೧೦ನೆ ತರಗತಿಯ
ಪದ್ಯಭಾಗ- ಕಂಠಪಾಠ
ಪದ್ಯಕಂಠ ಪಾಠವನ್ನು ಮಾಡಿದ ಮೇಲೆ ಮರೆತು ಹೋಗದಂತೆ ಪ್ರತಿ ಪದ್ಯದ
ಚಿತ್ರವನ್ನು ನೆನಪಿಟ್ಟು ಕೊ0ಡರೆ
ಈ ಪದ್ಯ ಯಾವುದು ಎಂದು ತಿಳಿಯಲು ಸುಲಭಮಾರ್ಗ. ಇದು ಕಲಿಕೆಯಲ್ಲಿ
ಹಿಂದುಳಿದ ಮಕ್ಕಳಿಗೆ ಬಹಳ ಸಹಕಾರಿ.
೧. ಸಂಕಲ್ಪಗೀತೆ. ಕವಿ -ಜಿ.ಎಸ್.ಶಿವರುದ್ರಪ್ಪ
ಕಲುಷಿತವಾದೀ ನದೀಜಲಗಳಿಗೆ
ಮುಂಗಾರಿನ ಮಳೆಯಾಗೋಣ.
ಬರಡಾಗಿರುವೀ ಕಾಡುಮೇಡುಗಳ
ವಂಸತವಾಗುತ ಮುಟ್ಟೋಣ.
ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ-ಸಂಶಯದಳು ಕಂದಿದ ಕಣ್ಣೊಳು
ನಾಳಿನ ಕನಸನು ಬಿತ್ತೋಣ.
೨. ಹಕ್ಕಿ ಹಾರುತಿದೆ ನೋಡಿದಿರಾ. ಕವಿ- ದ.ರಾ.ಬೇಂದ್ರೆ
ನೀಲಮೇಘಮಂಡಲ-ಸಮ ಬಣ್ಣ
ಮುಗಿಲಿಗೆ ರೆಕ್ಕೆಗಳೊಡೆದವೊ ಅಣ್ಣಾ
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?
ಚಿಕ್ಕೆಯ ಮಾಲೆಯ ಸೆಕ್ಕಿಸಿಕೊಂಡು
ಸೂರ್ಯ-ಚಂದ್ರರನು ಮಾಡಿದೆ ಕಣ್ಣಾ
ಹಕ್ಕಿ ಹಾರುತಿದೆ ನೋಡಿದಿರಾ?
ಯುಗ-ಯುಗಗಳ ಹಣೆ ಬರೆಹವ ಒರಸಿ
ಮನ್ವಂತರಗಳ ಭಾಗ್ಯವ ತೆರೆಸಿ
ರೆಕ್ಕೆಯ ಬೀಸುತ
ಚೇತನಗೊಳಿಸಿ
ಹೊಸಗಾಲದ ಹಸುಮಕ್ಕಳ ಹರಸಿ
ಹಕ್ಕಿ ಹಾರುತಿದೆ ನೋಡಿದಿರಾ?
೩. ಹಲಗಲಿ ಬೇಡರು. - ಜನಪದ
ಕೊಡಲಿ ಕೋರೆ ಕುಡ
ಕಬ್ಬಿಣ ಮೊಸರು ಬೆಣ್ಣೆ ಹಾಲಾ
ಉಪ್ಪು ಎಣ್ಣೆ
ಅರಿಸಿಣ ಜೀರಗಿ ಅಕ್ಕಿ ಸಕ್ಕಾರಿ ಬೆಲ್ಲಾ
ಗಂಗಳ ಚೆರಗಿ ಮಂಗಳ
ಸೂತ್ರ ಹೋದವು ಬೀಸುಕಲ್ಲಾ
ಹಾಳಾಗಿ ಹೋಯಿತು
ಅತ್ತು ವರ್ಣಿಸಿ ಹೇಳಲಿ ನಾನೆಷ್ಟಾ
ಸಿಕ್ಕದ್ದು ತಗೊಂಡು
ಸರದ ನಿಂತರೊ ಊರಿಗೆ ಕೊಳ್ಳಿ ಕೊಟ್ಟಾ
ಬೂದಿ ಮಾಡ್ಯಾರೊ ಹಲಗಲಿ ಸುಟ್ಟು
ಗುರ್ತುಳಿಯಲಿಲ್ಲೆಳ್ಳಷ್ಟು
ಕಾಣದೆ
ಹೋಯಿತೊ ಕೆಟ್ಟು ವರ್ಣಿಸಿ ಹೇಳಿದೆ ಕಂಡಷ್ಟು
ಕುರ್ತುಕೋಟಿ ಕಲ್ಮೇಶನ ದಯದಿಂದ ಹಾಡಿದೆನಣ್ಣಾ ಜನಕಾ
೪. ಕೌರವೇಂದ್ರನ ಕೊಂದೆ
ನೀನು ಕವಿ- ಕುವಾರವ್ಯಾಸ
ಕೊರಳ ಸೆರೆ
ಹಿಗ್ಗಿದವು ದೃಗುಜಲ
ಉರವಣಿಸಿ ಕಡು
ನೊಂದನಕಟಾ
ಕುರುಪತಿಗೆ
ಕೇಡಾದುದೆಂದನು ತನ್ನ ಮನದೊಳಗೆ
ಹರಿಯ ಹಗೆ
ಹೊಗೆದೋರದುರುಹದೆ
ಬರಿದೆ ಹೋಹುದೆ ತನ್ನ
ವಂಶವ
ನರುಹಿ ಕೊಂದನು ಹಲವು
ಮಾತೇನೆಂದು ಚಿಂತಿಸಿದ
ಮಾರಿಗೌತಣವಾಯ್ತು ನಾಳಿನ
ಭಾರತವು ಚದುರಂಗ ಬಲದಲಿ
ಕೌರವನ ಋಣ ಹಿಂಗೆ ರಣದಲಿ ಸುಭಟಕೋಟಿಯನು
ತೀರಿಸಿಯೆ ಪತಿಯವಸರಕ್ಕೆ ಶ
ರೀರವನು ನೂಕುವೆನು ನಿನ್ನಯ
ವೀರರೈವರ ನೋಯಿಸೆನು ರಾಜೀವಸಖನಾಣೆ
೫. ಹಸುರು ಕವಿ- ಕುವೆಂಪು
ಹಸುರಾಗಸ: ಹಸುರು ಮುಗಿಲು: ,
ಹಸುರು ಗದ್ದೆಯಾ ಬಯಲು
ಹಸುರಿನ ಮಲೆ: ಹಸುರು ಕಣಿವೆ:
ಹಸುರು ಸಂಜೆಯೀ ಬಿಸಿಲೂ!
ಹೊಸ ಹೂವಿನ ಕಂಪು ಹಸುರು,
ಎಲರಿನ
ತಂಪೂ ಹಸುರು!
ಹಕ್ಕಿಯ ಕೊರಲಿಂಪು ಹಸುರು!
ಹಸುರು
ಹಸುರಿಳೆಯುಸಿರೂ!
೬ ಛಲಮನೆ ಮೆ¾Éವೆಂ ಕವಿ - ರನ್ನ
ನೆಲಕಿ¾Âವೆನೆಂದು
ಬಗೆದಿರೆ |
ಚಲಕಿ¾Âವೆಂ ಪಾಂಡುಸುತರೊಳೀನೆಲನಿದು ಪಾ||
¿ßÉಲನೆನಗೆ ದಿನಪಸುತನಂ |
ಕೊಲಿಸಿದ ನೆಲನೊಡನೆ
ಮತ್ತೆ ಪುದುವಾ¿Ýಪೆನೇ ||
ಪುಟ್ಟಿದ ನೂರ್ವರುಮೆನ್ನೊಡ |
ವುಟ್ಟಿದ
ನೂರ್ವರುಮಿದಿರ್ಚಿ ಸತ್ತೊಡೆ ಕೋಪಂ ||
ಪುಟ್ಟಿ ಪೊದ¿ÄÝದು ಸತ್ತರ್
ಪುಟ್ಟರೆ ಪಾಂಡವರೊಳಿ¾Âದು ಛಲಮನೆ ಮೆ¾Éವೆಂ ||
೭. ವೀರಲವ ಕವಿ-
ಲಕ್ಷ್ಮೀಶ
ಉರ್ವಿಯೊಳ್ ಕೌಸಲ್ಯೆ
ಪಡೆದ ಕುವರಂ ರಾಮ |
ನೊರ್ವನೇ ವೀರನಾತನ ಯಜ್ಞತುರಗಮಿದು |
ನಿರ್ವಹಿಸಲಾರ್ಪರಾರಾದೊಡಂ
ತಡೆಯಲೆಂದಿರ್ದ ಲೇಖನವನೋದಿ |
ಗರ್ವಮಂ
ಬಿಡಿಸದಿರ್ದೊಡೆ ತನ್ನ ಮಾತೆಯಂ |
ಸರ್ವಜನಮುಂ
ಬಂಜೆಯೆನ್ನದಿರ್ದಪುದೆ ತನ |
ಗುರ್ವತೋಳ್ಗಳೀವೇತಕೆಂದು
ಸಲೆ ವಾಸಿಯಂ ತೊಟ್ಟು ಲವನುರಿದೆದ್ದನು ||
ತೆಗೆದುತ್ತರೀಯಮಂ ಮುರಿದು ಕುದುರೆಯ ಗಳಕೆ |
ಬಿಗಿದು ಕದಳೀದ್ರುಮಕೆ ಕಟ್ಟಲ್ಕೆ ಮುನಿಸುತರ್ |
ನಗಡುತನದಿಂದ ಬಿಲ್ದಿರುವನೇರಿಸಿ ತೀಡಿ ಜೇಗೈದು ನಿಂತಿರ್ದನು ||
ನಗುತೆ ಪಾರ್ವರ ಮಕ್ಕಳಂಜಿದೊಡೆ ಜಾನಕಿಯ |
ಮಗನಿದಕೆ ಬೆದರುವೆನೆ ಪೋಗಿ ನೀವೆಂದು ಲವ |
ಮಿಗೆ ನಡುಗಿ ಬೇಡಬೇಡರಸುಗಳ ವಾಜಿಯಂ ಬಿಡು ಬಡಿವರೆಮ್ಮನೆನಲು |
೮. ಕೆಮ್ಮನೆ ಮೀಸೆವೊತ್ತೆನೇ ಕವಿ - ಪಂಪ
ಅಂತೆಂಬನಾರ್ಗೆ ಪಿರಿದುಂ
ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ
¿ÉAತೆನಗೆ ಕೆಳೆಯನೇ ನೂಂ
ಕಂತಪ್ಪನನ¾ÂÂಯೆನೆಂದು ಸಭೆಯೊಳ್ ನುಡಿದಂ ||
ಒಡವೆಯನರ್ಥಿಗೆತ್ತೆನವನೀತಳಮಂ ಗುರುಗಿತ್ತೆನೀಗಳೊಂ
ದಡಕೆಯುಮಿಲ್ಲ ಕೈಯೊಳೆರೆದಂ ಶ್ರುತಪಾರಗನೆಂತು ಸಂತಸಂ
ಬಡಿಸುವೆನಿನ್ನಿದೊಂದು ಧನುವಿರ್ದುದು ದಿವ್ಯಶರಾಳಿಯಿರ್ದುದಿ
ಲ್ಲೊಡಮೆ ಸಮಂತು ಪೇ¿ವರೊಳಾವುದನೀವುದೊ
ಕುಂಭಸಂಭವ ||
It is soo beneficial to us miss..tq
ReplyDelete