ಕಲಿಕೆಯಲ್ಲಿ ಹಿಂದಿರುವ
ಮಕ್ಕಳು ಮತ್ತು ಎಲ್ಲಾ ಮಕ್ಕಳು ೧೯
ಅಂಕಗಳನ್ನು ಸುಲಭವಾಗಿ ಪಡೆಯಲು ಸಹಾಯಕವಾಗಿದೆ.
ಒಂದು ವಾಕ್ಯದ
ಪ್ರಶ್ನೆಗಳು, ಪದ್ಯ ಕಂಠಪಾಠ ಮತ್ತು ಕವಿಪರಿಚಯವನ್ನು
ಅಭ್ಯಾಸಮಾಡುವುದರಿಂದ
೧೯ ಅಂಕಗಳನ್ನು ಇಲ್ಲಿ ಸುಲಭವಾಗಿ
ಪಡೆಯಬಹುದು
( ಮುಂದಿನ ೨-೩ ವಾಕ್ಯ, ಸಂದರ್ಭ ಮತ್ತು ೮-೧೦ ವಾಕ್ಯದ ಪ್ರಶ್ನೆಯನ್ನು
ಮುಂದಿನ ಭಾಗದಲ್ಲಿ ಅಭ್ಯಾಸಮಾಡೋಣ)
ಒಂದು ವಾಕ್ಯದಲ್ಲಿ ಉತ್ತರಿಸಿ.
( ೯ ಅಂಕಗಳನ್ನು ಪಡೆಯಲು ಓದಬೇಕಾದ
ಪ್ರಶ್ನೆಗಳು)
೧. ರಾಹಿಲನು ಯಾರು?
ಉ: ರಾಹಿಲನು ಒಬ್ಬ ಸೇನಾ ವೈದ್ಯ ( ಡಾಕ್ಟರ್)
೨. ರಾಹಿಲನು
ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ
ಹಿಡಿದುಕೊಂಡಿದ್ದೇನು?
ಉ: ಶಸ್ತ್ರ
ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು .
೩. ಗಡಿ
ಪ್ರದೇಶದಲ್ಲಿ ’ಬ್ಲಾಕ್ ಔಟ್’ ನಿಯಮವನ್ನು ಏತಕ್ಕಾಗಿ
ಪಾಲಿಸಲಾಗುತ್ತದೆ?
ಉ:
’ಬ್ಲಾಕ್ ಔಟ್’
೪. ರಾಹಿಲನು
ಮುದುಕಿಯ ಎದುರಿಗೆ ನುಡಿದ ಗಂಭಿರವಾದ
ಮಾತು ಯಾವುದು?
ಉ:
-" ನಾನು ಯುದ್ಧ ಮಾಡುವ ಮೂರ್ಖರ ಕಡೆಯವನಲ್ಲ,
ಸಂಕಷ್ಟಕ್ಕೀಡಾದ
ಮನುಷ್ಯರ ಕಡೆಯವನು."
೫. ಯುದ್ಧದ
ಬಗೆಗೆ ಮುದುಕಿಯ ಅಭಿಪ್ರಾಯವೇನು?
ಉ:
-" ಯುದ್ಧವು ಎಲ್ಲರ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು."
೬. ಶ್ರೀರಾಮನ
ತಂದೆಯ ಹೆಸರೇನು?
ಉ:
ದಶರಥ ರಾಜ.
೭. ಶ್ರೀರಾಮನಿಗೆ
ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು?
ಉ: " ಹೂವು, ಮಧುಪರ್ಕ ಮತ್ತು ರುಚಿಕರ ಹಣ್ಣು-ಹಂಪಲುಗಳನ್ನು"
೮. ಮತಂಗಾಶ್ರಮದಲ್ಲಿ
ವಾಸವಿದ್ದ ತಪಸ್ವಿನಿ ಯಾರು?
ಉ: ಶಬರಿ.
೯. ರಾಮ-ಲಕ್ಷ್ಮಣರಿಗೆ
ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
ಉ:
ದನು ( ಕಬಂಧ)
೧೦. ’ಶಬರಿ’ ಗೀತನಾಟಕದ ಕರ್ತೃ ಯಾರು?
ಉ: ಪು. ತಿ. ನರಸಿಂಹಾಚಾರ್
೧೨. ಲಂಡನ್ನಿನ ರಸ್ತೆಗಳ ನಡುನಡುವೆ ಟ್ರಾಮ ಬಸ್ಸುಗಳು ಬಹಳ
ಹೊತ್ತ
ನಿಲ್ಲುವುದನ್ನುತಪ್ಪಿಸಲು ಮಾಡಿರುವ ವ್ಯವಸ್ಥೆಯೇನು?
ಉ:
ಭೂಗರ್ಭದಲ್ಲಿ ಗಾಡಿಯನ್ನು
ಒಯ್ಯುವ
೧೩. ಲಂಡನ್ನಿನ
ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರೇನು?
ಉ:
’ವೂಲವರ್ಥ’
೧೪. ನೆಲ್ಸನ್ ರವರ ಮೂರ್ತಿಯಿರುವ ಸ್ಥಳದ ಹೆಸರೇನು?
ಉ: ಟ್ರಾಫಲ್ಗಾರ್ ಸ್ಕ್ವೇರ್
೧೫. ’ ವೆಸ್ಟ್ ಮಿನಿಸ್ಟರ್ ಅಬೆ’ ಯಾರ ಸ್ಮಾರಕವಾಗಿದೆ?
ಉ:
ಸಂತರ, ಸಾರ್ವಭೌಮರ, ಕವಿಪುಂಗವರ ಸ್ಮಾರಕ
೧೬. ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಯಾವುದು?
ಉ:
ಚೇರಿಂಗ ಕ್ರಾಸ್
೧೭. " ವೆಸ್ಟ್ ಮಿನುಸ್ಟರ್ ಅಬೆ" ಯ ಸಂದರ್ಶನ ಎಂಬ
ವಿಷಯದ ಮೇಲೆ
ನಿಂಬಂಧಗಳನ್ನು ಬರೆದವರು ಯಾರು?
ಉ:
ಗೋಲ್ಡಸ್ಮಿತ್ ಹಾಗೂ ಎಡಿಸನ್
೧೮. ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?
ಉ:
ಕ್ರಿ.ಶ. ೧೮೯೫
೧೯. ನಾಲ್ವಡಿ ಕೃಷ್ಣರಾಜ ಪಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು?
ಉ:
ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ.
೨೦. ಏಷ್ಯಾಖಂಡದಲ್ಲಿಯೇ
ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ
ಯಾವುದು?
ಉ:
ಶಿವನ ಸಮುದ್ರ
೨೧. ಬ್ರೀಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು
ನೀಡಿ ಗೌರವಿಸಿತು?
ಉ: ’ ಸರ್ ’ ಪದವಿ
೨೨. ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು?
ಉ:
ನಾಲ್ವಡಿ ಕೃಷ್ಣರಾಜ ಒಡೆಯರು
೨೩. ವಿಶ್ವೇಶ್ವರಯ್ಯ
ಅವರ ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು
ಮಾಡಲಾಗುತ್ತದೆ?
ಉ: ’ ಎಂಜಿನಿಯರ್ಸ್ ದಿನಾಚರಣೆ’
೨೪. ಇಂದಲ್ಲ-ನಾಳೆ ಫಲ ಕೊಡುವ ಅಂಶಗಳಾವುವು?
ಉ:
ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ
೨೫. ಮನೆಮಂಚಮ್ಮ ಯಾರು?
ಉ:
ಗ್ರಾಮದೇವತೆ
೨೬. ಶಿವಾನುಭವ ಶಬ್ಧಕೋಶ ಪುಸ್ತಕ ಬರೆದವರು ಯಾರು?
ಉ: ಫ. ಗು.
ಹಳಕಟ್ಟಿ
೨೭. ವಚನಕಾರರಿಗೆ ಯಾವುದು ದೇವರಾಗಿತ್ತು?
ಉ:
ಅವರವರ ಪ್ರಜ್ಞೆಯೇ ದೇವರು
೨೮. ಅಶೋಕ ಪೈ ಅವರ ವೃತ್ತಿ ಯಾವುದು?
ಉ:
ಮನೋವೈದ್ಯರು
೨೯. ದೇವನೂರರ ’ ನನ್ನ ದೇವರು ’ಯಾರೆಂಬುದನ್ನು ಸ್ಪಷ್ಟೀಕರಿಸಿ.
ಉ:
ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು
ಇಟ್ಟರೆ ದೇವರು.
೩೦. ಭಗವದ್ಗೀತೆಯನ್ನು ರಚಿಸಿದವರು ಯಾರು?
ಉ:
ವೇದವ್ಯಾಸರು
೩೧. ಹುಲಿಗೆ ಪರಮಾನಂದವಾಗಲು
ಕಾರಣವೇನು?
ಉ: ಶಾನುಭೋಗರ
ದುಂಡುದುಂಡಾದ ಶರೀರವನ್ನು ನೋಡಿ
೩೨. ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?
ಉ:
ಹುಲಿಗೆ ತಮ್ಮ ಮುಖದರ್ಶನವಾಗದಂತೆ ತಪ್ಪಿಸಿಕೊಳ್ಳವ
ದೊಂಬರಾಟದಲ್ಲಿ ಶಾನುಭೋಗರಿಗೆ ತಲೆ ಸುತ್ತಲಾರಂಭಿಸಿತು.
೩೩. ಶಾನುಭೋಗರ ಬ್ರಹ್ಮಾಸ್ತ್ರ ಯಾವುದು?
ಉ: ಖಿರ್ದಿ ಪುಸ್ತಕ
೩೪. ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು?
ಉ: ವಿಧಿ ಆಹಾರಕ್ಕೆ ಏನನ್ನು
ಒದಗಿಸುವುದೋ ಎಂದು ಯೋಚಿಸಿತು.
೩೫. ’ವೃಕ್ಷಸಾಕ್ಷಿ’
ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ?
ಉ:
’ ಕರ್ಣಾಟಕ ಪಂಚತಂತ್ರಂ’
೩೬. ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು?
ಉ: ಹೊನ್ನಿನ
ಕಳ್ಳತನ
೩೭. ದರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು?
ಉ: " ಆಲದ ಮರವೇ ಸಾಕ್ಷಿ"
ಎಂದು ಹೇಳಿದ್ದನ್ನು ಕೇಳಿ
೩೮. ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು?
ಉ:
ದೇವರು, ಗುರುಗಳು, ವೇದಾಧ್ಯಯನ ನಿರತರನ್ನು
ಪೂಜೆ ಮಾಡುತ್ತ ಕಳೆದನು.
೩೯. ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು?
ಉ: ವೃಕ್ಷಸಾಕ್ಷಿಯನ್ನು ಕೇಳಲು
೪೦. ಸುಕುಮಾರಸ್ವಾಮಿಯ ತಂದೆತಾಯಿಗಳ ಹೆಸರೇನು?
ಉ:
ಸೂರದತ್ತ-ಯಶೋಭದ್ರೆ
೪೧. ಸುಕುಮಾರಸ್ವಾಮಿಗೆ ಯಾವ ಪಟ್ಟವನ್ನು ಕಟ್ಟಲಾಯಿತು?
ಉ: ಸೆಟ್ಟಿಯ
ಪಟ್ಟ
೪೨. ನೈಮಿತ್ತಿಕನು
ಸುಕುಮಾರಸ್ವಾಮಿಯ ಬಗ್ಗೆ ಏನು ಹೇಳಿದನು?
ಉ:
ಋಷಿಗಳನ್ನು ಕಂಡಾಗ ತಪಸ್ಸಿಗೆ ಹೊರಡುತ್ತಾನೆ.
೪೩. ಯಶೋಭದ್ರೆಯು ತನ್ನ ರತ್ನಗಂಬಳಿಗಳನ್ನು ಯಾರಿಗೆ ಕೊಟ್ಟಳು?
ಉ: ತನ್ನ ಸೊಸೆಯರಿಗೆ
೪೪. ಅರಸ ವೃಷಭಾಂಕನ ಉಂಗುರವು ಯಾವಾಗ ಕೆಳಕ್ಕೆ ಬಿದ್ದಿತು?
ಉ: ಸ್ನಾನ ಮಾಡುವಾಗ
ಪದ್ಯಭಾಗ
೪೫. ಉಆವಿದನ್ನು ಎಚ್ಚರದಲಿ ಮುನ್ನಡೆಸಬೇಕು?
ಉ:
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು
೪೬. ನದೀಜಲಗಳು ಏನಾಗಿದವೆ?
ಉ:
ಕಲುಷಿತವಾಗಿವೆ
೪೭. ಕಾಡುಮೇಡುಗಳ ಸ್ಥತಿ
ಹೇಗಿದೆ?
ಉ:
ಬರಡಾಗಿವೆ
೪೮. ಯಾವ ಎಚ್ಚರದೊಳು ಬದುಕಬೇಕಿದೆ?
ಉ:
ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದೊಳು
೪೯. ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ?
ಉ: ಎವೆ ತೆರೆದಿಕ್ಕುವ ಹೊತ್ತಿನೊಳಗೆ ಗಾವುದ
ಗಾವುದ ಗಾವುದ ಮುಂದೆ ಹಾರುತ್ತಿದೆ.
೫೦. ಹಕ್ಕಿಯ ಗರಿಯಲ್ಲಿ
ಯಾವ ಬಣ್ಣಗಳಿವೆ?
ಉ: ಬಿಳಿಹೊಳೆ
ಬಣ್ಣಗಳಿವೆ.
೫೧. ಹಕ್ಕಿಯ ಕಣ್ಣುಗಳು
ಉಆವುವು?
ಉ:
ಸೂರ್ಯ-ಚಂದ್ರರು
೫೨. ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?
ಉ:
ಸಾರ್ವಭೌಮರ ನೆತ್ತಿ
೫೩. ಹಕ್ಕಿ ಯಾರನ್ನು ಹರಸಿದೆ?
ಉ: ಹೊಸಗಾಲದ ಹಸುಮಕ್ಕಳನ್ನು
೫೩. ಹಕ್ಕಿಯು ಯಾವುದರ ಸಂಕೇತವಾಗಿದೆ?
ಉ:
ಕಾಲಪಕ್ಷಿಯ
೫೪. ಹಕ್ಕಿಯ ಚುಂಚುಗಳು ಎಲ್ಲಿಯವರೆಗೆ ಚಾಚಿವೆ?
ಉ:
ದಿಗ್ಮಂಡಲ ಅಂಚಿನ ಆಚೆಯವರೆಗೂ
೫೫. ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ಏನು?
ಉ:
ಭಾರತಿಯರು ಶಸ್ತ್ರಾಸ್ತ್ರಗಳನ್ನು ಹೊಂದುವತಿಲ್ಲ. ತಮ್ಮಲ್ಲಿರುವ ಆಯುಧವನ್ನು
ಸರ್ಕಾರಕ್ಕೆ ಒಪ್ಪಿಸಬೇಕು
೫೬. ಹಲಗಲಿಯ ನಾಲ್ವರು ಪ್ರಮುಖರು ಯಾರು?
ಉ:
ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ
೫೭. ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ?
ಉ:
ಹಲಗಲಿಯ ಬೇಡರ ಹತಾರ ಕದನ
೫೮. ಹಲಗಲಿಯ ಗುರುತು ಉಳಿಯದಂತಾದುದು ಏಕೆ?
ಉ:
ಹಲಗಲಿಯ ಮೇಲೆ ಬ್ರಿಟಿಷ್ ಸರ್ಕಾರದ ದಂಡು ದಾಳಿ ಮಾಡಿ,
ಬೆಂಕಿ ಹಚ್ಚಿದ್ದರಿಂದ
೫೯. ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ?
ಉ:
ಹಲಗಲಿಯ ಬೇಡರ ಹತಾರ ಕದನ
೬೦. ಹಲಗಲಿ ಗ್ರಾಮ ಎಲ್ಲಿದೆ?
ಉ:
ಹಲಗಲಿ ಮುಧೋಳ ಸಂಸ್ಥಾನದಲ್ಲಿ
೬೧. ಶ್ರೀಕೃಷ್ಣ ಕರ್ಣನನ್ನು
ರಥದಲ್ಲಿ ಹೇಗೆ ಕೂರಿಸಿಕೊಂಡನು?
ಉ:
ಮೈದುನತನದ ಸರಸವನ್ನು ಮಾಡಿ, ಕೈಹಿಡಿದು ಎಳೆದು
೬೨. ಕುಮಾರ ವ್ಯಾಸನ ಆರಾಧ್ಯ ದೈವ ಯಾರು?
ಉ:
ಗದುಗಿನ ವೀರನಾರಾಯಣ
೬೩. ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು ಯಾರು?
ಉ:
ನಕುಲ ಮತ್ತು ಸಹದೇವ
೬೪. ನಕುಲ ಸಹದೇವರ ತಾಯಿಯ ಹೆಸರೇನು?
ಉ: ಮಾದ್ರಿ
೬೫. ಕುಮಾರವ್ಯಾಸನಿಗೆ ಇರುವ ಬಿರುದು ಯಾವುವು?
ಉ:
’ರೂಪಕ ಸಾಮ್ರಾಜ್ಯ ಚಕ್ರವರ್ತಿ’
೬೬. ನಾರಣಪ್ಪನಿಗೆ ಕುಮಾರವ್ಯಾಸ
ಎಂಬ ಹೆಸರು ಏಕೆ ಬಂತು?
ಉ:
ವ್ಯಾಸರ ಸಂಸ್ಕೃತ ಮಹಾಭಾರತವನ್ನು ಕನ್ನಡದಲ್ಲಿ ರಚಿಸಿದನು.
೬೭. ಅಶ್ವಯುಜದ ಬತ್ತದ ಗದ್ದೆಯ ಬಣ್ಣ ಯಾವ ಹಸುರಿನಂತೆದೆ?
ಉ:
ಗಿಳಿ ಹಸುರು
೬೮. ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ?
ಉ:
ಬನದ ಅಂಚಿನಲ್ಲಿದೆ.
೬೯. ’ಹಸುರು’ ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ?
ಉ: ಅಶ್ವಯುಜ ಮಾಸದ ನವರಾತ್ರಿಯಲ್ಲಿ
ಪ್ರಕೃತಿಯಲ್ಲಿ
ಹೆಪ್ಪುಗಟ್ಟಿದ
ಹಚ್ಚಹಸುರನ್ನು ಕಂಡು
೭೦. ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೆ ಎಂದು ದುರ್ಯೋಧನ
ಯಾರಿಗೆ ಹೇಳುವನು?
ಉ: ಭೀಷ್ಮರಿಗೆ
೭೧. ದಿನಪಸುತ ಎಂದರೆ ಯಾರು?
ಉ:
ಕರ್ಣ
೭೨. ಅಂತಕಾತ್ಮಜ ಎಂದರೆ ಯಾರು?
ಉ:
ಧರ್ಮರಾಯ
೭೩. ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ
ದುರ್ಯೋಧನ ಹೇಳುತ್ತನೆ?
ಉ:
ಅರ್ಜುನ - ಭೀಮ
೭೪. ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವನು ಯಾರು?
ಉ: ದುರ್ಯೋಧನ
೭೫. ’ಜೈಮಿನಿ ಭಾರತ’ ಕಾವ್ಯವನ್ನು ಬರೆದ ಕವಿ ಯಾರು?
ಉ:
ಲಕ್ಷ್ಮೀಶ
೭೬. ಯಜ್ಞಾಶ್ವವನ್ನು ಕಟ್ಟಿದವರು ಯಾರು?
ಉ: ಲವ
೭೭. ಕುದುರಯನ್ನು ಲವನು ಯಾವುದರಿಂದ ಕಟ್ಟಿದನು?
ಉ:
ಉತ್ತರೀಯದಿಂದ
೭೮. ಮುನಿಸುತರು ಹೆದರಲು ಕಾರಣವೇನು?
ಉ: ಲವನು ಯಜ್ಞಾಶ್ವವನ್ನು ಕಟ್ಟಿ
ಹಾಕಿದ್ದರಿಂದ
೭೯. ದ್ರೋಣನು ಪರಶುರಾಮನಲ್ಲಿಗೆ ಏಕೆ ಬಂದನು?
ಉ:
ದ್ರವ್ಯಾರ್ಥಿಯಾಗಿ
೮೦. ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು?
ಉ:
ಅಶ್ವತ್ಥಾಮ
೮೧. ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುವು?
ಉ: ವಾರುಣ, ವಾಯುವ್ಯ, ಆಗ್ನೇಯ, ಪೌರಂದರಾದಿ
೮೨. ದ್ರುಪದನು ಪಡಿಯರನಿಗೆ ಏನೆಂದು ಹೇಳಿ ಕಳುಹಿಸಿದನು?
ಉ: ದ್ರೋಣನು ಯಾರೆಂದು ನಾನು ತಿಳಿಯೆನು
ಅವನನ್ನು ಹೊರಕ್ಕೆ ತಳ್ಳು
ಪೂರಕ
ಪಾಠ
೮೩. ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ?
ಉ:
ಮುಸುರೆ ತಿಕ್ಕುತ್ತಿದ್ದಾಳೆ.
೮೪. ಅಮ್ಮ ಎಲ್ಲಿ ಮಲಗಿದ್ದಾಳೆ?
ಉ:
ಗುಡಿಸಲಿನಲ್ಲಿ ಮಲಗಿದ್ಧಾಳೆ.
೮೫. ಯಾರಿಗೆ ವಸಂತಮುಖ ತೋರಲಿಲ್ಲ?
ಉ: ಕಮ್ಮಾರನಿಗೆ, ಕುಂಬಾರನಿಗೆ, ನೇಕಾರನಿಗೆ, ಕೇರಿಯಮಾರನಿಗೆ
೮೬. ಪುಟ್ಟಿಯ ಪ್ರಶ್ನೆಗಳೆನು?
ಉ:
ಗುಡಿಸಲೊಳಗೆ ಬರಲು ವಸಂತ ಹೆದರಿದನೆ?
ಹರಿದ ಚಿಂದಿ ಬಟ್ಟೆಗಳ ಕಂಡು ಅವನು ಮರುಗಿದನೆ?
೮೭. ಸರ್ವಧರ್ಮ ಸಮ್ಮೇಳನ
ಎಲ್ಲಿ ನಡೆಯಿತು?
ಉ: ಚಿಕಾಗೋದಲ್ಲಿ ೧೧-೦೯-೧೮೯೩
೮೮. ವಿವೇಕಾನಂದರನ್ನು
’ ಮಾನವತಾಮಿತ್ರ’ ರೆಂದು ಕರೆದವರಾರು?
ಉ:
ಕುವೆಂಪು
೮೯. ವಿವೇಕಾನಂದರು ಯಾವ ವ್ಯವಸ್ಥೆಯನ್ನು ವಿರೋಧಿಸುತ್ತಾರೆ?
ಉ:
ಜಾತಿ ಮತ್ತು ವರ್ಗ ವ್ಯವಸ್ಥೆ
೯೦. ಯಾರು ಶಾಪಗೊಂಡು ಮೃಗವಾಗಿದ್ದರು?
ಉ:
ಓರ್ವ ಸುಂದರ ರಾಜಕುಮಾರ
೯೧. ಬಡತನ ಸುಂದರಿ ಹಾಗೂ
ಅವಳ ತಂದೆಗೆ ಕಷ್ಟವಾಗಲ್ಲಿಲ್ಲ ಏಕೆ?
ಉ: ಅವರ ಜೀವನ ಸರಳವಾಗಿತ್ತು.
೯೨. ಜಲಿಯನ್ ವಾಲಾಭಾಗ್
ಹತ್ಯಾಕಾಂಡ ಎಂದು ನಡೆಯಿತು?
ಉ:
ಏಪ್ರಿಲ್ ೧೩ ೧೯೧೯
೯೩. ಭಗತ್ ಸಿಂಗ್ ತನ್ನ ಸಹೋದರಿಗೆ ಮಣ್ಣು ಯಾವುದರ ಪ್ರತೀಕ
ಎಂದು ತೋರಿಸುತ್ತಾನೆ?
ಉ:
ತ್ಯಾಗದ ಪ್ರತೀಕ
೯೪. ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿರುವವರು ಯಾರು?
ಉ:
ಶೂದ್ರರು ಹಾಗೂ ಅಸ್ಪೃಶ್ಯರು
೯೫. ವಿವೇಕಾನಂದರು ಮೊದಲನೆ ಆದ್ಯತೆ ಯಾವುದಕ್ಕೆ ನೀಡಬೇಕೆಂದಿದ್ಧಾರೆ?
ಉ:
ದೈಹಿಕ ಹಸಿವನ್ನು ಇಂಗಿಸುವುದಕ್ಕೆ
No comments:
Post a Comment