಿದ್ದನು.                                                             

೮. ಶಿವಕೋಟ್ಯಾಚಾರ್ಯ
    ಕ್ರಿ. ಶ. ಸುಮಾರು ೧೦ನೆಯ ಶತಮಾನದಲ್ಲಿ ಬಳ್ಳಾರಿ ಜಿಲ್ಲೆಯ ಹೂವಿನ
ಹಡಗಲಿ ತಾಲೂಕಿನ ಕೋಗಳಿ ನಾಡಿನಲ್ಲಿ ಜನಿಸಿದರು.  ಕನ್ನಡದ ಪ್ರಥಮ
ಗದ್ಯ ಕೃತಿ ವಡ್ಡಾರಾಧನೆಯ ಕರ್ತೃ. ಜೈನ ಧಾರ್ಮಿಕ ಕಥೆಗಳ ಸಂಗ್ರಹವಾದ
ವಡ್ಡಾರಾಧನೆಯಲ್ಲಿ ೧೯ ಕಥೆಗಳಿವೆ.

ಪದ್ಯ ಭಾಗ ( ಕವಿಗಳು)

೧. ಜಿ. ಎಸ್. ಶಿವರುದ್ರಪ್ಪ
     ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪರವರು ಕ್ರಿ. ಶ. ೧೯೨೬ರಲ್ಲಿ ಶಿವಮೊಗ್ಗ ಜಿಲ್ಲೆಯ
ಶಿಕಾರಿಪುರದಲ್ಲಿ ಜನಿಸಿದರು. ಅವರ ಸಾಮಗಾನ, ಚೆಲುವು-ಒಲವು, ದೇವಶಿಲ್ಪ, ದೀಪದ ಹೆಜ್ಜೆ
ಅನಾವರಣ, ವಿಮರ್ಶೆಯ ಪೂರ್ವಪಶ್ಚಿಮ, ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು,
 ಕೇಂದ್ರ  ಸಾಹಿತ್ಯ ಅಕಾಡೆಮಿ, ನಾಡೋಜ, ರಾಷ್ಟ್ರ ಕವಿ, ಗೌರವ ಡಿ. ಲಿಟ್,
ಪಂಪ ಪ್ರಶಸ್ತಿ ಲಬಿಸಿದೆ.

೨.  ದ. ರಾ. ಬೇಂದ್ರೆ
     ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ದತ್ತಾತ್ರೇಯ
ರಾಮಚಂದ್ರ ಬೇಂದ್ರೆಯವರು ಕ್ರಿ. ಶ. ೧೮೯೬ರಲ್ಲಿ ಧಾರವಾಡದಲ್ಲಿ ಜನಿಸಿದರು.
ಅವರು ಗರಿ,ಕೃಷ್ಣಕುಮಾರಿ, ಉಯ್ಯಾಲೆ, ಸಖೀಗೀತ, ನಾದಲೀಲೆ, ಮೇಘದೂತ,
ಗಂಗಾವತ್ರಣ, ಸೂರ್ಯಪಾನ, ನಗೆಯ ಹೊಗೆ, ಸಾಹಿತ್ಯದ ವಿರಾಟ್ ಸ್ವರೂಪ
ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಜ್ಞಾನಪೀಠ, ಕೇಂದ್ರ ಸಾಹಿತ್ಯ ಅಕಾಡೆಮಿ
ಪದ್ಮಶ್ರೀ ಪುರಸ್ಕಾರ ಲಬಿಸಿದೆ.

೩.  ಕುಮಾರವ್ಯಸ
    ಕುಮಾರವ್ಯಾಸ ಎಂದು ಪ್ರಸಿದ್ಧನಾಗಿರುವ  ಗದುಗಿನ ನಾರಾಣಪ್ಪ ಕ್ರಿ.ಶ.೧೪೩೦ರಲ್ಲಿ
ಗದಗ ಪ್ರಾಂತದ ಕೋಳಿವಾಡದಲ್ಲಿ ಜನಿಸಿದನು. ಕನ್ನಡ ಭಾರತ, ಗದುಗಿನ ಭಾರತ,
ಕುಮಾರವ್ಯಾಸ ಭಾರತ ಎಂಬ ಹೆಸರನ್ನು ಹೊಂದಿರುವ ಕರ್ಣಾಟ ಭಾರತ ಕಥಾಮಂಜರಿ
ಎಂಬ ಕಾವ್ಯವನ್ನು ಮತ್ತು ಐರಾವತ ಎಂಬ ಕೃತಿಯನ್ನು ರಚಿಸಿದ್ದಾನೆ. ಇವನಿಗೆ
ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂಬ ಬಿರುದು ಇದೆ.

೪.  ಕುವೆಂಪು.
     ಕುವೆಂಪು ಕಾವ್ಯನಾಮದಿಂದ ಪ್ರಸಿದ್ಧರಾದ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಅವರು ಕ್ರಿ.ಶ.೧೯೦೪ ಡಿಸೆಂಬರ ೨೯ ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ
ಕುಪ್ಪಳ್ಳಿಯಲ್ಲಿ ಜನಿಸಿದರು. ಇವರು ಕೊಳಲು, ಪಾಂಚಜನ್ಯ, ಪಕ್ಷಿಕಾಶಿ, ಕಾನೂರು ಹೆಗ್ಗಡತಿ,
ಮಲೆಗಳಲ್ಲಿ ಮದುಮಗಳು, ಜಲಗಾರ, ಯಮನ ಸೋಲು, ಶ್ರೀ ರಾಮಾಯಣ ದರ್ಶನಂ,
ಅಮಲನ ಕಥೆ  ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಭಾರತೀಯ ಜ್ಞಾನಪೀಠ
ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ, ಪಂಪ ಪ್ರಶಸ್ತಿ, ರಾಷ್ಟ್ರಕವಿ,
ಗೌರವ ಡಿ. ಲಿಟ್ ಲಬಿಸಿದೆ.

೫. ರನ್ನ
    ಕ್ರಿ. ಶ. ಸುಮಾರು ೯೪೯ರಲ್ಲಿ ಬಾಗಲಕೋಟೆ ಜಿಲ್ಲೆಯ ಮುದುವೊಳಲು 
ಎಂಬ ಗ್ರಾಮದಲ್ಲಿ ಜನಿಸಿದರು. ಇವರು ಸಾಹಸ ಭೀಮ ವಿಜಯ
(ಗದಾಯುದ್ಧ) ಪರಶುರಾಮಚರಿತಂ, ಅಜಿತತೀರ್ಥಂಕರ ಪುರಾಣತಿಲಕಂ
ಚಕ್ರೇಶ್ವರಚರಿತಂ  ಎಂಬ ಕಾವ್ಯವನು ಮತ್ತು ರನ್ನ ಕಂದ ಎಂಬ
ನಿಘಂಟನ್ನು ಬರೆದಿದ್ದಾರೆ. ಇವನಿಗೆ ಕವಿಚಕ್ರವರ್ತಿ ಎಂಬ ಬಿರುದು ಇದೆ.

೬.  ಲಕ್ಷ್ಮೀಶ
     ಇವನು ಕ್ರಿ. ಶ. ೧೫೫೦ ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಕಡೂರು
ತಾಲೂಕಿನ ದೇವನೂರಿನಲ್ಲಿ ಜನಿಸಿದನು.  ಇವನು ಜೈಮಿನಿ ಭಾರತ ವೆಂಬ
ಕಾವ್ಯದ ಕರ್ತೃ. ಇವನಿಗೆ ಉಪಮಾಲೋಲ, ಕರ್ಣಾಟಕವಿಚೂತವನ ಚೈತ್ರ
ಎಂಬ ಬಿರುದು ಇದೆ.

೭.  ಪಂಪ
     ಪಂಪ ಮಹಾಕವಿ ಕ್ರಿ.ಶ. ೯೦೨ ರಲ್ಲಿ ವೆಂಗಿ ಮಂಡಲದ ವೆಂಗಿಪಳು
 ಎಂಬ ಅಗ್ರಹಾರದಲ್ಲಿ ಜನಿಸಿದನು. ಇವನು ಆದಿಪುರಾಣ, ವಿಕ್ರಮಾರ್ಜುನ ವಿಜಯ
ಎಂಬ ಮಹಾಕಾವ್ಯವನ್ನು ರಚಿಸಿದ್ದಾನೆ. ಇವನಿಗೆ ಸರಸ್ವತೀ ಮಣಿಹಾರ,
ಸಂಸಾರ ಸಾರೋದಯ, ಕವಿತಾಗುಣಾರ್ಣವ ಎಂಬ ಬಿರುದು ಇದೆ.