Search This Blog

Tuesday, January 22, 2019



 ಕಲಿಕೆಯಲ್ಲಿ ಹಿಂದಿರುವ ಮಕ್ಕಳು  ಮತ್ತು ಎಲ್ಲಾ ಮಕ್ಕಳು ೧೯
 ಅಂಕಗಳನ್ನು ಸುಲಭವಾಗಿ ಪಡೆಯಲು ಸಹಾಯಕವಾಗಿದೆ.


ಒಂದು ವಾಕ್ಯದ ಪ್ರಶ್ನೆಗಳು, ಪದ್ಯ ಕಂಠಪಾಠ ಮತ್ತು ಕವಿಪರಿಚಯವನ್ನು
ಅಭ್ಯಾಸಮಾಡುವುದರಿಂದ  ೧೯ ಅಂಕಗಳನ್ನು ಇಲ್ಲಿ ಸುಲಭವಾಗಿ
ಪಡೆಯಬಹುದು
 ( ಮುಂದಿನ ೨-೩ ವಾಕ್ಯ, ಸಂದರ್ಭ ಮತ್ತು ೮-೧೦ ವಾಕ್ಯದ ಪ್ರಶ್ನೆಯನ್ನು
 ಮುಂದಿನ ಭಾಗದಲ್ಲಿ ಅಭ್ಯಾಸಮಾಡೋಣ)

 ಒಂದು ವಾಕ್ಯದಲ್ಲಿ ಉತ್ತರಿಸಿ.
      ( ೯ ಅಂಕಗಳನ್ನು ಪಡೆಯಲು ಓದಬೇಕಾದ ಪ್ರಶ್ನೆಗಳು)
 
೧.  ರಾಹಿಲನು ಯಾರು?
          ಉ: ರಾಹಿಲನು ಒಬ್ಬ ಸೇನಾ ವೈದ್ಯ ( ಡಾಕ್ಟರ್)
  ೨.  ರಾಹಿಲನು ತುರ್ತು ಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ
       ಹಿಡಿದುಕೊಂಡಿದ್ದೇನು?
          ಉ: ಶಸ್ತ್ರ ಚಿಕಿತ್ಸಾ ಸಾಮಾನುಗಳ ಪೆಟ್ಟಿಗೆಯನ್ನು       .
  ೩.  ಗಡಿ ಪ್ರದೇಶದಲ್ಲಿ ’ಬ್ಲಾಕ್ ಔಟ್’ ನಿಯಮವನ್ನು ಏತಕ್ಕಾಗಿ
       ಪಾಲಿಸಲಾಗುತ್ತದೆ?
          ಉ:   ’ಬ್ಲಾಕ್ ಔಟ್’
  ೪.  ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭಿರವಾದ
       ಮಾತು ಯಾವುದು?
          ಉ:   -" ನಾನು ಯುದ್ಧ  ಮಾಡುವ ಮೂರ್ಖರ ಕಡೆಯವನಲ್ಲ,
                           ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು."
  ೫.  ಯುದ್ಧದ ಬಗೆಗೆ ಮುದುಕಿಯ ಅಭಿಪ್ರಾಯವೇನು?
          ಉ:  -" ಯುದ್ಧವು ಎಲ್ಲರ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು."
  ೬.  ಶ್ರೀರಾಮನ ತಂದೆಯ ಹೆಸರೇನು?
          ಉ:   ದಶರಥ ರಾಜ.
  ೭.  ಶ್ರೀರಾಮನಿಗೆ ಸಮರ್ಪಿಸಲು ಶಬರಿ ಏನನ್ನು ಸಂಗ್ರಹಿಸಿದ್ದಳು?
          ಉ:   " ಹೂವು, ಮಧುಪರ್ಕ ಮತ್ತು ರುಚಿಕರ ಹಣ್ಣು-ಹಂಪಲುಗಳನ್ನು"                                                                                                                                                                                  
   ೮.  ಮತಂಗಾಶ್ರಮದಲ್ಲಿ ವಾಸವಿದ್ದ ತಪಸ್ವಿನಿ ಯಾರು?
                ಉ:   ಶಬರಿ.
  ೯.  ರಾಮ-ಲಕ್ಷ್ಮಣರಿಗೆ ಮತಂಗಾಶ್ರಮಕ್ಕೆ ಹೋಗಲು ಸೂಚಿಸಿದವರು ಯಾರು?
         ಉ:  ದನು ( ಕಬಂಧ)
  ೧೦. ’ಶಬರಿ’ ಗೀತನಾಟಕದ ಕರ್ತೃ ಯಾರು?
          ಉಪು. ತಿ. ನರಸಿಂಹಾಚಾರ್
  ೧೨. ಲಂಡನ್ನಿನ ರಸ್ತೆಗಳ ನಡುನಡುವೆ ಟ್ರಾಮ ಬಸ್ಸುಗಳು ಬಹಳ ಹೊತ್ತ
        ನಿಲ್ಲುವುದನ್ನುತಪ್ಪಿಸಲು ಮಾಡಿರುವ ವ್ಯವಸ್ಥೆಯೇನು?
          ಉ:  ಭೂಗರ್ಭದಲ್ಲಿ ಗಾಡಿಯನ್ನು ಒಯ್ಯುವ
   ೧೩.  ಲಂಡನ್ನಿನ ಪೇಟೆಯಲ್ಲಿರುವ ಸ್ಟೇಷನರಿ ಅಂಗಡಿಯ ಹೆಸರೇನು?
          ಉ:   ’ವೂಲವರ್ಥ’
೧೪.  ನೆಲ್ಸನ್ ರವರ ಮೂರ್ತಿಯಿರುವ ಸ್ಥಳದ ಹೆಸರೇನು?
          ಉ:  ಟ್ರಾಫಲ್ಗಾರ್ ಸ್ಕ್ವೇರ್
೧೫.  ’ ವೆಸ್ಟ್ ಮಿನಿಸ್ಟರ್ ಅಬೆ’ ಯಾರ ಸ್ಮಾರಕವಾಗಿದೆ?
          ಉ:  ಸಂತರ, ಸಾರ್ವಭೌಮರ, ಕವಿಪುಂಗವರ ಸ್ಮಾರಕ
೧೬.  ಆಂಗ್ಲ ಸಾಮ್ರಾಜ್ಯದ ವೈಭವ ಕಂಡುಬರುವ ಓಣಿ ಯಾವುದು?
          ಉ:  ಚೇರಿಂಗ ಕ್ರಾಸ್
೧೭.  " ವೆಸ್ಟ್ ಮಿನುಸ್ಟರ್ ಅಬೆ" ಯ ಸಂದರ್ಶನ ಎಂಬ ವಿಷಯದ ಮೇಲೆ
       ನಿಂಬಂಧಗಳನ್ನು ಬರೆದವರು ಯಾರು?
          ಉ:  ಗೋಲ್ಡಸ್ಮಿತ್ ಹಾಗೂ ಎಡಿಸನ್
೧೮.  ನಾಲ್ವಡಿ ಕೃಷ್ಣರಾಜ ಒಡೆಯರು ಯಾವಾಗ ಪಟ್ಟಾಭಿಷಿಕ್ತರಾದರು?
          ಉ:  ಕ್ರಿ.ಶ. ೧೮೯೫
೧೯.  ನಾಲ್ವಡಿ ಕೃಷ್ಣರಾಜ ಪಡೆಯರು ಯಾವುದಕ್ಕಾಗಿ ಕಂಕಣಬದ್ಧರಾದರು?
          ಉ:  ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗಾಗಿ.
೨೦. ಏಷ್ಯಾಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲ ವಿದ್ಯುತ್ ಯೋಜನೆ
      ಯಾವುದು?
          ಉ:  ಶಿವನ ಸಮುದ್ರ
೨೧.  ಬ್ರೀಟಿಷ್ ಸರ್ಕಾರ ವಿಶ್ವೇಶ್ವರಯ್ಯ ಅವರಿಗೆ ಯಾವ ಪದವಿಯನ್ನು
       ನೀಡಿ ಗೌರವಿಸಿತು?
          ಉ:  ’ ಸರ್ ’ ಪದವಿ
೨೨.  ವಿಶ್ವೇಶ್ವರಯ್ಯ ಅವರನ್ನು ದಿವಾನರಾಗಿ ನೇಮಿಸಿದವರು ಯಾರು?
          ಉ:  ನಾಲ್ವಡಿ ಕೃಷ್ಣರಾಜ ಒಡೆಯರು
೨೩. ವಿಶ್ವೇಶ್ವರಯ್ಯ ಅವರ ಹುಟ್ಟು ಹಬ್ಬದ ನೆನಪಿಗಾಗಿ ಯಾವ ದಿನಾಚರಣೆಯನ್ನು
       ಮಾಡಲಾಗುತ್ತದೆ?
          ಉ’ ಎಂಜಿನಿಯರ್ಸ್ ದಿನಾಚರಣೆ’
೨೪.  ಇಂದಲ್ಲ-ನಾಳೆ ಫಲ ಕೊಡುವ ಅಂಶಗಳಾವುವು?
          ಉ:  ಎದೆಗೆ ಬಿದ್ದ ಅಕ್ಷರ ಭೂಮಿಗೆ ಬಿದ್ದ ಬೀಜ
೨೫.  ಮನೆಮಂಚಮ್ಮ ಯಾರು?
          ಉ:  ಗ್ರಾಮದೇವತೆ
೨೬.  ಶಿವಾನುಭವ ಶಬ್ಧಕೋಶ ಪುಸ್ತಕ ಬರೆದವರು ಯಾರು?
          ಉ: ಫ. ಗು. ಹಳಕಟ್ಟಿ
೨೭.  ವಚನಕಾರರಿಗೆ ಯಾವುದು ದೇವರಾಗಿತ್ತು?
          ಉ:  ಅವರವರ ಪ್ರಜ್ಞೆಯೇ ದೇವರು
೨೮.  ಅಶೋಕ ಪೈ ಅವರ ವೃತ್ತಿ ಯಾವುದು
          ಉ:  ಮನೋವೈದ್ಯರು
೨೯.  ದೇವನೂರರ ’ ನನ್ನ ದೇವರು ’ಯಾರೆಂಬುದನ್ನು ಸ್ಪಷ್ಟೀಕರಿಸಿ.
          ಉ:  ಚಾವಣಿ ಇಲ್ಲದ ಗುಡಿಯಲ್ಲಿ ಕಾರುಣ್ಯ ಸಮತೆಯ ಬುದ್ಧನನ್ನು
                      ಇಟ್ಟರೆ ದೇವರು.
೩೦.  ಭಗವದ್ಗೀತೆಯನ್ನು ರಚಿಸಿದವರು ಯಾರು?
          ಉ:  ವೇದವ್ಯಾಸರು
೩೧. ಹುಲಿಗೆ ಪರಮಾನಂದವಾಗಲು ಕಾರಣವೇನು?
          ಉ: ಶಾನುಭೋಗರ ದುಂಡುದುಂಡಾದ ಶರೀರವನ್ನು ನೋಡಿ
೩೨.  ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು?
          ಉ:  ಹುಲಿಗೆ ತಮ್ಮ ಮುಖದರ್ಶನವಾಗದಂತೆ ತಪ್ಪಿಸಿಕೊಳ್ಳವ
                      ದೊಂಬರಾಟದಲ್ಲಿ ಶಾನುಭೋಗರಿಗೆ ತಲೆ ಸುತ್ತಲಾರಂಭಿಸಿತು.
೩೩.  ಶಾನುಭೋಗರ ಬ್ರಹ್ಮಾಸ್ತ್ರ ಯಾವುದು?
          ಉ:  ಖಿರ್ದಿ ಪುಸ್ತಕ
೩೪.  ಹಸಿದು ಮಲಗಿದ್ದ ಹುಲಿಯು ಏನೆಂದು ಯೋಚಿಸಿತು?
          ಉ:  ವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸಿತು.
೩೫. ’ವೃಕ್ಷಸಾಕ್ಷಿ’ ಕತೆಯನ್ನು ಯಾವ ಕೃತಿಯಿಂದ ಆರಿಸಲಾಗಿದೆ?
          ಉ:  ’ ಕರ್ಣಾಟಕ ಪಂಚತಂತ್ರಂ’
೩೬.  ದುಷ್ಟಬುದ್ಧಿಯು ಧರ್ಮಬುದ್ಧಿಯ ಮೇಲೆ ಯಾವ ಆರೋಪವನ್ನು ಹೊರಿಸಿದನು?
          ಉ: ಹೊನ್ನಿನ ಕಳ್ಳತನ
೩೭.  ದರ್ಮಾಧಿಕರಣರು ಏಕೆ ವಿಸ್ಮಯ ಹೊಂದಿದರು?
          ಉ" ಆಲದ ಮರವೇ ಸಾಕ್ಷಿ" ಎಂದು ಹೇಳಿದ್ದನ್ನು ಕೇಳಿ
೩೮.  ಧರ್ಮಬುದ್ಧಿಯು ತನ್ನ ಬೆಳಗಿನ ಹೊತ್ತನ್ನು ಹೇಗೆ ಕಳೆದನು?
          ಉ:  ದೇವರು, ಗುರುಗಳು, ವೇದಾಧ್ಯಯನ ನಿರತರನ್ನು ಪೂಜೆ ಮಾಡುತ್ತ ಕಳೆದನು.
೩೯.  ಧರ್ಮಾಧಿಕರಣರು ವಟವೃಕ್ಷದ ಸಮೀಪಕ್ಕೆ ಏಕೆ ಬಂದರು?
          ಉ:  ವೃಕ್ಷಸಾಕ್ಷಿಯನ್ನು ಕೇಳಲು
೪೦.  ಸುಕುಮಾರಸ್ವಾಮಿಯ ತಂದೆತಾಯಿಗಳ ಹೆಸರೇನು?
          ಉ:  ಸೂರದತ್ತ-ಯಶೋಭದ್ರೆ
೪೧.  ಸುಕುಮಾರಸ್ವಾಮಿಗೆ ಯಾವ ಪಟ್ಟವನ್ನು ಕಟ್ಟಲಾಯಿತು?
          ಉ: ಸೆಟ್ಟಿಯ ಪಟ್ಟ
೪೨.  ನೈಮಿತ್ತಿಕನು  ಸುಕುಮಾರಸ್ವಾಮಿಯ ಬಗ್ಗೆ ಏನು ಹೇಳಿದನು?
          ಉ:  ಋಷಿಗಳನ್ನು ಕಂಡಾಗ ತಪಸ್ಸಿಗೆ ಹೊರಡುತ್ತಾನೆ.
೪೩.  ಯಶೋಭದ್ರೆಯು ತನ್ನ ರತ್ನಗಂಬಳಿಗಳನ್ನು ಯಾರಿಗೆ ಕೊಟ್ಟಳು?
          ಉ: ತನ್ನ ಸೊಸೆಯರಿಗೆ
೪೪.  ಅರಸ ವೃಷಭಾಂಕನ ಉಂಗುರವು ಯಾವಾಗ ಕೆಳಕ್ಕೆ ಬಿದ್ದಿತು?
          ಉಸ್ನಾನ ಮಾಡುವಾಗ
       
ಪದ್ಯಭಾಗ
೪೫.  ಉಆವಿದನ್ನು ಎಚ್ಚರದಲಿ ಮುನ್ನಡೆಸಬೇಕು?
          ಉ:  ಬಿರುಗಾಳಿಗೆ ಹೊಯ್ದಾಡುವ ಹಡಗನ್ನು
೪೬.  ನದೀಜಲಗಳು ಏನಾಗಿದವೆ?
          ಉ:  ಕಲುಷಿತವಾಗಿವೆ
೪೭. ಕಾಡುಮೇಡುಗಳ ಸ್ಥತಿ ಹೇಗಿದೆ?
          ಉ:  ಬರಡಾಗಿವೆ
೪೮.  ಯಾವ ಎಚ್ಚರದೊಳು ಬದುಕಬೇಕಿದೆ?
          ಉ:  ಮತಗಳೆಲ್ಲವೂ ಪಥಗಳು ಎನ್ನುವ ಹೊಸ ಎಚ್ಚರದೊಳು
೪೯.  ಹಕ್ಕಿ ಯಾವ ವೇಗದಲ್ಲಿ ಹಾರುತ್ತಿದೆ?
          ಉ: ಎವೆ ತೆರೆದಿಕ್ಕುವ ಹೊತ್ತಿನೊಳಗೆ ಗಾವುದ
                      ಗಾವುದ ಗಾವುದ ಮುಂದೆ ಹಾರುತ್ತಿದೆ.
೫೦. ಹಕ್ಕಿಯ ಗರಿಯಲ್ಲಿ ಯಾವ ಬಣ್ಣಗಳಿವೆ?
          ಉ: ಬಿಳಿಹೊಳೆ ಬಣ್ಣಗಳಿವೆ.
೫೧. ಹಕ್ಕಿಯ ಕಣ್ಣುಗಳು ಉಆವುವು?
          ಉ:  ಸೂರ್ಯ-ಚಂದ್ರರು
೫೨.  ಹಕ್ಕಿಯು ಯಾರ ನೆತ್ತಿಯನ್ನು ಕುಕ್ಕಿದೆ?
          ಉ:  ಸಾರ್ವಭೌಮರ ನೆತ್ತಿ
೫೩.  ಹಕ್ಕಿ ಯಾರನ್ನು ಹರಸಿದೆ?
          ಉ:  ಹೊಸಗಾಲದ ಹಸುಮಕ್ಕಳನ್ನು
೫೩.  ಹಕ್ಕಿಯು ಯಾವುದರ ಸಂಕೇತವಾಗಿದೆ?
          ಉ:  ಕಾಲಪಕ್ಷಿಯ
೫೪.  ಹಕ್ಕಿಯ ಚುಂಚುಗಳು ಎಲ್ಲಿಯವರೆಗೆ ಚಾಚಿವೆ?
          ಉ:  ದಿಗ್ಮಂಡಲ ಅಂಚಿನ ಆಚೆಯವರೆಗೂ
೫೫.  ಕುಂಪಣಿ ಸರ್ಕಾರ ಹೊರಡಿಸಿದ ಆದೇಶ ಏನು?
          ಉ:  ಭಾರತಿಯರು ಶಸ್ತ್ರಾಸ್ತ್ರಗಳನ್ನು ಹೊಂದುವತಿಲ್ಲ. ತಮ್ಮಲ್ಲಿರುವ ಆಯುಧವನ್ನು
                       ಸರ್ಕಾರಕ್ಕೆ ಒಪ್ಪಿಸಬೇಕು
೫೬.  ಹಲಗಲಿಯ ನಾಲ್ವರು ಪ್ರಮುಖರು ಯಾರು?
          ಉ:  ಪೂಜೇರಿ ಹನುಮ, ಬ್ಯಾಡರ ಬಾಲ, ಜಡಗ, ರಾಮ
೫೭.  ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ?
          ಉ:  ಹಲಗಲಿಯ ಬೇಡರ ಹತಾರ ಕದನ
೫೮.  ಹಲಗಲಿಯ ಗುರುತು ಉಳಿಯದಂತಾದುದು ಏಕೆ?
          ಉ:  ಹಲಗಲಿಯ ಮೇಲೆ ಬ್ರಿಟಿಷ್ ಸರ್ಕಾರದ ದಂಡು ದಾಳಿ ಮಾಡಿ,
                        ಬೆಂಕಿ ಹಚ್ಚಿದ್ದರಿಂದ
೫೯.  ಯಾವ ಘಟನೆ ಹಲಗಲಿ ಲಾವಣಿಗೆ ಕಾರಣವಾಗಿದೆ?
          ಉ:  ಹಲಗಲಿಯ ಬೇಡರ ಹತಾರ ಕದನ
೬೦.  ಹಲಗಲಿ ಗ್ರಾಮ ಎಲ್ಲಿದೆ?
          ಉ:  ಹಲಗಲಿ ಮುಧೋಳ ಸಂಸ್ಥಾನದಲ್ಲಿ
೬೧. ಶ್ರೀಕೃಷ್ಣ ಕರ್ಣನನ್ನು ರಥದಲ್ಲಿ ಹೇಗೆ ಕೂರಿಸಿಕೊಂಡನು?
          ಉ:  ಮೈದುನತನದ ಸರಸವನ್ನು ಮಾಡಿ, ಕೈಹಿಡಿದು ಎಳೆದು
೬೨.  ಕುಮಾರ ವ್ಯಾಸನ ಆರಾಧ್ಯ ದೈವ ಯಾರು?
          ಉ:  ಗದುಗಿನ ವೀರನಾರಾಯಣ
೬೩.  ಅಶ್ವಿನಿ ದೇವತೆಗಳ ವರಬಲದಿಂದ ಜನಿಸಿದವರು ಯಾರು?
          ಉ:  ನಕುಲ ಮತ್ತು ಸಹದೇವ
೬೪.  ನಕುಲ ಸಹದೇವರ ತಾಯಿಯ ಹೆಸರೇನು?
          ಉ:  ಮಾದ್ರಿ
೬೫.  ಕುಮಾರವ್ಯಾಸನಿಗೆ ಇರುವ ಬಿರುದು ಯಾವುವು?
          ಉ:  ’ರೂಪಕ ಸಾಮ್ರಾಜ್ಯ ಚಕ್ರವರ್ತಿ’
೬೬. ನಾರಣಪ್ಪನಿಗೆ ಕುಮಾರವ್ಯಾಸ ಎಂಬ ಹೆಸರು ಏಕೆ ಬಂತು?
          ಉ:  ವ್ಯಾಸರ ಸಂಸ್ಕೃತ ಮಹಾಭಾರತವನ್ನು ಕನ್ನಡದಲ್ಲಿ ರಚಿಸಿದನು.
೬೭.  ಅಶ್ವಯುಜದ ಬತ್ತದ ಗದ್ದೆಯ ಬಣ್ಣ ಯಾವ ಹಸುರಿನಂತೆದೆ?
          ಉ:  ಗಿಳಿ ಹಸುರು
೬೮.  ಕವಿಯು ನೋಡಿದ ಅಡಕೆಯ ತೋಟ ಎಲ್ಲಿದೆ?
          ಉ:  ಬನದ ಅಂಚಿನಲ್ಲಿದೆ.
೬೯.  ’ಹಸುರು’ ಎಂಬುದು ಯಾವುದನ್ನು ಕಂಡು ಪ್ರೇರಿತವಾದ ಕವನವಾಗಿದೆ?
          ಉ:  ಅಶ್ವಯುಜ ಮಾಸದ ನವರಾತ್ರಿಯಲ್ಲಿ ಪ್ರಕೃತಿಯಲ್ಲಿ
                          ಹೆಪ್ಪುಗಟ್ಟಿದ ಹಚ್ಚಹಸುರನ್ನು ಕಂಡು
೭೦.  ನಿಮಗೆ ನಮಸ್ಕರಿಸಿ ಹೋಗಲು ಬಂದೆನಷ್ಟೆ ಎಂದು ದುರ್ಯೋಧನ
       ಯಾರಿಗೆ ಹೇಳುವನು?
          ಉ: ಭೀಷ್ಮರಿಗೆ
೭೧.  ದಿನಪಸುತ ಎಂದರೆ ಯಾರು?
          ಉ:  ಕರ್ಣ
೭೨.  ಅಂತಕಾತ್ಮಜ ಎಂದರೆ ಯಾರು?
          ಉ:  ಧರ್ಮರಾಯ
೭೩.  ಯಾರಿಬ್ಬರನ್ನು ಕೊಂದ ಬಳಿಕ ಸಂಧಿ ಮಾಡಿಕೊಳ್ಳುವುದಾಗಿ
       ದುರ್ಯೋಧನ ಹೇಳುತ್ತನೆ?
          ಉ:  ಅರ್ಜುನ - ಭೀಮ
೭೪.  ಛಲವನ್ನೇ ಮೆರೆಯುವುದಾಗಿ ನಿರ್ಧರಿಸಿದವನು ಯಾರು?
          ಉ:  ದುರ್ಯೋಧನ
೭೫.  ’ಜೈಮಿನಿ ಭಾರತ’ ಕಾವ್ಯವನ್ನು ಬರೆದ ಕವಿ ಯಾರು?
          ಉ:  ಲಕ್ಷ್ಮೀಶ
೭೬.  ಯಜ್ಞಾಶ್ವವನ್ನು ಕಟ್ಟಿದವರು ಯಾರು?
          ಉ:  ಲವ
೭೭.  ಕುದುರಯನ್ನು ಲವನು ಯಾವುದರಿಂದ ಕಟ್ಟಿದನು?
          ಉ:  ಉತ್ತರೀಯದಿಂದ
೭೮.  ಮುನಿಸುತರು ಹೆದರಲು ಕಾರಣವೇನು?
          ಉ:  ಲವನು ಯಜ್ಞಾಶ್ವವನ್ನು ಕಟ್ಟಿ ಹಾಕಿದ್ದರಿಂದ
೭೯.  ದ್ರೋಣನು ಪರಶುರಾಮನಲ್ಲಿಗೆ ಏಕೆ ಬಂದನು?
          ಉ:  ದ್ರವ್ಯಾರ್ಥಿಯಾಗಿ
೮೦.  ದ್ರೋಣನು ಯಾರೊಡನೆ ಪರಶುರಾಮನ ಬಳಿಗೆ ಬಂದನು?
          ಉ:  ಅಶ್ವತ್ಥಾಮ
೮೧.  ಪರಶುರಾಮನು ದ್ರೋಣನಿಗೆ ಕೊಟ್ಟ ಪ್ರಧಾನ ಅಸ್ತ್ರಗಳು ಯಾವುವು?
          ಉವಾರುಣ, ವಾಯುವ್ಯ, ಆಗ್ನೇಯ, ಪೌರಂದರಾದಿ
೮೨.  ದ್ರುಪದನು ಪಡಿಯರನಿಗೆ ಏನೆಂದು ಹೇಳಿ ಕಳುಹಿಸಿದನು?
          ಉ:  ದ್ರೋಣನು ಯಾರೆಂದು ನಾನು ತಿಳಿಯೆನು ಅವನನ್ನು ಹೊರಕ್ಕೆ ತಳ್ಳು

ಪೂರಕ ಪಾಠ
೮೩.  ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ?
          ಉ:  ಮುಸುರೆ ತಿಕ್ಕುತ್ತಿದ್ದಾಳೆ.
೮೪.  ಅಮ್ಮ ಎಲ್ಲಿ ಮಲಗಿದ್ದಾಳೆ?
          ಉ:  ಗುಡಿಸಲಿನಲ್ಲಿ ಮಲಗಿದ್ಧಾಳೆ.
೮೫.  ಯಾರಿಗೆ ವಸಂತಮುಖ ತೋರಲಿಲ್ಲ?
          ಉ: ಕಮ್ಮಾರನಿಗೆ, ಕುಂಬಾರನಿಗೆ, ನೇಕಾರನಿಗೆ, ಕೇರಿಯಮಾರನಿಗೆ
೮೬.  ಪುಟ್ಟಿಯ ಪ್ರಶ್ನೆಗಳೆನು?
          ಉ:  ಗುಡಿಸಲೊಳಗೆ ಬರಲು ವಸಂತ ಹೆದರಿದನೆ?
                      ಹರಿದ ಚಿಂದಿ ಬಟ್ಟೆಗಳ ಕಂಡು ಅವನು ಮರುಗಿದನೆ?
೮೭. ಸರ್ವಧರ್ಮ ಸಮ್ಮೇಳನ ಎಲ್ಲಿ ನಡೆಯಿತು?
          ಉ: ಚಿಕಾಗೋದಲ್ಲಿ  ೧೧-೦೯-೧೮೯೩
೮೮. ವಿವೇಕಾನಂದರನ್ನು ’ ಮಾನವತಾಮಿತ್ರ’ ರೆಂದು ಕರೆದವರಾರು?
          ಉ:  ಕುವೆಂಪು
೮೯.  ವಿವೇಕಾನಂದರು ಯಾವ ವ್ಯವಸ್ಥೆಯನ್ನು ವಿರೋಧಿಸುತ್ತಾರೆ?
          ಉ:  ಜಾತಿ ಮತ್ತು ವರ್ಗ ವ್ಯವಸ್ಥೆ
೯೦.  ಯಾರು ಶಾಪಗೊಂಡು ಮೃಗವಾಗಿದ್ದರು?
          ಉ:  ಓರ್ವ ಸುಂದರ ರಾಜಕುಮಾರ
೯೧. ಬಡತನ ಸುಂದರಿ ಹಾಗೂ ಅವಳ ತಂದೆಗೆ ಕಷ್ಟವಾಗಲ್ಲಿಲ್ಲ ಏಕೆ?
          ಉ:  ಅವರ ಜೀವನ ಸರಳವಾಗಿತ್ತು.
೯೨. ಜಲಿಯನ್ ವಾಲಾಭಾಗ್ ಹತ್ಯಾಕಾಂಡ ಎಂದು ನಡೆಯಿತು?
          ಉ:  ಏಪ್ರಿಲ್ ೧೩ ೧೯೧೯
೯೩.  ಭಗತ್ ಸಿಂಗ್ ತನ್ನ ಸಹೋದರಿಗೆ ಮಣ್ಣು ಯಾವುದರ ಪ್ರತೀಕ
       ಎಂದು ತೋರಿಸುತ್ತಾನೆ?
          ಉ:  ತ್ಯಾಗದ ಪ್ರತೀಕ
೯೪.  ಜಾತಿ ವ್ಯವಸ್ಥೆಯ ಕ್ರೌರ್ಯಕ್ಕೆ ತುತ್ತಾಗಿರುವವರು ಯಾರು?
          ಉ:  ಶೂದ್ರರು ಹಾಗೂ ಅಸ್ಪೃಶ್ಯರು
೯೫.  ವಿವೇಕಾನಂದರು ಮೊದಲನೆ ಆದ್ಯತೆ ಯಾವುದಕ್ಕೆ ನೀಡಬೇಕೆಂದಿದ್ಧಾರೆ?
          ಉ:  ದೈಹಿಕ ಹಸಿವನ್ನು ಇಂಗಿಸುವುದಕ್ಕೆ















 

No comments:

Post a Comment